*ಮಳವಳ್ಳಿ ಪಕ್ಷೇತರ, ಕೆ.ಆರ್.ಪೇಟೆಯಲ್ಲಿ ಮಹಿಳಾ ಸಬಲೀಕರಣ ಪಕ್ಷದವರ ನಾಮಪತ್ರ ಅಸಿಂಧು
*ಕೆ.ಆರ್.ಪೇಟೆ: ನಾರಾಯಣಗೌಡರೇ ಜೆಡಿಎಸ್ ಅಭ್ಯರ್ಥಿ
ಮಂಡ್ಯ: ಮಳವಳ್ಳಿ ಹಾಗೂ ಕೆ.ಆರ್.ಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ತಲಾ ಒಬ್ಬರ ನಾಮಪತ್ರ ಅಸಿಂಧುವಾಗಿದೆ.
ನಾಮಪತ್ರ ಸಲ್ಲಿಸಲು ಕಡೆ ದಿನವಾದ ಮಂಗಳವಾರ ಮಧ್ಯಾಹ್ನದ ವೇಳೆಗೆ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಿಂದ ಸ್ಪರ್ಧೆ ಬಯಸಿ 115 ಅಭ್ಯರ್ಥಿಗಳಿಂದ 171 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಬುಧವಾರ ನಡೆದ ನಾಮಪತ್ರಗಳ ಪರಿಶೀಲನೆಯಲ್ಲಿ ಎರಡು ನಾಮಪತ್ರಗಳು ತಿರಸ್ಕೃತಗೊಂಡಿದ್ದು, ಅಂತಿಮವಾಗಿ 113 ಮಂದಿಯ ಉಮೇದುವಾರಿಕೆಗಳು ಸಿಂಧುಗೊಂಡಿವೆ.
ಮಂಡ್ಯ ಕ್ಷೇತ್ರದಲ್ಲಿ 18 ಅಭ್ಯರ್ಥಿಗಳಿಂದ 35, ಮೇಲುಕೋಟೆ ಕ್ಷೇತ್ರದಲ್ಲಿ 18 ಅಭ್ಯರ್ಥಿಗಳಿಂದ 23, ನಾಗಮಂಗಲ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳಿಂದ 22, ಮದ್ದೂರು ಕ್ಷೇತ್ರದಲ್ಲಿ 17 ಅಭ್ಯರ್ಥಿಗಳಿಂದ 21, ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳಿಂದ 26, ಮಳವಳ್ಳಿ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳಿಂದ 23 ಹಾಗೂ ಹಾಗೂ ಕೆ.ಆರ್.ಪೇಟೆ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳಿಂದ 21 ನಾಮಪತ್ರಗಳು ಸಲ್ಲಿಕೆಯಾಗಿದ್ದವು.
ಅದರಂತೆ ಬುಧವಾರ ನಡೆದ ನಾಮಪತ್ರಗಳ ಪರಿಶೀಲನೆಯಲ್ಲಿ ಮಳವಳ್ಳಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಬಯಸಿದ್ದ ಮಹದೇವಮ್ಮ ಎಂಬುವರ ನಾಮಪತ್ರ ತಿರಸ್ಕೃತವಾಗಿದೆ. ಉಳಿದಂತೆ ಆ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳ ಉಮೇದುವಾರಿಕೆ ಸಿಂಧುವಾಗಿವೆ. ಹಾಗೆಯೇ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅಖಿಲ ಭಾರತ ಮಹಿಳಾ ಸಬಲೀಕರಣ ಪಕ್ಷದಿಂದ ದಿವಾಕರ ಎಂಬುವರ ನಾಮಪತ್ರ ಅಸಿಂಧುವಾಗಿದ್ದು, 15 ಮಂದಿ ಕಣದಲ್ಲಿದ್ದಾರೆ.
ಕಣದಲ್ಲಿ ಉಳಿದವರ ವಿವರ....
ಮಂಡ್ಯ: ಕಾಂಗ್ರೆಸ್ ಅಭ್ಯರ್ಥಿ ಪಿ.ರವಿಕುಮಾರ್, ಬಿಜೆಪಿ ಅಭ್ಯರ್ಥಿ ಎನ್.ಶಿವಣ್ಣ, ಜೆಡಿಎಸ್ ಅಭ್ಯರ್ಥಿ ಎನ್.ಶ್ರೀನಿವಾಸ್, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಅಭ್ಯರ್ಥಿ ಬಿ.ಎಸ್ಶಿವಕುಮಾರ್, ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಕ್ಷದ ಅಭ್ಯರ್ಥಿ ಎಂ.ಜೆ.ಕಾವೇರಿ ಶ್ರೇಯಾ, ಪಕ್ಷೇತರ ಅಭ್ಯರ್ಥಿಗಳಾಗಿ ಎಸ್.ಜೆ.ಮಂಜುನಾಥ್, ಡಾ. ಎಸ್.ಸಿ.ಶಂಕರೇಗೌಡ, ಎಂ.ಬಿ.ನಾಗಣ್ಣ, ಎಚ್.ಎನ್.ಹರೀಶ, ರಾಜೇಶ, ಸಿ.ಎಂ.ಕೃಷ್ಣ, ಎಚ್.ಬಿ.ರಾಮು, ಎಂ.ಸಿ.ನಿತ್ಯಾನಂದ, ಸಿದ್ದರಾಮೇಗೌಡ, ಕೆ.ಮಲ್ಲೇಶ, ಉಮೇಶ್ಚಂದ್ರ, ಬೋರಯ್ಯ, ಎಚ್.ಸಿ.ಶಿವರಾಮು ಅವರು ನಾಮಪತ್ರಗಳು ಕ್ರಮವಾಗಿ ಉಳಿದಿವೆ.
...............
ಮದ್ದೂರು: ಜೆಡಿಎಸ್ ಅಭ್ಯರ್ಥಿ ಡಿ.ಸಿ.ತಮ್ಮಣ್ಣ, ಕಾಂಗ್ರೆಸ್ ಅಧ್ಯಕ್ಷ ಜಿ.ಎಂ.ಮಧು, ಬಿಜೆಪಿ ಅಭ್ಯರ್ಥಿ ಎಂ.ಸತೀಶ್, ಹಿಂದೂಸ್ಥಾನ್ ಜನತಾ ಪಾರ್ಟಿ ಅಭ್ಯರ್ಥಿ ಎಂ.ಪಿ.ಮುನವರ್ ಷರೀಪ್, ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ ಆಭ್ಯರ್ಥಿ ಹೀನಾ ಕೌಸರ್, ರಾಷ್ಟ್ರೀಯ ಮಾನವ ವಿಕಾಸ ಪಕ್ಷದ ಆಭ್ಯರ್ಥಿ ವಿಶ್ವನಾಥ್ ರಾವ್, ಸ್ವರಾಜ್ ಇಂಡಿಯಾ ಪಕ್ಷದ ಆಭ್ಯರ್ಥಿ ಎಚ್.ಎಸ್.ಲಿಂಗೇಗೌಡ, ಫೆಡರಲ್ ಕಾಂಗ್ರೇಸ್ ಆಫ್ ಇಂಡಿಯಾ ಪಕ್ಷದ ಆಭ್ಯರ್ಥಿ ಡಾ.ಎಸ್.ಎಸ್.ಮನೋಜಿತ್, ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಆಭ್ಯರ್ಥಿ ಬಿ.ವೆಂಕಟೇಶ ಹಾಗೂ ಪಕ್ಷೇತರ ಆಭ್ಯರ್ಥಿಗಲಾಗಿ ಪಿ.ಎಸ್.ಮಹೇಶ್ಕುಮಾರ್, ಶಿವಮಾದೇಗೌಡ, ಜಾವೀದ್ಖಾನ್, ಬಿ.ಚೇತನ್, ಚಿಕ್ಕನಂಜಾಚಾರಿ, ಎನ್.ಸಿ ಪುಟ್ಟರಾಜು, ವೆಂಕಟೇಶ ಹಾಗೂ ಎಸ್.ಮಹೇಶ್ ಕಣದಲ್ಲಿದ್ದಾರೆ.
..............
ಮಳವಳ್ಳಿ: ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ, ಜೆಡಿಎಸ್ ಅಭ್ಯರ್ಥಿ ಡಾ.ಕೆ.ಅನ್ನದಾನಿ, ಬಿಜೆಪಿ ಅಭ್ಯರ್ಥಿ ಬಿ.ಸೋಮಶೇಖರ್, ಭಾರತೀಯ ರಾಷ್ಟ್ರೀಯ ಮಹಿಳಾ ಸರ್ವೋದಯ ಕಾಂಗ್ರೆಸ್ ಪಕ್ಷದ ಆಭ್ಯರ್ಥಿ ಎಂ.ಕೃಷ್ಣಮೂರ್ತಿ, ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ ಅಭ್ಯರ್ಥಿ ನೀಲಮ್ಮ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಆಭ್ಯರ್ಥಿ ಮಂಟೆಲಿಂಗು, ಲೋಕ ಆವಾಜ್ ದಳ ಪಕ್ಷದ ಆಭ್ಯರ್ಥಿಯಾಗಿ ಎಂ.ಕೆ.ವಿದ್ಯಾ, ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ ಅಭ್ಯರ್ಥಿ ಜಿ.ಎಸ್.ವಿಶ್ವನಾಥ್, ರಾಷ್ಟ್ರೀಯ ಮಾನವ ವಿಕಾಸ ಪಾರ್ಟಿ ಅಭ್ಯರ್ಥಿ ಟಿ.ಸಿ.ವೆಂಕಟೇಶ್, ಇಂಡಿಯನ್ ನ್ಯೂ ಕಾಂಗ್ರೆಸ್ ಪಾರ್ಟಿ ಅಭ್ಯರ್ಥಿ ಎಂ.ಎಸ್.ಶಶಿಕುಮಾರ್ ಹಾಗೂ ಪಕ್ಷೇತರ ಆಭ್ಯರ್ಥಿಗಳಾಗಿ ಎಚ್.ಡಿ.ದೇವಪ್ರಸಾದ್, ಎಂ.ನಂಜಪ್ಪ, ಎಚ್.ಮಹದೇವ, ಟಿ.ಎನ್.ಸತೀಶ್ಕುಮಾರ್, ಆರ್.ಸಿದ್ದರಾಜು ಅವರು ಕಣದಲ್ಲಿ ಉಳಿದುಕೊಂಡಿದ್ದಾರೆ.
......................
ಮೇಲುಕೋಟೆ: ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಬಿಜೆಪಿ ಅಭ್ಯರ್ಥಿ ಸುಂಡಹಳ್ಳಿ ಸೋಮಶೇಖರ್, ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿಯಾಗಿ ದರ್ಶನ್ ಪುಟ್ಟಣ್ಣಯ್ಯ, ಜನ ಸಾಮಾನ್ಯರ ಪಾರ್ಟಿ ಅಭ್ಯರ್ಥಿ ಮಹೇಶ, ಎಐಎಂಇಪಿ ಪಕ್ಷದ ಅಭ್ಯರ್ಥಿ ಮಹೇಶ್, ಕರ್ನಾಟಕ ಜನತಾ ಪಕ್ಷದ ಆಭ್ಯರ್ಥಿ ಜಿ.ಎಂ.ರಮೇಶ್, ಸಮಾಜವಾದಿ ಪಕ್ಷದ ಆಭ್ಯರ್ಥಿ ರೋಹಿಣಿ, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಆಭ್ಯರ್ಥಿಯಾಗಿ ಆರ್.ಎಸ್.ಹನುಮಂತೇಗೌಡ ಹಾಗೂ ಪಕ್ಷೇತರ ಆಭ್ಯರ್ಥಿಗಳಾಗಿ ಅರುಣ್ಕುಮಾರ್, ಕೆ.ಎಸ್.ದರ್ಶನ್, ಎಚ್.ನಾರಾಯಣ, ಪುಟ್ಟರಾಜು, ಬಿ.ಕೆ.ಪುಟ್ಟರಾಜು, ಎಂ.ರಮೇಶ, ಡಿ.ಕೆ.ರಕುಮಾರ್, ಜೆ.ಶಿವಲಿಂಗೇಗೌಡ, ಸಿ.ಸುಬ್ರಮಣ್ಯ, ಪಿ.ವಿ.ಸುಂದರಮ್ಮ ಅವರ ಕಣದಲ್ಲಿದ್ದಾರೆ.
......................
ಶ್ರೀರಂಗಪಟ್ಟಣ: ಬಿಜೆಪಿ ಆಭ್ಯರ್ಥಿ ಕೆ.ಎಸ್.ನಂಜುಂಡೇಗೌಡ, ಕಾಂಗ್ರೆಸ್ ಅಭ್ಯರ್ಥಿ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಜೆಡಿಎಸ್ ಅಭ್ಯರ್ಥಿ ಎ.ಎಸ್.ರವೀಂದ್ರ, ಎಐಎಂಇಪಿ ಆಭ್ಯರ್ಥಿ ಸುರೇಶ್, ಆಮ್ ಆದ್ಮಿ ಪಕ್ಷದ ಆಭ್ಯರ್ಥಿ ಸಿ.ಎಸ್.ವೆಂಕಟೇಶ್, ಪ್ರಜಾ ಪರಿವರ್ತನಾ ಪಾರ್ಟಿ ಅಭ್ಯರ್ಥಿಯಾಗಿ ಎಚ್.ಎಂ.ಸತೀಶ್, ರಾಷ್ಟ್ರೀಯ ಮಾನವ ವಿಕಾಸ ಪಕ್ಷದ ಆಭ್ಯರ್ಥಿ ಎಸ್.ವೆಂಕಟೇಶ್ ಹಾಗೂ ಪಕ್ಷೇತರ ಆಭ್ಯರ್ಥಿಗಳಾಗಿ ಕೆ.ಉದಯ್ಕುಮಾರ್, ಕೆಂಪೇಗೌಡ, ಪಿ.ಎಚ್.ಚಂದ್ರಶೇಖರ್, ಎಂ.ಸಿ.ಚಿದಂಬರ, ಎಂ.ಎಂ.ಮಹೇಶಗೌಡ, ಮೋಹನ್ಕುಮಾರ್, ಎಸ್.ಎಸ್.ರಾಜಶೇೕಖರಯ್ಯ, ಸಿ.ಲಿಂಗೇಗೌಡ, ಸಿದ್ದಯ್ಯ, ಸಿ.ಹೇಮಂತ್ಕುಮಾರ್ ಅವರ ನಾಮಪತ್ರಗಳು ಸಿಂಧುವಾಗಿವೆ.
.................
ನಾಗಮಂಗಲ: ಕಾಂಗ್ರೆಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ, ಬಿಜೆಪಿ ಅಬ್ಯರ್ಥಿ ಡಾ.ಪಾರ್ಥಸಾರಥಿ, ಜೆಡಿಎಸ್ ಅಭ್ಯರ್ಥಿ ಸುರೇಶ್ಗೌಡ, ಕರ್ನಾಟಕ ಜನತಾ ಪಕ್ಷದ ಆಭ್ಯರ್ಥಿಯಾಗಿ ಬಿ.ಎಸ್.ಗೌಡ, ಎಐಎಂಇಪಿ ಪಕ್ಷ ಅಭ್ಯರ್ಥಿ ವಸೀಂಉಲ್ಲಾಖಾನ್ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಎನ್.ಎಸ್.ಅಶೋಕ, ಬಿ.ಕೆ.ಗಂಗಾಧರ, ಎಲ್.ಜಯರಾಮೇಗೌಡ, ಬಿ.ವಿ.ಧರಣೇಂದ್ರಬಾಬು, ಡಿ.ಆರ್.ಮಂಜುನಾಥ್, ಯಡವನಹಳ್ಳಿ ಪಿ.ಸಿ.ಕೃಷ್ಣೇಗೌಡ, ರುಕ್ಮಿಣಿ, ವೆಂಕಟೇಶ ಕಣದಲ್ಲಿ ಉಳಿದುಕೊಂಡಿದ್ದಾರೆ.
...................
ಕೆ.ಆರ್.ಪೇಟೆ: ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್, ಜೆಡಿಎಸ್ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ, ಬಿಜೆಪಿ ಅಭ್ಯರ್ಥಿ ಬಿ.ಸಿ.ಮಂಜು, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಎ.ಸಿ.ಕಾಂತ, ಪಕ್ಷೇತರರಾಗಿ ಅಶೋಕ್, ಕುಮಾರ್, ಆರ್.ಜಗದೀಶ್, ಬಿ.ಎಲ್.ದೇವರಾಜು, ಬಿ.ಪ್ರಕಾಶ್, ಪುಟ್ಟಣ್ಣ ಎಸ್.ಗೌಡ, ಮಂಜುಳಾ, ಎ.ಆರ್.ರಘು, ಎಲ್.ಆರ್.ರವಿಕುಮಾರ್, ಬಿ.ಎನ್.ಲೋಕೇಶ್, ಕೆ.ಎನ್.ಶಂಕರೇಗೌಡ ಕಣದಲ್ಲಿದ್ದಾರೆ.