ಆ್ಯಪ್ನಗರ

ವೆಲ್ಲೆಸ್ಲಿ ಸೇತುವೆ ಮೇಲೆ ತೆರಳದಂತೆ ತಡೆಗೋಡೆ ನಿರ್ಮಾಣ

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಜಲಾಶಯದಿಂದ 1.20 ಲಕ್ಷ ಕ್ಯೂಸೆಕ್‌ ನೀರನ್ನು ಕಾವೇರಿ ನದಿಗೆ ಹರಿಯಬಿಟ್ಟಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. 200 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ವೆಲ್ಲಸ್ಲಿ ಸೇತುವೆ ಬಳಿ ಅಪಾಯದ ಸ್ಥಿತಿಗೆ ತಲುಪಿದ್ದು, ಸೇತುವೆ ಮೇಲೆ ವಾಹನಗಳು ಹಾಗೂ ಪಾದಚಾರಿಗಳು ಸಂಚಾರ ಮಾಡದಂತೆ ತಾಲೂಕು ಆಡಳಿತ ತಡೆಗೋಡೆ ನಿರ್ಮಿಸಿದೆ.

Vijaya Karnataka 18 Aug 2018, 5:00 am
ಶ್ರೀರಂಗಪಟ್ಟಣ: ಕೆಆರ್‌ಎಸ್‌ ಜಲಾಶಯದಿಂದ 1.20 ಲಕ್ಷ ಕ್ಯೂಸೆಕ್‌ ನೀರನ್ನು ಕಾವೇರಿ ನದಿಗೆ ಹರಿಯಬಿಟ್ಟಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. 200 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ವೆಲ್ಲಸ್ಲಿ ಸೇತುವೆ ಬಳಿ ಅಪಾಯದ ಸ್ಥಿತಿಗೆ ತಲುಪಿದ್ದು, ಸೇತುವೆ ಮೇಲೆ ವಾಹನಗಳು ಹಾಗೂ ಪಾದಚಾರಿಗಳು ಸಂಚಾರ ಮಾಡದಂತೆ ತಾಲೂಕು ಆಡಳಿತ ತಡೆಗೋಡೆ ನಿರ್ಮಿಸಿದೆ.
Vijaya Karnataka Web wellesley bridge construction of the barrier
ವೆಲ್ಲೆಸ್ಲಿ ಸೇತುವೆ ಮೇಲೆ ತೆರಳದಂತೆ ತಡೆಗೋಡೆ ನಿರ್ಮಾಣ


ಸೇತುವೆ ಎರಡು ಪ್ರವೇಶದ್ವಾರದಲ್ಲಿ ಜನರು ನದಿ ಪಾತ್ರಕ್ಕೆ ತೆರಳದಂತೆ ತಡೆಗೋಡೆ ನಿರ್ಮಾಣ ಮಾಡಿದ್ದು ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ವೆಲ್ಲಸ್ಲಿ ಸೇತುವೆಯಿಂದ ಆಚೆ ಇರುವ ವಸತಿಗೃಹಗಳ ಜನರು ಹೆದ್ದಾರಿ ಮೂಲಕ ಶ್ರೀರಂಗಪಟ್ಟಣ ಪ್ರವೇಶ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಿರಂಗೂರು, ಹೊಸಬಡಾವಣೆ ಹಾಗೂ ವೆಲ್ಲಸ್ಲಿ ಸೇತುವೆ ಮೇಲ್ಭಾಗದಲ್ಲಿ ವಾಸ ಮಾಡುವ ಜನರು ಹೆದ್ದಾರಿಯಲ್ಲಿ ಸಂಚಾರ ಆರಂಭಿಸಿದ್ದಾರೆ.

ವೆಲ್ಲಸ್ಲಿ ಸೇತುವೆ ಅಪಾಯಕಾರಿ ಮಟ್ಟಕ್ಕೆ ತಲುಪಿರುವುದರಿಂದ ರಾತ್ರಿ ವೇಳೆ ಜನರು ಸೇತುವೆ ಮೇಲೆ ಸಂಚಾರ ಮಾಡುವುದನ್ನು ನಿಲ್ಲಿಸುವ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆ ಎರಡೂ ದ್ವಾರದಲ್ಲಿ ತಾತ್ಕಾಲಿಕವಾಗಿ ತಡೆಗೋಡೆ ನಿರ್ಮಿಸಲಾಗಿದೆ. ನದಿಯಲ್ಲಿ ಪ್ರವಾಹ ಕಡಿಮೆಯಾದ ನಂತರ ತಡೆಗೋಡೆ ತೆರವು ಗೊಳಿಸಲಾಗುವುದು ಆ ಭಾಗದ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ತಹಸೀಲ್ದಾರ್‌ ಡಿ.ನಾಗೇಶ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ