ಆ್ಯಪ್ನಗರ

ತಾಪಂ ಅನುದಾನ ಸದ್ಬಳಕೆ ಮಾಡಿ

ವಿಕ ಸುದ್ದಿಲೋಕ ಮದ್ದೂರು ತಾಲೂಕು ಮಟ್ಟದ ಅಧಿಕಾರಿಗಳು ತಾಪಂ ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸುವ ಮೂಲಕ ಸಮರ್ಪಕವಾಗಿ ಹಣ ಬಳಕೆ ಮಾಡಿಕೊಂಡು ಗ್ರಾಮಗಳ ಅಭಿವೃದ್ಧಿಗೆ ...

Vijaya Karnataka 7 Jul 2018, 5:00 am
ಮದ್ದೂರು: ತಾಲೂಕು ಮಟ್ಟದ ಅಧಿಕಾರಿಗಳು ತಾಪಂ ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸುವ ಮೂಲಕ ಸಮರ್ಪಕವಾಗಿ ಹಣ ಬಳಕೆ ಮಾಡಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಮುಂದಾಗುವಂತೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ ್ಮಮ್ಮ ಸೂಚಿಸಿದರು.
Vijaya Karnataka Web use the taluk panchyat grants
ತಾಪಂ ಅನುದಾನ ಸದ್ಬಳಕೆ ಮಾಡಿ


ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ಜಯಲಕ್ಷ ್ಮಮ್ಮ ಅಧ್ಯಕ್ಷ ತೆಯಲ್ಲಿ ಶುಕ್ರವಾರ ನಡೆದ ಹಣಕಾಸು ಲೆಕ್ಕಪರಿಶೋಧನ ಹಾಗೂ ಯೋಜನಾ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸರಕಾರದಿಂದ ಬಿಡುಗಡೆಯಾಗುವ ಅನುದಾನವನ್ನು ಪ್ರತಿಯೊಬ್ಬ ಅಧಿಕಾರಿಗಳು ಸದುಪಯೋಗ ಪಡಿಸಿಕೊಂಡು ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್‌ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಹೆಚ್ಚಿನ ಒತ್ತು ನೀಡುವಂತೆ ತಿಳಿಸಿದರು.

ತೋಟಗಾರಿಕೆ, ಅರಣ್ಯ ಹಾಗೂ ಸಹಕಾರ ಸಂಘಗಳ ಅಧಿಕಾರಿಗಳು ತಾ.ಪಂ. ಸಭೆಗಳಿಗೆ ಹಾಜರಾಗಲು ನಿರ್ಲಕ್ಷ ್ಯತೆ ತೋರುತ್ತಾರೆ. ಜನಪ್ರತಿನಿಧಿಗಳಿಗೆ ಇಲಾಖೆಯ ಸಮರ್ಪಕ ಮಾಹಿತಿ ನೀಡದೆ ಅಸಡ್ಡೆ ಮನೋಭಾವ ಹೊಂದಿರುವ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡುವಂತೆ ತಾ.ಪಂ. ಇಒ ಮಣಿಕಂಠನ್‌ ಅವರಿಗೆ ಸದಸ್ಯರು ಒಕ್ಕೋರಲಿನಿಂದ ಸೂಚಿಸಿದರು.

ಕೆಡಿಪಿ ಸಭೆಯನ್ನು ಪ್ರತಿ ತಿಂಗಳಿಗೊಮ್ಮೆ ನಡೆಸುವ ಆದೇಶವಿದ್ದರೂ, ಇಲ್ಲಿನ ಸ್ಥಳೀಯ ಅಧಿಕಾರಿಗಳು ಸಭೆ ನಡೆಸದೆ ಮುಂದೂಡುವ ಧೋರಣೆ ಅನುಸರಿಸುತ್ತಿದ್ದಾರೆ. ಅಧಿಕಾರಿಗಳು ಕಚೇರಿಯಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸದೆ ಸಾರ್ವಜನಿಕರಿಗೆ ಇಲಾಖೆಗಳ ಸಮರ್ಪಕ ಮಾಹಿತಿ ದೊರೆಯುತ್ತಿಲ್ಲ ಎಂದು ಸದಸ್ಯ ಚಿಕ್ಕಮರಿಯಪ್ಪ ಇಒ ಅವರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ತಾ.ಪಂ. ಇಒ, ''ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕೆಡಿಪಿ ಸಭೆ ಕರೆಯಲು ಸಾಧ್ಯವಾಗಿರಲಿಲ್ಲ. ಪ್ರತಿ ತಿಂಗಳಿಗೊಮ್ಮೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ನಾನಾ ಇಲಾಖೆಗಳ ಮಾಹಿತಿ ನೀಡುವುದಾಗಿ'' ತಿಳಿಸಿದರು.

ರೈತರ ಪಂಪ್‌ಸೆಟ್‌ಗಳಿಗೆ ಸೋಲಾರ್‌ ದೀಪ ಅಳವಡಿಸಲು ಸರಕಾರ ಮುಂದಾಗಿದ್ದು, ಸಾಮಾನ್ಯ, ಎಸ್‌ಸಿ/ಎಸ್‌ಟಿ ರೈತರು ಇದರ ಪ್ರಯೋಜನ ಪಡೆಯಬಹುದಾಗಿದೆ. ಆಸಕ್ತ ರೈತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವಂತೆ ಸೆಸ್ಕ್‌ ಎಇಇ ಮಂಜುನಾಥ್‌ ಸಭೆಗೆ ತಿಳಿಸಿದರು. ಪರಿಶಿಷ್ಟ ಜಾತಿ/ ಪಂಗಡದವರಿಗೆ ಯೋಜನೆ ಉಚಿತವಾಗಿದ್ದು ಸಾಮಾನ್ಯ ವರ್ಗದ ಫಲಾನುಭವಿಗಳು ಸೌರ ಪಂಪ್‌ಸೆಟ್‌ ಪಡೆಯಲು ಒಂದು ಲಕ್ಷ ರೂ.ಗಳನ್ನು ಡಿಡಿ ಮೂಲಕ ಪಾವತಿಸುವಂತೆ ಹಾಗೂ ಮೊದಲು ಅರ್ಜಿ ಸಲ್ಲಿಸಿದ ಫಲಾನಿಭವಿಗಳಿಗೆ ಆದ್ಯತೆ ನೀಡುವುದಾಗಿ ಹೇಳಿದರು.

ತಾಲೂಕಿನಾದ್ಯಂತ ದೀನ್‌ದಯಾಳ್‌ ಉಪಧ್ಯಾಯ ಹಾಗೂ ಸೌಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದು, ವಿದ್ಯುತ್‌ ಸಂಪರ್ಕ ಇಲ್ಲದ ಕುಟುಂಬಗಳು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬಹುದು. ಈಗಾಗಲೇ 1400ಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಅಂತಹ ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಇಲಾಖೆ ಮುಂದಾಗಿರುವುದಾಗಿ ಸಭೆಗೆ ವಿವರಿಸಿದರು. ಸಭೆ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾಗೋಪಿ, ಸದಸ್ಯರಾದ ವರಲಕ್ಷ್ಮಿ, ತೋಯಜಾಕ್ಷ , ಅಧಿಕಾರಿಗಳಾದ ಶಶಿಕಲಾ, ಆಶಾಲತಾ, ಮಹಾಲಿಂಗು, ರೇಣುಕಮ್ಮ, ಶ್ರೀಕಾಂತ್‌, ಹನುಮೇಗೌಡ, ಮಂಜುನಾಥ್‌ನಾಯ್ಡು ಇತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ