ಆ್ಯಪ್ನಗರ

ಮಂಡ್ಯ: 1.05 ಲಕ್ಷ ರೂ.ಗೆ ಮಾರಾಟವಾದ ಜೋಡಿ ಟಗರುಗಳು

ಸಾಮಾನ್ಯವಾಗಿ ಬಂಡೂರು ತಳಿಯ ಟಗರುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅತ್ಯಂತ ರುಚಿಕರವಾದ ಮಾಂಸ ದೊರೆಯುವ ಕಾರಣಕ್ಕೆ ಬಂಡೂರು ತಳಿಯ ಟಗರುಗಳಿಗೆ ಬೇಡಿಕೆಯಿದೆ. ಹೀಗಾಗಿ ಅದಕ್ಕೆ ಬೆಲೆಯೂ ಹೆಚ್ಚು. 2-3 ತಿಂಗಳ ಮರಿಗಳಿಗೂ 10-12 ಸಾವಿರ ರೂ. ಬೆಲೆ ಇರುತ್ತದೆ.

Vijaya Karnataka Web 27 Jun 2022, 8:58 pm
ಮಂಡ್ಯ: ತಾಲೂಕಿನ ಕ್ಯಾತುಂಗೆರೆಯಲ್ಲಿ ರೈತರೊಬ್ಬರು ಸಾಕಿದ್ದ ಬಂಡೂರು ತಳಿಯ ಜೋಡಿ ಟಗರುಗಳು ಬರೋಬ್ಬರಿ 1.05 ಲಕ್ಷ ರೂ.ಗೆ ಮಾರಾಟವಾಗಿವೆ.
Vijaya Karnataka Web ಟಗರು
ಟಗರು


ಸಾಮಾನ್ಯವಾಗಿ ಬಂಡೂರು ತಳಿಯ ಟಗರುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅತ್ಯಂತ ರುಚಿಕರವಾದ ಮಾಂಸ ದೊರೆಯುವ ಕಾರಣಕ್ಕೆ ಬಂಡೂರು ತಳಿಯ ಟಗರುಗಳಿಗೆ ಬೇಡಿಕೆಯಿದೆ. ಹೀಗಾಗಿ ಅದಕ್ಕೆ ಬೆಲೆಯೂ ಹೆಚ್ಚು. 2-3 ತಿಂಗಳ ಮರಿಗಳಿಗೂ 10-12 ಸಾವಿರ ರೂ. ಬೆಲೆ ಇರುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಈಗ ಟಗರುಗಳಿಗೆ ಒಳ್ಳೆ ಬೇಡಿಕೆ ಬಂದಿದೆ.

ರೈತನಿಗೆ ಪರಿಹಾರ ನೀಡದ್ದಕ್ಕೆ ಪಾಂಡವಪುರದ ಎಸಿ ಕಾರು ಜಪ್ತಿ! ಅಧಿಕಾರಿ ವರ್ಗಕ್ಕೆ ಚಾಟಿ ಬೀಸಿದ ಕೋರ್ಟ್‌ ಆದೇಶ!

ಇವುಗಳನ್ನು ವರ್ಷಕಾಲ ಸಾಕಿ, ಕೊಬ್ಬಿದ ಬಳಿಕ ರೈತರು ಮಾರಾಟ ಮಾಡುತ್ತಾರೆ.

ಬಕ್ರೀದ್, ರಂಜಾನ್ ಸಂದರ್ಭದಲ್ಲಿ ಬಂಡೂರು ತಳಿಯ ಟಗರುಗಳಿಗೆ ಒಳ್ಳೆಯ ಬೆಲೆ ಬರುತ್ತದೆ. ಕಿವಿ ಕತ್ತರಿಸದ ಟಗರುಗಳು ಚೆನ್ನಾಗಿ ಕೊಬ್ಬಿದ್ದರೆ ರೈತರು ಕೇಳಿದಷ್ಟು ಹಣ ಕೊಟ್ಟರು ಮುಸ್ಲಿಮರು ಖರೀದಿಸುತ್ತಾರೆ.

ಅದೇ ರೀತಿ ಕ್ಯಾತುಂಗೆರೆಯ ರೈತ ಶರತ್ ಎಂಬುವರು ಸಾಕಿದ್ದ ಒಂದೂವರೆ ವರ್ಷ ವಯೋಮಾನದ ಎರಡು ಟಗರುಗಳನ್ನು ಮಂಡ್ಯದ ಮುಬಾರಕ್ ಬಾಬು ಎಂಬುವರು 1.05 ಲಕ್ಷ ರೂ. ಕೊಟ್ಟು ಖರೀದಿಸಿದ್ದಾರೆ.

ಬಕ್ರೀದ್ ಹಬ್ಬ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಮುಬಾರಕ್ ಬಾಬು ಈ ಜೋಡಿ ಟಗರುಗಳನ್ನು ಜೂ.24 ರಂದು ಖರೀದಿ ಮಾಡಿದ್ದಾರೆ.

Leopard Menace: ಮಂಡ್ಯದಲ್ಲಿ ಚಿರತೆ ಉಪಟಳಕ್ಕೆ ಗ್ರಾಮಸ್ಥರು ತತ್ತರ: ಜನ, ಜಾನುವಾರು ಬಲಿ

ಕಳೆದ ಮೂರ್ನಾಲ್ಕು ವರ್ಷದಿಂದ ಪ್ರತಿ ವರ್ಷ ಬಂಡೂರು ತಳಿಯ ಎರಡೆರಡು ಟಗರು ಮರಿಗಳನ್ನು ತಂದು ಸಾಕಿ, ಚೆನ್ನಾಗಿ ಪೋಷಣೆ ಮಾಡುತ್ತೇನೆ. ಬಕ್ರಿದ್ ಸಮಯದಲ್ಲಿ ಮಾರಾಟ ಮಾಡುತ್ತಿದ್ದೇನೆ. ಕೃಷಿಯೊಂದಿಗೆ ಉಪ ಕಸುಬಾಗಿ ಕುರಿ ಸಾಕಾಣಿಕೆ ಮಾಡುತ್ತಾ ಬರುತ್ತಿದ್ದೇನೆ. ಒಂದೂವರೆ ವರ್ಷದ ಹಿಂದೆ ತಂದಿದ್ದ ಈ ಮರಿಗಳು ಈಗ 1.05 ಲಕ್ಷ ರೂ.ಗೆ ಮಾರಾಟವಾಗಿವೆ ಎಂದು ಕ್ಯಾತುಂಗೆರೆ ರೈತ ಶರತ್‌ ತಿಳಿಸಿದ್ದಾರೆ.

ಮಂಡ್ಯ: ಮಾದಕ ವಸ್ತು ನಾಶಪಡಿಸಿದ ಪೊಲೀಸರು

ಜಿಲ್ಲೆಯ ನಾನಾ ಠಾಣೆಗಳ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡಿದ್ದ 6.49 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ಡಿಸಿಆರ್‌ಬಿ ಇನ್ಸ್‌ಪೆಕ್ಟರ್ ಮಂಜೇಗೌಡ ನೇತೃತ್ವದಲ್ಲಿ ಭಾನುವಾರ ನಾಶಪಡಿಸಲಾಗಿದೆ.

28 ಪ್ರಕರಣಗಳಲ್ಲಿ 16ಕಿಲೋ 24 ಗ್ರಾಂ ತೂಕದ ಗಾಂಜಾ, 115 ಗ್ರಾಂ ತೂಕದ ಹೆರಾಯಿನ್ ಮತ್ತು ಸುಮಾರು 8 ಗ್ರಾಂ ತೂಕದ ಅಫೀಮ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಅವುಗಳನ್ನು ಜೂ.26ರಂದು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಳ್ಳ ಸಾಗಾಣೆ ವಿರೋಧಿ ದಿನದ ಅಂಗವಾಗಿ ಮೈಸೂರಿನ ಬಯೋಮೆಡಿಕಲ್ ವೇಸ್ಟ್‌ ಮ್ಯಾನೇಜ್‌ಮೆಂಟ್ ಪ್ಲಾಂಟ್‌ನಲ್ಲಿ ನಾಶ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ