ಆ್ಯಪ್ನಗರ

ತಮಿಳುನಾಡಿಗೆ ನೀರು: ನದಿಗಿಳಿದು ರೈತರ ಪ್ರತಿಭಟನೆ

ನದಿಗಿಳಿದು ರೈತರ ಪ್ರತಿಭಟನೆ ವಿಕ ಸುದ್ದಿಲೋಕ ಶ್ರೀರಂಗಪಟ್ಟಣ ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಪ್ರಾಧಿಕಾರ ಆದೇಶ ಖಂಡಿಸಿ ಪಟ್ಟಣದ ...

Vijaya Karnataka 3 Aug 2019, 8:21 am
ಶ್ರೀರಂಗಪಟ್ಟಣ: ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಪ್ರಾಧಿಕಾರ ಆದೇಶ ಖಂಡಿಸಿ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಸ್ನಾನಘಟ್ಟ ಬಳಿ ಕಾವೇರಿ ನದಿಗಿಳಿದು ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು.
Vijaya Karnataka Web Cauvery Water


ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಮೊದಲು ಅಣೆಕಟ್ಟೆ ತುಂಬಿಸಿ ನಂತರ ತಮಿಳುನಾಡಿಗೆ ನೀರು ಹರಿಸಿ ಎಂದು ಘೋಷಣೆ ಕೂಗಿದರು. 124.80 ಅಡಿ ಮಟ್ಟದ ಜಲಾಶಯದಲ್ಲಿ ಕೇವಲ 83 ಅಡಿ ನೀರು ಸಂಗ್ರಹವಿದೆ. ಕಳೆದ 10 ದಿನದಿಂದ ತಮಿಳುನಾಡಿಗೆ 8,000 ಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಹರಿಯಬಿಟ್ಟ ಕಾರಣ ಜಲಾಶಯದಲ್ಲಿ ಮೂರು ಟಿಎಂಸಿಗೂ ಹೆಚ್ಚು ನೀರು ಖಾಲಿ ಆಗಿದೆ. ತಮಿಳುನಾಡಿಗೆ ಬಿಟ್ಟ ನೀರನ್ನು ಸಂಗ್ರಹಣೆ ಮಾಡಿದರೆ ಜಲಾಶಯ ಮಟ್ಟ 100 ಅಡಿಗೆ ಬರುತ್ತಿತ್ತು ಎಂದು ದೂರಿದರು.

ಜಲಾಶಯವನ್ನೇ ನಂಬಿಕೊಂಡಿರುವ ಲಕ್ಷಾಂತರ ರೈತರು ಕಂಗಾಲಾಗಿದ್ದಾರೆ. ಹಿಂಗಾರು ಭತ್ತದ ಬೆಳೆಯನ್ನೂ ಕಳೆದುಕೊಂಡಿರುವ ರೈತರು ಬೆಳೆ ಬೆಳೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರಕಾರ ಮಧ್ಯಪ್ರವೇಶ ಮಾಡಬೇಕು. ಶೀಘ್ರ ತಮಿಳುನಾಡಿಗೆ ನದಿ ಮೂಲಕ ಹರಿಸುತ್ತಿರುವ ನೀರು ನಿಲ್ಲಿಸಬೇಕು. ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹ ಮಾಡಿ ಮುಂಗಾರು ಭತ್ತದ ಬೆಳೆ ಬೆಳೆಯಲು ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸಬೇಕು. ಭತ್ತದ ಬೆಳೆ ಬೆಳೆಯಲು ನೀರು ಬಿಡುವ ಸಂಬಂಧ ಪ್ರಕಟಣೆ ಹೊರಡಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಮುಖಂಡರಾದ ಮರಳಗಾಲ ಕೃಷ್ಣೇಗೌಡ, ಮೇಳಾಪುರಸ್ವಾಮಿಗೌಡ, ನೆಲಮನೆ ಕಾಳೇಗೌಡ, ಮಹದೇವಪುರನಾಗೇಂದ್ರ, ಕಡತನಾಳು ಬಾಲಕೃಷ್ಣ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ