ಶ್ರೀರಂಗಪಟ್ಟಣ: ಹೊಸ ವರ್ಷ ಆಚರಣೆ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಪ್ರಮುಖ ಪ್ರವಾಸಿ ತಾಣಗಳಿಗೆ ಡಿ.31 ಹಾಗೂ ಜ.1 ರಂದು ಎರಡು ದಿನ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ತಹಸೀಲ್ದಾರ್ ಡಿ.ನಾಗೇಶ್ ಆದೇಶ ಹೊರಡಿಸಿದ್ದಾರೆ.
ಪ್ರವಾಸಿ ತಾಣಗಳಾದ ಬಲಮುರಿ, ಎಡಮುರಿ, ಕೃಷ್ಣರಾಜ ಸಾಗರ, ಕೆಆರ್ಎಸ್ ಹಿನ್ನೀರು, ಹಿನ್ನೀರು ಪ್ರದೇಶದಲ್ಲಿರುವ ವೇಣುಗೋಪಾಲ ಸ್ವಾಮಿ ದೇವಾಲಯ, ಮಂಡ್ಯಕೊಪ್ಪಲು ಕಾವೇರಿ ಬೋರೇದೇವರ ಬಳಿ ಇರುವ ರಾಜಪರಮೇಶ್ವರಿ ಮತ್ತು ರಾಮಸ್ವಾಮಿ ನಾಲೆ ಒಡ್ಡು, ಕಾವೇರಿ ನದಿ ತೀರ ಕರಿಘಟ್ಟ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪ್ರಮುಖ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರು, ಪಾನಮತ್ತನಾಗಿ ನೀರಿನಲ್ಲಿ ಈಜಾಡುವುದು, ಕರಿಘಟ್ಟ ಬೆಟ್ಟದಲ್ಲಿ ಮದ್ಯಪಾನ ಮಾಡಿ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುವುದು, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವುದನ್ನು ತಪ್ಪಿಸುವ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಎರಡು ದಿನ ಪ್ರವೇಶಾವಕಾಶ ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವಾಸಿ ತಾಣಗಳಾದ ಬಲಮುರಿ, ಎಡಮುರಿ, ಕೃಷ್ಣರಾಜ ಸಾಗರ, ಕೆಆರ್ಎಸ್ ಹಿನ್ನೀರು, ಹಿನ್ನೀರು ಪ್ರದೇಶದಲ್ಲಿರುವ ವೇಣುಗೋಪಾಲ ಸ್ವಾಮಿ ದೇವಾಲಯ, ಮಂಡ್ಯಕೊಪ್ಪಲು ಕಾವೇರಿ ಬೋರೇದೇವರ ಬಳಿ ಇರುವ ರಾಜಪರಮೇಶ್ವರಿ ಮತ್ತು ರಾಮಸ್ವಾಮಿ ನಾಲೆ ಒಡ್ಡು, ಕಾವೇರಿ ನದಿ ತೀರ ಕರಿಘಟ್ಟ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪ್ರಮುಖ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರು, ಪಾನಮತ್ತನಾಗಿ ನೀರಿನಲ್ಲಿ ಈಜಾಡುವುದು, ಕರಿಘಟ್ಟ ಬೆಟ್ಟದಲ್ಲಿ ಮದ್ಯಪಾನ ಮಾಡಿ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುವುದು, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವುದನ್ನು ತಪ್ಪಿಸುವ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಎರಡು ದಿನ ಪ್ರವೇಶಾವಕಾಶ ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.