ಆ್ಯಪ್ನಗರ

ನೆರೆ ಸಂತ್ರಸ್ತರಿಗೆ ನೆರವಾದ ವಾಟ್ಸ್‌ ಆ್ಯಪ್‌ ಗ್ರೂಪ್‌

ವಿಕ ಸುದ್ದಿಲೋಕ ಮಂಡ್ಯ 'ನೆರೆ ಸಂತ್ರಸ್ತರಿಗೆ ವಾಟ್ಸಾಪ್‌ ಗ್ರೂಪ್‌ನ 'ನೆರವಿಗಾಗಿ ನಾವು ನೀವು' ಎಂಬ ಉದ್ದೇಶದಂತೆಯೇ ನೆರವು ನೀಡುವ ಮೂಲಕ, ಗ್ರೂಪ್‌ನ ಸದಸ್ಯರು ಇತರರಿಗೂ ...

Vijaya Karnataka 23 Aug 2019, 8:43 pm
ಮಂಡ್ಯ: 'ನೆರೆ ಸಂತ್ರಸ್ತರಿಗೆ ವಾಟ್ಸಾಪ್‌ ಗ್ರೂಪ್‌ನ 'ನೆರವಿಗಾಗಿ ನಾವು ನೀವು' ಎಂಬ ಉದ್ದೇಶದಂತೆಯೇ ನೆರವು ನೀಡುವ ಮೂಲಕ, ಗ್ರೂಪ್‌ನ ಸದಸ್ಯರು ಇತರರಿಗೂ ಮಾದರಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಮೆಚ್ಚುಗೆ ವ್ಯಕ್ತಪಡಿಸಿದರು.
Vijaya Karnataka Web whatsapp group which has helped flood victims
ನೆರೆ ಸಂತ್ರಸ್ತರಿಗೆ ನೆರವಾದ ವಾಟ್ಸ್‌ ಆ್ಯಪ್‌ ಗ್ರೂಪ್‌


ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಕೊಡಗಿನ ನೆರೆ ಸಂತ್ರಸ್ಥರಿಗೆ ಸಹಾಯ ಹಸ್ತ ಚಾಚಲು 'ನೆರವಿಗಾಗಿ ನಾವು-ನೀವು' ವಾಟ್ಸಾಪ್‌ ಗ್ರೂಪ್‌ನಿಂದ ಸಂಗ್ರಹಿಸಿ ದಿನಪಯೋಗಿ ವಸ್ತುಗಳನ್ನು ಕೊಂಡೂಯ್ಯಲು ಸಿದ್ಧತೆ ನಡೆಸಿದ್ದ ಸದಸ್ಯರ ಸರಕು ವಾಹನಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

ಸುಮಾರು 2 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ದಿನ ಬಳಕೆ ವಸ್ತುಗಳನ್ನು ಗ್ರೂಪ್‌ ಸದಸ್ಯರು ಸಂಗ್ರಹಿಸಿ ಅದನ್ನು, ಸ್ವತಃ ಸದಸ್ಯರೇ ನೆರೆ ಸಂತ್ರಸ್ತರಿಗೆ ತಲುಪಿಸುವ ಕೆಲಸ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಮಡಿಕೇರಿಯಲ್ಲಿ ಭಾಗ ಸೇರಿದಂತೆ ರಾಜ್ಯದ ನಾನಾ ಕಡೆ ಮಳೆಯಿಂದ ನೆರೆ ಬಂದು ಹಾನಿಯಾಗಿದೆ. ಅಂತಹ ಪ್ರದೇಶಗಳನ್ನು ಗುರುತಿಸಿ ನೆರವು ನೀಡುವ ಮೂಲಕ ಸಂತ್ರಸ್ತರ ಪರವಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು.

ರೈತರು, ಸಾರ್ವಜನಿಕರು, ಸಂಘ-ಸಂಸ್ಥೆಗಳು ಉದಾರವಾಗಿ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಜಿಲ್ಲಾ ಪಂಚಾಯಿತಿ ಸೇರಿದಂತೆ ನಾನಾ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಒಂದು ದಿನದ ಸಂಬಳ ನೀಡುವ ಮೂಲಕ ಸಹಕರಿಸಿದ್ದಾರೆ. ನೆರೆ ಸಂತ್ರಸ್ತರ ನೆರವಿಗೆ ಮತ್ತಷ್ಟು ಸಹಾಯ ಮಾಡುವ ಮನಗಳು ಬೇಕಿವೆ. ಆ ನಿಟ್ಟಿನಲ್ಲಿ ಎಲ್ಲರೂ ಮುಂದೆ ಬರಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ ಮಾತನಾಡಿ, ಕೊಡಗು ಹಾಗೂ ಮಂಡ್ಯ ಜಿಲ್ಲೆಗೆ ಅವಿನಾಭಾವ ಸಂಬಂಧ ಇದೆ. ಸದ್ಯ ಸಂಕಷ್ಟದಲ್ಲಿರುವ ಕೊಡಗಿನ ಜನರಿಗೆ ನೆರವಾಗಲು ಮುಂದೆ ಬಂದಿರುವುದು ಶ್ಲಾಘನೀಯ. ನೆರವಿಗಾಗಿ ನಾವು ನೀವು ವಾಟ್ಸಾಪ್‌ ಗ್ರೂಪ್‌ ಸದಸ್ಯರು ನೆರೆಸಂತ್ರಸ್ತರು ಗೃಹ ಉಪಯೋಗಿ ವಸ್ತುಗಳನ್ನು ಸಂಗ್ರಹಿಸಿ ಕೊಡುಗಿಗೆ ಖುದ್ದಾಗಿ ತೆಗೆದುಕೊಂಡು ಹೋಗುತ್ತಿರುವುದು ಮೆಚ್ಚುಗೆ ವಿಷಯವಾಗಿದೆ ಎಂದರು.

ಸಂಗ್ರಸಿದ ವಸ್ತುಗಳು: ಸೀರೆಗಳು- 30, ಶರ್ಟ್‌- 65, ಜೀನ್ಸ್‌ ಪ್ಯಾಂಟ್‌- 50, ಬೆಡ್‌ ಶೀಟ್‌- 50, ಶಾಲು- 20, ಲುಂಗಿ-10, ಪಂಚೆ, ಟವಲ್ಸ್‌ - 50, ಚಪ್ಪಲಿಗಳು-50 ಜೊತೆ, ಸ್ಯಾನಿಟರಿ ನ್ಯಾಪ್‌ ಕಿನ್ಸ್‌ - 300, ಮಕ್ಕಳ ಒಳಉಡುಪು- 50, ಮಹಿಳೆಯರ ಒಳಉಡುಪು-50, ಪುರುಷರ ಒಳ ಉಡುಪು- 100, ಸೋಪುಗಳು- 300, ಬ್ರಶ್‌ ಗಳು- 200, ಟೂತ್‌ಪೇಸ್ಟ್‌- 200, ಬಟ್ಟೆ ಸೋಪುಗಳು- 500, ಅಕ್ಕಿ- 490 ಕೆ.ಜಿ,

ಬೇಳೆಕಾಳು- 50 ಕೆ.ಜಿ, ನಂದಿನಿ ಗುಡ್‌ ಲೈಫ್‌ ಹಾಲು- 10 ಬಾಕ್ಸ್‌ (ಅರ್ಧ ಲೀ.), ಔಷಧಿಗಳು- ಬಾಕ್ಸ್‌, ಸರ್ಫ್‌- 50 ಕೆ.ಜಿ, ಸ್ಯಾಂಪು- 1500 ಸ್ಯಾಚೆಟ್ಸ…, ತರಕಾರಿಗಳು- 150 ಕೆ.ಜಿ, ಸೇಬು-100 ಕೆ.ಜಿ, ಬಾಳೆಹಣ್ಣು- 60 ಕೆಜಿ, ಕುಡಿಯುವ ನೀರು- 6 ಬಾಕ್ಸ್‌(1ಲೀ) ಸೇರಿದಂತೆ ದಿನೋಪಯೋಗಿ ವಸ್ತುಗಳನ್ನು ಸಂಗ್ರಹಿಸಲಾಗಿತ್ತು.

ಸೆಸ್ಕ್‌ ಅಧೀಕ್ಷ ಕ ಎಂಜಿನಿಯರ್‌ ಎನ್‌.ಶ್ರೀನಿವಾಸಮೂರ್ತಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಂ.ಎಸ್‌.ರಾಜು, ಉದ್ಯಮಿ ಎಂ.ಆರ್‌. ಮಂಜುನಾಥ್‌, ಮನ್‌ಮುಲ್‌ ಮಾಜಿ ನಿರ್ದೇಶಕಿ ನೀನಾ ಪಟೇಲ್‌, ಸ್ವರ್ಣಸಂದ್ರ ಸೋಮು ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ