ಆ್ಯಪ್ನಗರ

ಎಲ್ಲರೂ ಬಿಟ್ಟು ಹೋದಾಗ ಕಣ್ಣೀರು ಹಾಕಿದ್ದೇನೆ: ದೇವೇಗೌಡ

ಎಲ್ಲರೂ ಬಿಟ್ಟು ಹೋದಾಗ ಕಣ್ಣೀರು ಹಾಕಿದ್ದೇನೆ: ದೇವೇಗೌಡ (ಫೋಟೋ ಇದೆ) ವಿಕ ಸುದ್ದಿಲೋಕ ಮಂಡ್ಯ/ಕೆಆರ್‌...

Vijaya Karnataka 5 Apr 2019, 5:00 am
ಮಂಡ್ಯ/ಕೆ.ಆರ್‌.ಪೇಟೆ: ಜನತಾದಳ(ಜಾತ್ಯತೀತ)ದಿಂದ ಬೆಳೆದವರು ಪಕ್ಷ ಬಿಟ್ಟು ಹೋದಾಗ ಜೆಡಿಎಸ್‌ ಕಚೇರಿಯಲ್ಲಿ ನಾನು ಕಣ್ಣೀರು ಹಾಕಿದ್ದೆ. ಎಲ್ಲವೂ ಮುಗಿದೇ ಹೋಯಿತು ಎನ್ನುವ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ ಏಕಾಂಗಿಯಾಗಿ ಹೋರಾಡಿ ಪಕ್ಷ ಕಟ್ಟಿ ಬೆಳೆಸಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.
Vijaya Karnataka Web when every one quit jds i was cried says hd devegowda
ಎಲ್ಲರೂ ಬಿಟ್ಟು ಹೋದಾಗ ಕಣ್ಣೀರು ಹಾಕಿದ್ದೇನೆ: ದೇವೇಗೌಡ


ಕೆ.ಆರ್‌.ಪೇಟೆಯಲ್ಲಿ ಗುರುವಾರ ನಡೆದ ಜೆಡಿಎಸ್‌ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ''ಜೆಡಿಎಸ್‌ ಪಕ್ಷ ವನ್ನು ಯಾರೂ ಮುಗಿಸಲು ಆಗಲ್ಲ. ದೇವರನ್ನು ನಂಬಿ ನಾನು ಪಕ್ಷ ಉಳಿಸಿಕೊಳ್ಳುತ್ತಿದ್ದೀನಿ. ಕುಮಾರಸ್ವಾಮಿ ಕದ್ದು ಸಿಎಂ ಆದ್ರು ಎಂದು ಎಸ್‌.ಎಂ.ಕೃಷ್ಣ ಹೇಳುತ್ತಾರೆ. ಆದರೆ, ನನ್ನ ಅನುಮತಿ ಇಲ್ಲದೆ ಕುಮಾರಸ್ವಾಮಿ ಬಿಜೆಪಿ ಜತೆ ಹೋದರು. ನನ್ನ ಮಗ ಕದ್ದು ಹೋಗುವವನಲ್ಲ,''ಎಂದರು.

''1978ರಲ್ಲೇ ನಾನು ರಾಜ್ಯದ ಮುಖ್ಯಮಂತ್ರಿಯಾಗಬೇಕಿತ್ತು. ಆದರೆ, ಕೆಲವರು ತಪ್ಪಿಸಿದರು. ಇನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಬಳಿಕ ನಿವೇಶನ ಕೊಡಲು ಎಷ್ಟು ಸತಾಯಿಸಿದರು ಗೊತ್ತಾ? ಮಾಜಿ ಪ್ರಧಾನಿಯೊಬ್ಬರಿಗೆ ಒಂದು ನಿವೇಶನ ಕೊಡೋದಕ್ಕೆ ಇಷ್ಟೊಂದು ಸತಾಯಿಸೋದಾ? ಎಂದು ದಿಲ್ಲಿಯಲ್ಲಿದ್ದ ಕುರುಬರ ಹೆಣ್ಣು ಮಗಳೊಬ್ಬರು ಬೇಸರದಿಂದ ಹೇಳಿದ್ದಾಗಿ,'' ದೇವೇಗೌಡರು ಸ್ಮರಿಸಿದರು.

ಕ್ಷೇತ್ರದ ಶಾಸಕ ನಾರಾಯಣಗೌಡ, ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ದೊಡ್ಡಬಳ್ಳಾಪುರ ಮಾಜಿ ಶಾಸಕ ಮುನಿರಾಜು, ವಿಧಾನ ಪರಿಷತ್‌ ಸದಸ್ಯ ರಮೇಶ್‌ಗೌಡ, ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್‌, ಹಾಸನ ಜಿ.ಪಂ ಸದಸ್ಯ ಪುಟ್ಟಸ್ವಾಮಿಗೌಡ, ಜಿ.ಪಂ ಉಪಾಧ್ಯಕ್ಷೆ ಗಾಯತ್ರಿ, ಮಾಜಿ ಅಧ್ಯಕ್ಷೆ ಜೆ.ಪ್ರೇಮಕುಮಾರಿ, ಸದಸ್ಯರಾದ ಎಚ್‌.ಟಿ.ಮಂಜು, ಬಿ.ಎಲ್‌.ದೇವರಾಜು, ರಾಮದಾಸು, ತಾಲೂಕು ಜೆಡಿಎಸ್‌ ಅಧ್ಯಕ್ಷ ವೆಂಕಸುಬ್ಬೇಗೌಡ, ಮುಸ್ಲಿಂ ಸಮಾಜದ ಮುಖಂಡ ನೂರುಲ್ಲಾಖಾನ್‌, ಮುಖಂಡರಾದ ಕೆ.ಶ್ರೀನಿವಾಸ್‌, ಜಾನಕಿರಾಂ, ಕೆ.ಟಿ.ಗಂಗಾಧರ್‌, ಎಪಿಎಂಸಿ ಅಧ್ಯಕ್ಷ ನಾಗರಾಜೇಗೌಡ, ಮಾಜಿ ಅಧ್ಯಕ್ಷ ಲೋಕೇಶ್‌ ಭಾಗವಹಿಸಿದ್ದರು.

ದೇವೇಗೌಡರೇ ನಮಗೆ ಡಿ ಬಾಸ್‌
ಕೆ.ಆರ್‌.ಪೇಟೆಯಲ್ಲಿ ಗುರುವಾರ ನಡೆದ ಜೆಡಿಎಸ್‌ ಬಹಿರಂಗ ಪ್ರಚಾರ ಸಭೆಯಲ್ಲಿ ದೇವೇಗೌಡರೇ ನಮಗೆ ಬಾಸ್‌ ಎಂದು ಜೆಡಿಎಸ್‌ ಕಾರ‍್ಯಕರ್ತರು 'ಧಿಡಿ ಬಾಸ್‌.. ಡಿ ಬಾಸ್‌..' ಎಂಬ ಘೋಷಣೆ ಮೊಳಗಿಸಿದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮಂಡ್ಯ ಜಿಲ್ಲೆಯ ಬಾಸ್‌, ರೈತರ ಬಾಸ್‌, ಕಾವೇರಿ ನದಿ ನೀರು ಹಂಚಿಕೆಯ ಹೋರಾಟದ ಬಾಸ್‌, ದೇವೇಗೌಡರು ನಮ್ಮೆಲ್ಲರ ಬಾಸ್‌ ಎಂಬಿತ್ಯಾದಿ ಘೋಷಣೆಗಳನ್ನು ಮೊಳಗಿಸುವ ಮೂಲಕ ನಟ ದರ್ಶನ್‌ ಅಭಿಮಾನಿಗಳಿಗೆ ತಿರುಗೇಟು ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ