ಆ್ಯಪ್ನಗರ

ಶ್ರೀರಾಮನ ಅವಹೇಳನ ಸಂವಿಧಾನದ ಉಲ್ಲಂಘನೆ

ವಿಕ ಸುದ್ದಿಲೋಕ ಮಂಡ್ಯ ಶ್ರೀರಾಮನ ಬಗ್ಗೆ ವಿಚಾರವಾದಿ ಕೆಎಸ್‌...

Vijaya Karnataka 28 Dec 2018, 8:37 pm
ಮಂಡ್ಯ: ಶ್ರೀರಾಮನ ಬಗ್ಗೆ ವಿಚಾರವಾದಿ ಕೆ.ಎಸ್‌. ಭಗವಾನ್‌ ನೀಡಿರುವ ಹೇಳಿಕೆ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿಯ ರಾಜ್ಯಾಧ್ಯಕ್ಷ ಡಾ. ಸುಧಾಕರ್‌ ಹೊಸಹಳ್ಳಿ ಹೇಳಿದ್ದಾರೆ.
Vijaya Karnataka Web violation of the constitution of sri rams disgrace says writer sudhakar hosahalli
ಶ್ರೀರಾಮನ ಅವಹೇಳನ ಸಂವಿಧಾನದ ಉಲ್ಲಂಘನೆ


ಭಗವಾನ್‌ ಅವರ ಬರವಣಿಗೆæಯಿಂದ ಸಂವಿಧಾನದ 19(2), 14, 15(1), 25, 26 ಹಾಗೂ 27ನೇ ವಿಧಿಗಳು ಉಲ್ಲಂಘನೆಯಾಗಿವೆ. ಹೀಗಾಗಿ ಅವರಿಗೆ ನೀಡಿರುವ ಸಾಂವಿಧಾನಿಕ ಸವಲತ್ತುಗಳನ್ನು ಸರಕಾರ ಹಿಂಪಡೆಯಬೇಕು. ಜತೆಗೆ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಪತ್ರಾಕಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಸಂವಿಧಾನದ ನಿಯಮಗಳಿಗೆ ವಿರುದ್ಧವಾಗಿ ನಡೆಯುವರಿಗೆ ಜನರ ತೆರಿಗೆ ಹಣದಲ್ಲಿ ರಕ್ಷಣೆ ನೀಡುವುದು ಸಂವಿಧಾನದ ಉಲ್ಲಂಘನೆ ಆಗುತ್ತದೆ. ಟಿಪ್ಪು ಸುಲ್ತಾನನ ಮತಾಂಧತೆಯ ಬಗ್ಗೆ ಅಂಕಿ ಸಂಖ್ಯೆಗಳ ಮೂಲಕ ಚರ್ಚಿಸಿದರೆ ನಮ್ಮ ಮೇಲೆ 395ಎ ವಿಧಿ ಅನ್ವಯ ಧರ್ಮನಿಂದನೆ ಪ್ರಕರಣ ದಾಖಲಿಸಲಾಗುತ್ತದೆ. ಅದೇ ಶೇ.79-80ರಷ್ಟು ಬಹುಸಂಖ್ಯಾತ ಹಿಂದುಗಳ ಆರಾಧ್ಯ ದೈವ ಶ್ರೀರಾಮನ ಕುರಿತು ಲಿಖಿತವಾಗಿ, ಅಪಮಾನಿಸಿ ಬರೆದವರಿಗೆ ವಿಶೇಷ ಪೋಲಿಸ್‌ ರಕ್ಷಣೆ ನೀಡಲಾಗಿದೆ. ಸಂವಿಧಾನ ಮುಸ್ಲಿಮರಿಗೆ, ಹಿಂದೂಗಳಿಗೆ ಪ್ರತ್ಯೇಕ ಧಾರ್ಮಿಕ ನಿಯಮವನ್ನು ನೀಡಿದೆಯೇ? ಸಂವಿಧಾನ 19(1)ನೇ ವಿಧಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಚರ್ಚಿಸುವ, ಚೀರಾಡುವ ಬುದ್ಧಿಜೀವಿಗಳು ಈಗೇಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಭಗವಾನ್‌ ವಿರುದ್ಧ ಎಸ್ಪಿಗೆ ದೂರು

ಮಂಡ್ಯ: ಹಿಂದೂಗಳ ಆರಾಧ್ಯ ದೈವ ಶ್ರೀರಾಮನನ್ನು ವಾಹಿನಿಯೊಂದರ ಮೂಲಕ ಕೆ.ಎಸ್‌.ಭಗವಾನ್‌ ನಿಂದಿಸುವ ಮೂಲಕ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುವ ಮತ್ತು ಶಾಂತಿಯುತ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿ ನರೇಂದ್ರ ಮೋದಿ ವಿಚಾರ್‌ ಮಂಚ್‌ ಕಾರ‍್ಯಕರ್ತರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ದೂರು ಸಲ್ಲಿಸಿದ್ದಾರೆ.

ಸಂವಿಧಾನಬದ್ಧ ಹಕ್ಕಿನ ಮೂಲಕ ಟಿಪ್ಪುವಿನ ವಿರುದ್ಧ ಕೊಡಗಿನಲ್ಲಿ ಮಾತನಾಡಿದ್ದಕ್ಕೆ ಪತ್ರಕರ್ತರೊಬ್ಬರನ್ನು ಬಂಧಿಸಿ, ಹಲವರ ವಿರುದ್ಧ ಕೇಸು ದಾಖಲಿಸಲಾಯಿತು. ಆದರೆ, ಶಾಂತಿಯುತ ಸಮಾಜದಲ್ಲಿ ಹಿಂದೂಗಳ ಆರಾಧ್ಯ ದೈವ ರಾಮ ಮಾಂಸಾಹಾರಿ, ಮದ್ಯ ಸೇವನೆ ಮಾಡುತ್ತಿದ್ದ ಎಂದು ಹೇಳಿಕೆ ನೀಡಿದ್ದಾರೆ. ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ. ಅವರ ಬಂಧನಕ್ಕೆ ಪೊಲೀಸರಿಗೆ ಸೂಚನೆ ನೀಡಬೇಕೆಂದು ಮುಖ್ಯಮಂತ್ರಿಯನ್ನು ಕೋರಿದ್ದಾರೆ.

ಭಗವಾನ್‌ ಅವರನ್ನು ನಿಮಾನ್ಸ್‌ಗೆ ದಾಖಲಿಸಿ, ಸರಕಾರಿ ವೆಚ್ಚದಲ್ಲೇ ಚಿಕಿತ್ಸೆ ಕೊಡಿಸಿ. ಸರಕಾರಿ ವೆಚ್ಚವೂ ಸಾಲದಿದ್ದರೆ ನಾವೇ ನಮ್ಮ ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಕೊಡಿಸಲು ಅನುವು ಮಾಡಿಕೊಡಿ ಎಂದು ನರೇಂದ್ರ ಮೋದಿ ವಿಚಾರ್‌ ಮಂಚ್‌ನ ರಾಜ್ಯ ಕಾರ‍್ಯದರ್ಶಿ ಸಿ.ಟಿ. ಮಂಜುನಾಥ್‌, ಕಾರ‍್ಯಕರ್ತರಾದ ಸಿದ್ದರಾಜುಗೌಡ, ಎಸ್‌.ಶಿವಕುಮಾರ್‌ ಆರಾಧ್ಯ, ನಾಗಣ್ಣ ಮಲ್ಲಪ್ಪ ಅವರು ಸಿಎಂಗೆ ಬರೆದಿರುವ ದೂರು ಪತ್ರದಲ್ಲಿ ಕೋರಿದ್ದಾರೆ.

ಶ್ರೀರಾಮ ಮದ್ಯಪಾನ ಮಾಡುತ್ತಿದ್ದ, ಮಾಂಸಾಹಾರ ಸೇವಿಸುತ್ತಿದ್ದ ಎನ್ನುವುದಕ್ಕೆ ತ್ರೇತಾಯುಗದಲ್ಲಿ ಭಗವಾನ್‌ ಅವರ ಅಪ್ಪಾಜಿ ಮಿಲಿಟರಿ ಹೋಟೆಲ್‌ ನಡೆಸುತ್ತಿದ್ದರೆ? ಅವರ ತಾತ ವೈನ್‌ಶಾಪ್‌ ನಡೆಸುತ್ತಿದ್ದರೆ? ಎಂಬುದು ನಮಗೆ ತಿಳಿಯದಾಗಿದೆ. ಹೀಗಾಗಿ ಅರೆ ಹುಚ್ಚನಂತೆ ವರ್ತಿಸುತ್ತಿರುವ ಭಗವಾನ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ