ಆ್ಯಪ್ನಗರ

ಮಿನಿ ಬಸ್‌ ಪಲ್ಟಿ: ಇಬ್ಬರು ಸಾವು, 24 ಮಂದಿಗೆ ಗಾಯ

ವಿಕ ಸುದ್ದಿಲೋಕ ನಾಗಮಂಗಲ ಚಾಲಕನ ನಿಯಂತ್ರಣ ತಪ್ಪಿದ ಮಿನಿಬಸ್‌ ಪಲ್ಟಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟು, 24 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಬೆಂಗಳೂರು - ...

Vijaya Karnataka Web 22 Oct 2019, 5:00 am
ನಾಗಮಂಗಲ: ಚಾಲಕನ ನಿಯಂತ್ರಣ ತಪ್ಪಿದ ಮಿನಿಬಸ್‌ ಪಲ್ಟಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟು, 24 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕದಬಹಳ್ಳಿ ಬಳಿ ಭಾನುವಾರ ತಡರಾತ್ರಿ ಸಂಭವಿಸಿದೆ.
Vijaya Karnataka Web two killed 24 injured in mini bus overpass in nagamanagala taluk
ಮಿನಿ ಬಸ್‌ ಪಲ್ಟಿ: ಇಬ್ಬರು ಸಾವು, 24 ಮಂದಿಗೆ ಗಾಯ


ಬೆಂಗಳೂರು ಗ್ರಾಮಾಂತರ ಜಿಲ್ಲೆಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದ ರುದ್ರೇಶ್‌ ಅÜವರ ಮಗ ದರ್ಶನ್‌(17) ಹಾಗೂ ಇದೇ ತಾಲೂಕಿನ ಬೇಗೂರು ಗ್ರಾಮದ ನಾಗರಾಜಪ್ಪ ಅವರ ಮಗ ಗೌತಮ್‌(20) ಮೃತರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಹೊಸಕೋಟೆ ತಾಲೂಕಿನ ನಾನಾ ಗ್ರಾಮಗಳ 26 ಮಂದಿ ಪ್ರಯಾಣಿಕರು ಟ್ರಾವೆಲ್ಸ್‌ವೊಂದರ ಮಿನಿಬಸ್‌ನಲ್ಲಿಧರ್ಮಸ್ಥಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿತಾಲೂಕಿನ ರಾಷ್ಟ್ರೀಯ ಹೆದ್ದಾರಿ ಕದಬಹಳ್ಳಿ ಬಳಿಯಿರುವ ರಸ್ತೆ ಉಬ್ಬಿನಲ್ಲಿಚಾಲಕನ ನಿಯಂತ್ರಣ ತಪ್ಪಿದ ಮಿನಿಬಸ್‌ ಪಲ್ಟಿಯಾಗಿ ಈ ಅವಘಢ ಸಂಭವಿಸಿದೆ. ಚಾಲಕನ ಅಜಾಗರೂಕತೆ ಹಾಗೂ ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಎನ್ನಲಾಗಿದೆ.

ಸ್ಥಳಕ್ಕೆ ಧಾವಿಸಿದ ಬಿಂಡಿಗನವಿಲೆ ಠಾಣೆಯ ಪೊಲೀಸರು, ಗಾಯಾಳುಗಳನ್ನು ಸಮೀಪದ ಆದಿಚುಂಚನಗಿರಿ ಆಸ್ಪತ್ರೆಗೆ ರವಾನಿಸಿ, ಸ್ಥಳದಲ್ಲಿಯೇ ಮೃತಪಟ್ಟಿದ್ದ ದರ್ಶನ್‌ ಮತ್ತು ಗೌತಮ್‌ ಮೃತದೇಹಗಳನ್ನು ಇದೇ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿ ಪಂಚನಾಮೆಗೊಳಪಡಿಸಿದರು. ಸೋಮವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಎರಡೂ ಮೃತದೇಹಗಳನ್ನು ವಾರಸುದಾರಿಗೆ ಹಸ್ತಾಂತರಿಸಲಾಯಿತು.

ನಾಗಮಂಗಲ ಡಿವೈಎಸ್‌ಪಿ ಕೆ.ಬಿ.ವಿಶ್ವನಾಥ್‌, ವೃತ್ತ ನಿರೀಕ್ಷಕ ಎಂ.ನಂಜಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಿಂಡಿಗನವಿಲೆ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ