ಆ್ಯಪ್ನಗರ

ನೀರಿನ ಸಂರಕ್ಷಣೆಗೆ ಎಲ್ಲರೂ ಒಟ್ಟಾಗಿ

ಜಲ ಸಂರಕ್ಷಣೆ ಎಲ್ಲರ ಒಂದಾದರೆ ಮಾತ್ರ ನೀರಿಗೆ ಉಂಟಾಗುವ ಹಾಹಾಕಾರ ನೀಗಿಸಬಹುದು.ಇಲ್ಲವಾದರೆ ಹನಿ ನೀರಿಗೂ ಪರದಾಡಬೇಕಾಗುತ್ತದೆ ಎಂದು ಪಂಚಾಯಿತಿ ಅಭಿವದ್ಧಿ ಅಧಿಕಾರಿ ಮುಜಾವರ್ ತಿಳಿಸಿದರು.

Vijaya Karnataka Web 1 Jun 2016, 5:15 am
ಭಾರತೀನಗರ: ಜಲ ಸಂರಕ್ಷಣೆ ಎಲ್ಲರ ಒಂದಾದರೆ ಮಾತ್ರ ನೀರಿಗೆ ಉಂಟಾಗುವ ಹಾಹಾಕಾರ ನೀಗಿಸಬಹುದು.ಇಲ್ಲವಾದರೆ ಹನಿ ನೀರಿಗೂ ಪರದಾಡಬೇಕಾಗುತ್ತದೆ ಎಂದು ಪಂಚಾಯಿತಿ ಅಭಿವದ್ಧಿ ಅಧಿಕಾರಿ ಮುಜಾವರ್ ತಿಳಿಸಿದರು.
Vijaya Karnataka Web together water conservation
ನೀರಿನ ಸಂರಕ್ಷಣೆಗೆ ಎಲ್ಲರೂ ಒಟ್ಟಾಗಿ


ಗ್ರಾಮ ಪಂಚಾಯಿತಿ ಆವರಣದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತರಿ ಯೋಜನೆಯ 2016-17ನೇ ಸಾಲಿನ ಮೊದಲನೇ ಹಂತದ ಸಾಮಾಜಿಕ ಲೆಕ್ಕ ಪರಿಶೋಧನೆ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗಾಗಲೇ ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ನೀರಿನ ಮೌಲ್ಯ ಬಗೆ ತಿಳಿಯಬೇಕೆಂದರೆ ಉತ್ತರ ಕರ್ನಾಟಕದ ಹಳ್ಳಿಗಳಿಗೆ ಹೋಗಬೇಕು. ಪ್ರಸ್ತುತ ದಿನದಲ್ಲಿ 1 ಲೀಟರ್ ಹಾಲಿನ ದರಕ್ಕೆ 1 ಲೀಟರ್ ನೀರಿನ ಬಾಟಲ್ ಸಿಗುತ್ತಿದೆ. ಇದನ್ನು ನಾವು ಚಿಂತಿಸಬೇಕು. ನೀರಿನ ಮೌಲ್ಯದ ಬಗ್ಗೆ ಅರಿತುಕೊಂಡಾಗ ಮಾತ್ರ ನೀರನ್ನು ಹೇಗೆ ಸದ್ಬಳಕೆ ಮಾಡಬೇಕು ಎಂದು ಅರಿವಾ ಗುತ್ತದೆ. ಕೇಂದ್ರ ಸರಕಾರ ರೂಪಿಸಿರುವ ಉದ್ಯೋಗ ಖಾತರಿ ಯೋಜನೆಯಡಿ ಹಲವಾರು ಕಾಮಗಾರಿ ಗಳನ್ನು ಮಾಡಬಹುದು. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ತಾಲೂಕು ಸಂಯೋಜನಾಧಿಕಾರಿ ಸೀಮಾ ಮಾತನಾಡಿ, ಗ್ರಾಪಂನಲ್ಲಿ ನಡೆಯುವ ಕಾಮಗಾರಿಗಳೊಂದಿಗೆ ತಮ್ಮ ವೈಯುಕ್ತಿಕ ಕಾಮಗಾರಿಯನ್ನು ಉದ್ಯೋಗ ಖಾತರಿ ಯೋಜನೆಯಡಿ ಮಾಡಬಹುದಾಗಿದೆ. ಇದರಿಂದ ಗ್ರಾಮವನ್ನು ಅಭಿವದ್ಧಿ ಪಡಿಸಬಹುದು ಎಂದರು.

ನೋಡಲ್ ಅಧಿಕಾರಿ ಮಂಜುನಾಥ್‌ನಾಯ್ಡು ಮಾತನಾಡಿ, ಗ್ರಾಪಂಗಳಲ್ಲಿ ನಡೆಯುವ ಕಾಮ ಗಾರಿಗಳ ಲೆಕ್ಕಗಳಲ್ಲಿ ಲೋಪವಿದ್ದರೆ ಅರ್ಜಿ ಸಲ್ಲಿಸಬಹುದು. ಇದರ ಬಗ್ಗೆ ತನಿಖೆ ಕೈಗೊಳ್ಳಲಾಗುವುದು ಎಂದು ಹೇಳಿದರು.

ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಿದೇವಮ್ಮ,ಉಪಾಧ್ಯಕ್ಷ ದೊರೆ, ಅರಣ್ಯ ಇಲಾಖೆ ಅಧಿಕಾರಿ ರವಿ, ಸಹಾಯಕ ಎಂಜಿನಿಯರ್ ಶ್ರೀರಾಜು, ಕಾರ್ಯ ದರ್ಶಿ ಕೆಂಪೇಗೌಡ, ನಿಂಗಯ್ಯ, ಗ್ರಾ.ಪಂ ಸದಸ್ಯರು ಮತ್ತು ಲೆಕ್ಕಪರಿಶೋಧನಾ ಅಧಿಕಾರಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ