ಆ್ಯಪ್ನಗರ

ಚುನಾವಣೆ ಹೊಸ್ತಿಲಲ್ಲೇ ದಾಳಿಯೇಕೆ? ಮೊದಲೇ ನಡೆಸಲು ತಾಕತ್ತು ಇರಲಿಲ್ವಾ?, ಸಚಿವ ಪುಟ್ಟರಾಜು

ಪುಟ್ಟರಾಜು ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದ್ದಾರೆ. ಕೇಂದ್ರ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Vijaya Karnataka Web 28 Mar 2019, 9:26 am
ಮಂಡ್ಯ: ಚುನಾವಣೆ ಹೊಸ್ತಿಲಲ್ಲಿ ದಾಳಿ ಮಾಡುವ ಬದಲು ಮೊದಲೇ ದಾಳಿ ಮಾಡಬಹುದಲ್ಲವೇ? ಆಗ ದಾಳಿ ನಡೆಸಲು ತಾಕತ್ತು ಇರಲಿಲ್ವಾ? ಇದು ರಾಜಕೀಯ ಪ್ರೇರಿತವಲ್ಲದೆ ಮತ್ತೇನು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಣ್ಣ ನೀರಾವರಿ ಸಚಿವ ಸಿ ಎಸ್ ಪುಟ್ಟರಾಜು ಪ್ರಶ್ನಿಸಿದ್ದಾರೆ.
Vijaya Karnataka Web Puttaraju


ತಮ್ಮ ನಿವಾಸದ ಮೇಲೆ ಐ ಟಿ ಅಧಿಕಾರಿಗಳು ದಾಳಿ ನಡೆಸಿರುವ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಅವರು, ಇದು ರಾಜಕೀಯ ಪ್ರೇರಿತ ದಾಳಿ . ಐಟಿ ದಾಳಿ ಅಲ್ಲ, ರಾಜಕೀಯ ದಾಳಿ. ಇದರ ಹಿಂದೆ ಕೇಂದ್ರದ ಕೈವಾಡವಿದೆ. ಸಿಎಂ ಆಪ್ತ ಎನ್ನುವ ಕಾರಣಕ್ಕೆ ನನ್ನ ಮನೆ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಿದರು.

ಸಿಎಂ ಕುಮಾರಸ್ವಾಮಿ ಅವರೇನೂ ನನ್ನ ಮನೆಯಲ್ಲಿ ಹಣ ಇಟ್ಟಿದ್ದಾರೆ ಎಂಬ ಗುಮಾನಿ ಇವರದ್ದು. ಬಂದವರಿಗೆ ಖಾಲಿ ಡಬ್ಬ ಸಿಗುತ್ತದೆ ಎಂದು ಅವರಿಗೆ ಗೊತ್ತಿಲ್ಲ. ದಾಳಿ ಬಗ್ಗೆ ಬಿಜೆಪಿ ಮಹಾ ನಾಯಕರನ್ನು ಕೇಳಬೇಕು ಎಂದು ವ್ಯಂಗ್ಯವಾಡಿದರು.

ತಪ್ಪು ಮಾಡಿದ್ದರೆ ತಾನೇ ಹೆದರೋದು? ನಾನು ರೈತಾಪಿ ಕುಟುಂಬದಿಂದ ಬಂದವನು. ಎಲ್ಲಾ ಲೆಕ್ಕವನ್ನು ಪಕ್ಕ ಇಟ್ಟಿದ್ದೇನೆ. 5 ರೂ. ಸಂಪಾದನೆ ಮಾಡಿದ್ದಕ್ಕೂ ಲೆಕ್ಕ ಇದೆ. ಅದನ್ನ ಖರ್ಚು ಮಾಡಿದ್ದಕ್ಕೂ ಲೆಕ್ಕ ಇಟ್ಟಿದ್ದೇನೆ ಎಂದು ಹೇಳಿದರು.

ಪಾಂಡವಪುರ ತಾಲೂಕು ಚಿನಕುರುಳಿ ಗ್ರಾಮದಲ್ಲಿ ಸಚಿವ ಪುಟ್ಟರಾಜು ಅವರ ನಿವಾಸದ ಎದುರು ಜೆಡಿಎಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪುಟ್ಟರಾಜು ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದ್ದಾರೆ. ಕೇಂದ್ರ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ