ಆ್ಯಪ್ನಗರ

ಕೆಆರ್‌ಎಸ್‌ಗೆ ಡಿಸಿ ಭೇಟಿ: ಪರಿಶೀಲನೆ

ತಾಲೂಕಿನ ಕೆಆರ್‌ಎಸ್ ಜಲಾಶಯಕ್ಕೆ ಭಾನುವಾರ ಜಿಲ್ಲಾಧಿಕಾರಿ ಮಂಜುಶ್ರೀ ಭೇಟಿ ನೀಡಿ ಜಲಾಶಯ ವೀಕ್ಷಣೆ ಮಾಡಿದರು.

Vijaya Karnataka 18 Sep 2017, 5:16 am
ಶ್ರೀರಂಗಪಟ್ಟಣ: ತಾಲೂಕಿನ ಕೆಆರ್‌ಎಸ್ ಜಲಾಶಯಕ್ಕೆ ಭಾನುವಾರ ಜಿಲ್ಲಾಧಿಕಾರಿ ಮಂಜುಶ್ರೀ ಭೇಟಿ ನೀಡಿ ಜಲಾಶಯ ವೀಕ್ಷಣೆ ಮಾಡಿದರು.
Vijaya Karnataka Web visit dc to krs verification
ಕೆಆರ್‌ಎಸ್‌ಗೆ ಡಿಸಿ ಭೇಟಿ: ಪರಿಶೀಲನೆ


ಒಟ್ಟು 124.80 ಅಡಿ ಮಟ್ಟದ ಜಲಾಶಯದಲ್ಲಿ 102 ಅಡಿ ನೀರು ಸಂಗ್ರಹವಾಗಿದ್ದು, ಕುಡಿಯುವ ನೀರು ಹಾಗೂ ಜಲಾಶಯ ಅವಲಂಬಿತ ಪ್ರದೇಶದಲ್ಲಿ ಇರುವ ರೈತರ ಬೆಳೆಗೆ ಬೇಕಾದ ನೀರು ಕುರಿತು ಕಾವೇರಿ ನೀರಾವರಿ ನಿಗಮ ಕಾರ್ಯಪಾಲಕ ಎಂಜಿನಿಯರ್ ಬಸವರಾಜೇಗೌಡ ಅವರಿಂದ ಮಾಹಿತಿ ಸಂಗ್ರಹಿಸಿದರು.

ಇದಕ್ಕೂ ಮೊದಲು ಶ್ರೀರಂಗಪಟ್ಟಣ ದಲ್ಲಿ ನಡೆಯುತ್ತಿರುವ ಪುಷ್ಕರ ಮೇಳಕ್ಕೆ ಭೇಟಿ ನೀಡಿದ, ಶ್ರೀರಂಗನಾಥಸ್ವಾಮಿ ದೇವಾಲಯ ಸ್ನಾನಘಟ್ಟ, ನಿಮಿಷಾಂಬ ದೇವಾಲಯ ಸ್ನಾನಘಟ್ಟದಲ್ಲಿ ಇರವ ಮೂಲ ಸೌಕರ‌್ಯ ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಎರಡು ದಿನದಿಂದ ಭಕ್ತರು ಹಾಗೂ ಸಾರ್ವಜನಿಕರು ಮೂಲ ಸೌಕರ‌್ಯ ಹಾಗೂ ಟ್ರಾಫಿಕ್ ಜಾಮ್ ಕುರಿತು ದೂರು ನೀಡಿದ್ದರು. ಕುಡಿಯುವ ನೀರು, ಬಟ್ಟೆ ಬದಲಿಸಲು ಪ್ರತ್ಯೇಕ ಸ್ಥಳ, ಸಮರ್ಪಕ ಶೌಚಾಲಯ ಒದಗಿಸುವಂತೆ ಆದೇಶ ನೀಡಿದ್ದೇನೆ. ಟ್ರಾಫಿಕ್ ಜಾಮ್ ಆಗದಂತೆ ಸೂಕ್ತ ನಿಗಾವಹಿಸುವಂತೆ ಪೊಲೀಸರಿಗೆ ಕಟ್ಟು ನಿಟ್ಟಿನ ಆದೇಶ ನೀಡಲಾಗಿದೆ. ಭಕ್ತರಿಗೆ ತೊಂದರೆ ಯಾಗದಂತೆ ಜಾಗ್ರತೆ ವಹಿಸಲಾಗುವುದು ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಯಶೋಧ, ತಹಸೀಲ್ದಾರ್ ಕೆ.ಕಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ