ಆ್ಯಪ್ನಗರ

ಗಂಡು ಮೆಟ್ಟಿದ ಮಂಡ್ಯದಲ್ಲಿ ಅಳುವ ಕಾರ‍್ಯಕ್ರಮ!

ಕಣ್ಣೀರಿನ ಬಗ್ಗೆ ನೆಟ್ಟಿಗರ ವ್ಯಂಗ್ಯ ವಿಕ ಸುದ್ದಿಲೋಕ ಮಂಡ್ಯ ಕಣ್ಣೀರಿನ ರಾಜಕೀಯದ ಬಗ್ಗೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್‌ಗಳು ಜೆಡಿಎಸ್‌ ನಾಯಕರನ್ನು ...

Vijaya Karnataka 15 Mar 2019, 8:29 pm
ಮಂಡ್ಯ: ಕಣ್ಣೀರಿನ ರಾಜಕೀಯದ ಬಗ್ಗೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್‌ಗಳು ಜೆಡಿಎಸ್‌ ನಾಯಕರನ್ನು ಅಣಕಿಸುತ್ತಿವೆ.
Vijaya Karnataka Web troll about jds leaders and cm hd kumaraswamy in around mandya
ಗಂಡು ಮೆಟ್ಟಿದ ಮಂಡ್ಯದಲ್ಲಿ ಅಳುವ ಕಾರ‍್ಯಕ್ರಮ!


ಫೇಸ್‌ಬುಕ್‌, ವಾಟ್ಸ್‌ಪ್‌ಗಳಲ್ಲಿ ನಾನಾ ರೀತಿಯ ಪೋಸ್ಟ್‌ ಮಾಡುತ್ತಿರುವ ನೆಟ್ಟಿಗರು, ನೇರವಾಗಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನೇ ಟಾರ್ಗೆಟ್‌ ಮಾಡುತ್ತಿದ್ದಾರೆ.

'ಧಿಮಂಡ್ಯ ಜನತೆ ಬೇಗ ಬೇಗ ತಗ್ಗು ಪ್ರದೇಶಗಳಿಂದ ಎತ್ತರ ಪ್ರದೇಶಗಳಿಗೆ ತೆರಳಬೇಕಾಗಿ ವಿನಂತಿ. ಕೆಲವೇ ದಿನಗಳಲ್ಲಿ ಕಣ್ಣೀರಿನ ಕೋಡಿ ನದಿಯಾಗಿ ಹರಿದು ಜನ ಕೊಚ್ಚಿ ಹೋಗುವ ಸಾಧ್ಯತೆ ಇದೆ..', 'ಆಯ್ತು ಬಿಡಿ.. ಅರ್ಥಾಯ್ತು... ಅಳ್ಬೇಡಿ... ಕೊಡ್ತೀವಿ...!?!?', 'ಮಂಡ್ಯದಲ್ಲಿ ಮಳೆ ಗ್ಯಾರಂಟಿ.. ಹಾಸನದ ನಂತರ ಮಂಡ್ಯದಲ್ಲಿ ಡ್ರಾಮಾ ಪ್ರಾರಂಭ...', 'ಗಂಡು ಮೆಟ್ಟಿದ ಮಂಡ್ಯದಲ್ಲಿ ಗಂಡಸರು ಅಳುವ ಕಾರ್ಯಕ್ರಮ, ಮೂರು ತಲೆಮಾರಿನ ಕಣ್ಣೀರು... ಸುಂದರ ಸಾಮಾಜಿಕ ನಾಟಕ' ಎಂಬಿತ್ಯಾದಿ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ರಾಜಾಜಿಸುತ್ತಿವೆ.

'ಫ್ರೀ ಟಿಕೆಟ್‌. ಡೋಂಟ್‌ ಮಿಸ್‌...', ರಾಜ್ಯದ ಬರ ನೀಗಿಸಿದ ದೇವೇಗೌಡರ ಕುಟುಂಬದ ಕಣ್ಣೀರು...' ಕರ್ನಾಟಕವನ್ನು ಕಣ್ಣಿನ ಕಡಲಲ್ಲಿ ಮುಳುಗಿಸುತ್ತಿರುವ ಮುಖ್ಯಮಂತ್ರಿಗಳ ಕುಟುಂಬ!, 'ಚುನಾವಣೆ ಭಾಷಣದಲ್ಲಿ ಕಣ್ಣೀರು ಹಾಕೋದು.. ಚುನಾವಣೆ ಮಾದರಿ ನೀತಿ ಸಂಹಿತೆ ಅಡಿಯಲ್ಲಿ ತರಬೇಕು...', 'ಇದು ಲೋಕಸಭಾ ಚುನಾವಣೆಯ ಟ್ರೇಲರ್‌ ಮಾತ್ರ.. ಪಿಕ್ಚರ್‌ ಅಭಿ ಬಾಕಿ ಹೈ...' ಎಂಬೆಲ್ಲಾ ಪೋಸ್ಟ್‌ಗಳನ್ನು ಹಾಕಿ ವ್ಯಂಗ್ಯವಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ