ಆ್ಯಪ್ನಗರ

ಜಲಸೇವಾ ನಿಯಂತ್ರಣ ಕೇಂದ್ರಕ್ಕೆ ಚಾಲನೆ

ವಿಕ ಸುದ್ದಿಲೋಕ ಪಾಂಡವಪುರ ಪಟ್ಟಣ ತಾಪಂ ಕಚೇರಿ ಆವರಣದಲ್ಲಿ ತೆರೆಯಲಾಗಿರುವ ಜಲಸೇವಾ ನಿಯಂತ್ರಣ ಕೇಂದ್ರಕ್ಕೆ ತಾಪಂ ಇಒ ಆರ್‌ಪಿಮಹೇಶ್‌ ಚಾಲನೆ ನೀಡಿದರು...

Vijaya Karnataka 15 May 2019, 5:00 am
ಪಾಂಡವಪುರ: ಪಟ್ಟಣ ತಾಪಂ ಕಚೇರಿ ಆವರಣದಲ್ಲಿ ತೆರೆಯಲಾಗಿರುವ ಜಲಸೇವಾ ನಿಯಂತ್ರಣ ಕೇಂದ್ರಕ್ಕೆ ತಾಪಂ ಇಒ ಆರ್‌.ಪಿ.ಮಹೇಶ್‌ ಚಾಲನೆ ನೀಡಿದರು.
Vijaya Karnataka Web water resources control center inauguration in pandavapura
ಜಲಸೇವಾ ನಿಯಂತ್ರಣ ಕೇಂದ್ರಕ್ಕೆ ಚಾಲನೆ


ಬಳಿಕ ಮಾತನಾಡಿದ ಅವರು, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡುವುದಕ್ಕಾಗಿ ಹಾಗೂ ಸಮಸ್ಯೆ ತಕ್ಷ ಣ ಸ್ಪಂದಿಸಿ ಕೆಲಸ ಮಾಡುವುದಕ್ಕಾಗಿ ತಾಲೂಕು ಆಡಳಿತದ ವತಿಯಿಂದ ತಾಲೂಕು ಪಂಚಾಯಿತಿ ಆವರಣದಲ್ಲಿ ಜಲಸೇವಾ ನಿಯಂತ್ರಣ ಕೇಂದ್ರ ತೆರೆಲಾಗಿದೆ. ತಾಲೂಕಿನಲ್ಲಿ ಎಲ್ಲಿಯಾದರೂ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಸಾರ್ವಜನಿಕರು ಸಂಪೂರ್ಣ ವಿವರದೊಂದಿಗೆ ಜಲಸೇವಾ ನಿಯಂತ್ರಣ ಕೇಂದ್ರಕ್ಕೆ ದೂರು ಸಲ್ಲಿಸಬಹುದು. ಅಥವಾ ದೂ: 08236-255123ಗೆ ಕರೆ ಮಾಡಬಹುದಾಗಿದೆ ಎಂದರು.

ಜಲಸೇವಾ ನಿಯಂತ್ರಣ ಕೇಂದ್ರ ದಿನದ 24 ಗಂಟೆಯೂ ಕಾರ‍್ಯನಿರ್ವಹಿಸಲಿದೆ. ಕೇಂದ್ರದಲ್ಲಿ ಕೆಲಸ ನಿರ್ವಹಣೆ ಮಾಡುವುದಕ್ಕಾಗಿ ಈಗಾಗಲೇ ಮೂವರು ಸಿಬ್ಬಂದಿ ನೇಮಕ ಮಾಡಲಾಗಿದೆ. ತಾಲೂಕಿನ ಯಾವುದಾರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ತಕ್ಷ ಣ ಜಲಸೇವಾ ನಿಯಂತ್ರಣ ಕೇಂದ್ರಕ್ಕೆ ದೂರು ಅಥವಾ ಮಾಹಿತಿ ನೀಡಿದರೆ ಸಂಬಂಧಿಸಿದ ಪಿಡಿಒ, ನರೇಗ ಸಹಾಯಕ ನಿರ್ದೇಶಕರು, ತಾಪಂ ಇಒ ಹಾಗೂ ಜಿಪಂ ಗ್ರಾಮೀಣ ಕುಡಿಯುವ ನೀರು ವಿಭಾಗದ ಅಧಿಕಾರಿಗಳು ಸ್ಪಂದಿಸಲಿದ್ದಾರೆ. ಸಾರ್ವಜನಿಕರು ಜಲಸೇವಾ ಕೇಂದ್ರವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ತಾಲೂಕಿನಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ. ಒಂದು ವೇಳೆ ಮುಂದಿನ ದಿನಗಳಲ್ಲಿ ಯಾವುದಾರೂ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ಸಾರ್ವಜನಿಕರು
ತಕ್ಷ ಣ ಮಾಹಿತಿ ಕೇಂದ್ರಕ್ಕೆ ದೂರು ಸಲ್ಲಿಸಿ ಎಂದು ಹೇಳಿದರು. ನರೇಗ ಸಹಾಯಕ ನಿರ್ದೇಶಕ ಶಿವಕುಮಾರ್‌, ಸಹಾಯಕ ಲೆಕ್ಕಾಧಿಕಾರಿ ಸ್ವಾಮೀಗೌಡ ಸೇರಿದಂತೆ ಪಿಡಿಒಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ