ಆ್ಯಪ್ನಗರ

ಇಂದು ಮೈಸೂರಿನಲ್ಲಿ ಬಿಎಸ್ಪಿ rally

ಚಾಮರಾಜನಗರ, ಮೈಸೂರು ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಮೈಸೂರಿನಲ್ಲಿ ಏ.10ರಂದು ಪಕ್ಷದ ರಾಷ್ಟ್ರಾಧ್ಯಕ್ಷೆ ಮಾಯಾವತಿ ನೇತೃತ್ವದಲ್ಲಿ ಬೃಹತ್‌ ಪ್ರಚಾರ ಸಭೆ ಆಯೋಜಿಸಿದ್ದು, ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು ಆಗಮಿಸಿ ಪಕ್ಷ ಕ್ಕೆ ಶಕ್ತಿ ತುಂಬಬೇಕು ಎಂದು ರಾಜ್ಯ ಬಿಎಸ್‌ಪಿ ಪ್ರಧಾನ ಕಾರ್ಯದರ್ಶಿ ಡಾ.ಕೃಷ್ಣಮೂರ್ತಿ ಮನವಿ ಮಾಡಿದರು.

Vijaya Karnataka 10 Apr 2019, 5:00 am
ಕೆ.ಆರ್‌.ಪೇಟೆ: ಚಾಮರಾಜನಗರ, ಮೈಸೂರು ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಮೈಸೂರಿನಲ್ಲಿ ಏ.10ರಂದು ಪಕ್ಷದ ರಾಷ್ಟ್ರಾಧ್ಯಕ್ಷೆ ಮಾಯಾವತಿ ನೇತೃತ್ವದಲ್ಲಿ ಬೃಹತ್‌ ಪ್ರಚಾರ ಸಭೆ ಆಯೋಜಿಸಿದ್ದು, ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು ಆಗಮಿಸಿ ಪಕ್ಷ ಕ್ಕೆ ಶಕ್ತಿ ತುಂಬಬೇಕು ಎಂದು ರಾಜ್ಯ ಬಿಎಸ್‌ಪಿ ಪ್ರಧಾನ ಕಾರ್ಯದರ್ಶಿ ಡಾ.ಕೃಷ್ಣಮೂರ್ತಿ ಮನವಿ ಮಾಡಿದರು.
Vijaya Karnataka Web today bsp rally at mysuru
ಇಂದು ಮೈಸೂರಿನಲ್ಲಿ ಬಿಎಸ್ಪಿ rally


ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ''ವಂಶಪಾರಂಪರ್ಯ ಆಡಳಿತ ನಡೆಸಲು ಮುಂದಾಗಿರುವ ಜೆಡಿಎಸ್‌ ಹಾಗೂ ಕೋಮುವಾದಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯನ್ನು ಮಂಡ್ಯ ಜಿಲ್ಲೆಯ ಪ್ರಬುದ್ಧ ಮತದಾರರು ತಿರಸ್ಕರಿಸಿ ಬಹುಜನರ ಹಿತವನ್ನು ಕಾಯಲು ಬದ್ಧವಾಗಿರುವ ಬಿಎಸ್‌ಪಿ ಅಭ್ಯರ್ಥಿ ನಂಜುಂಡಸ್ವಾಮಿ ಅವರನ್ನು ಗೆಲ್ಲಿಸಬೇಕು,'' ಎಂದರು.

''ತಮ್ಮ ಮಗನನ್ನು ಚಿಕ್ಕ ವಯಸ್ಸಿನಲ್ಲಿಯೇ ಲೋಕಸಭಾ ಸದಸ್ಯನನ್ನಾಗಿ ಮಾಡಲು ಹೊರಟಿರುವ ಸಿಎಂ ಕುಮಾರಸ್ವಾಮಿ ಅವರಿಗೆ ಜಿಲ್ಲೆಯ ಜನರು ತಕ್ಕ ಉತ್ತರ ನೀಡಬೇಕು. ಜತೆಗೆ ಪತಿಯ ಅನುಕಂಪವನ್ನು ಲಾಭಮಾಡಿಕೊಳ್ಳಲು ಬಂದಿರುವ ಸುಮಲತಾ ಅವರನ್ನೂ ಜಿಲ್ಲೆಯ ಪ್ರಬುದ್ಧ ಮತದಾರರು ತಿರಸ್ಕರಿಸಬೇಕು. ದೇಶದ ಹಿತದೃಷ್ಟಿಯಿಂದ ಅಕ್ಕಾ ಮಾಯಾವತಿ ಅವರ ನೇತೃತ್ವದ ಬಿಎಸ್‌ಪಿ ಪಕ್ಷ ವು ಕೇಂದ್ರದಲ್ಲಿ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಆದ್ದರಿಂದ ಆನೆಯ ಗುರುತನ್ನು ಹೊಂದಿರುವ ನಂಜುಂಡಸ್ವಾಮಿ ಅವರಿಗೆ ಮತ ನೀಡಬೇಕು,'' ಎಂದು ಮನವಿ ಮಾಡಿದರು.

ಜಿಲ್ಲಾ ಬಿಎಸ್‌ಪಿ ಅಧ್ಯಕ್ಷ ಚೆಲುವರಾಜು, ಕೃಷ್ಣರಾಜಪೇಟೆ ತಾಲೂಕು ಉಸ್ತುವಾರಿ ಹರಿಹರಪುರ ಶಿವಕುಮಾರ್‌, ಮುಖಂಡರಾದ ಬಸ್ತಿ ಪ್ರದೀಪ, ಲೋಕೇಶ್‌, ಯೋಗೇಶ್‌, ಮನುಕುಮಾರ್‌, ಹರೀಶ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ