ಆ್ಯಪ್ನಗರ

ದೌರ್ಜನ್ಯ: ಆರೋಪ

ಕುಳುವ ಸಮಾಜದ ಪಾಪಣ್ಣ ಎಂಬ ವ್ಯಕ್ತಿ ಮೇಲೆ ಮೇಲ್ವರ್ಗದ ಕೆಲವರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ರಾಜ್ಯಾಧ್ಯಕ್ಷ ತಿರುಮಲಾಪುರ ಕೆ.ಗೋಪಾಲ್‌ ಆರೋಪಿಸಿದರು.

Vijaya Karnataka 17 Aug 2018, 5:00 am
ಮಂಡ್ಯ : ಕುಳುವ ಸಮಾಜದ ಪಾಪಣ್ಣ ಎಂಬ ವ್ಯಕ್ತಿ ಮೇಲೆ ಮೇಲ್ವರ್ಗದ ಕೆಲವರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ರಾಜ್ಯಾಧ್ಯಕ್ಷ ತಿರುಮಲಾಪುರ ಕೆ.ಗೋಪಾಲ್‌ ಆರೋಪಿಸಿದರು.
Vijaya Karnataka Web violence accused
ದೌರ್ಜನ್ಯ: ಆರೋಪ


ಮದ್ದೂರು ತಾಲೂಕಿನ ಅರಗನಮೆಳೆ ಗ್ರಾಮದ ಪಾಪಣ್ಣ ಸರಕಾರಿ ಜಮೀನಿನಲ್ಲಿ ಹಲವು ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದು, ಹುರುಳಿ, ಎಳ್ಳು, ರಾಗಿ, ಜೋಳ ಮತ್ತು ಕಡಲೆಕಾಯಿ ಬೆಳೆದಿದ್ದಾರೆ. ಇದನ್ನು ಮೇಲ್ವರ್ಗದ ಕೆಲವರು ಟ್ರ್ಯಾಕ್ಟರ್‌ ಮೂಲಕ ನಾಶ ಮಾಡಿದ್ದಾರೆ. ಅಲ್ಲದೆ, ಕೆಲವು ಗ್ರಾಮಸ್ಥರು ಇವರೊಂದಿಗೆ ಸೇರಿಕೊಂಡು ಪಾಪಣ್ಣ ಮತ್ತು ಗ್ರಾಮದ ಕುಳುವ ಸಮುದಾಯಕ್ಕೆ ಸೇರಿದವರಿಗೆ ಟೀ ಅಂಗಡಿ, ದಿನಸಿ ಅಂಗಡಿಗಳಿಗೆ ಪ್ರವೇಶ ನಿರಾಕರಿಸುತ್ತಿದ್ದಾರೆ. ಈ ಸಂಬಂಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜಿಲ್ಲಾದ್ಯಂತ ಕುಳುವ ಮಹಾ ಸಂಘ ಉಗ್ರ ಪ್ರತಿಭಟನೆ ನಡೆಸಲಿದೆ'' ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಕುಳುವ ಸಮಾಜದ ಮುಖಂಡರಾದ ಪುಟ್ಟರಾಜು, ಕೃಷ್ಣ, ರವಿ, ರಮೇಶ್‌, ಪಾಪಣ್ಣ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ