ಆ್ಯಪ್ನಗರ

ಪ್ರಿಯಕರನ ಜತೆ ಸೇರಿ ಪತಿ ಹತ್ಯೆ

ಮಂಜ ಎಂಬುವವನ ಜತೆ ಅನೈತಿಕ ಸಂಬಂಧ ಹೊಂದಿದ್ದ ಆಕೆ , ಮಂಜನ ಸ್ನೇಹಿತ ಗುರು ಹಾಗೂ ಮತ್ತಿಬ್ಬರ ಜೊತೆ ಸೇರಿ ಪತಿಗೆ ಸ್ಕೆಚ್ ಹಾಕಿ, ಕೊಲೆಗೈದು ಕೆರೆ ದಡದಲ್ಲಿ ಮಣ್ಣು ಮಾಡಿದ್ದರು. ಬಳಿಕ ಗಂಡ ಒಂದು ವಾರದಿಂದ ನಾಪತ್ತೆಯಾಗಿದ್ದಾನೆ ಎಂದು ನಾಟಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.

Vijaya Karnataka Web 31 May 2019, 11:47 am
ಮಂಡ್ಯ: ಪ್ರಿಯಕರನ ಜೊತೆ ಸೇರಿ ಪತ್ನಿ ಗಂಡನನ್ನೇ ಕೊಲೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಗ್ರಾಮದಲ್ಲಿ ನಡೆದಿದೆ.
Vijaya Karnataka Web Crime knife


ಸತೀಶ್ ಕೊಲೆಯಾದ ದುರ್ದೈವಿ ಪತಿಯಾಗಿದ್ದು, ಆರೋಪಿ ಕಾವ್ಯ ಈತನ ಪತ್ನಿಯಾಗಿದ್ದಾಳೆ.

ಮಂಜ ಎಂಬುವವನ ಜತೆ ಅನೈತಿಕ ಸಂಬಂಧ ಹೊಂದಿದ್ದ ಆಕೆ , ಮಂಜನ ಸ್ನೇಹಿತ ಗುರು ಹಾಗೂ ಮತ್ತಿಬ್ಬರ ಜೊತೆ ಸೇರಿ ಪತಿಗೆ ಸ್ಕೆಚ್ ಹಾಕಿ, ಕೊಲೆಗೈದು ಕೆರೆ ದಡದಲ್ಲಿ ಮಣ್ಣು ಮಾಡಿದ್ದರು. ಬಳಿಕ ಗಂಡ ಒಂದು ವಾರದಿಂದ ನಾಪತ್ತೆಯಾಗಿದ್ದಾನೆ ಎಂದು ನಾಟಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.

ಅನುಮಾನ ಬಂದು ಪೊಲೀಸರು ಕಾವ್ಯಳನ್ನು ವಿಚಾರಣೆ ಮಾಡಿದಾಗ ಕೊಲೆ ಮಾಡಿದ ಸತ್ಯ ಬಾಯ್ಬಿಟ್ಟಿದ್ದಾಳೆ.

ಕೃತ್ಯದಲ್ಲಿ‌ ಭಾಗಿಯಾದ ಐವರಲ್ಲಿ ಪ್ರಿಯಕರ ಮಂಜ, ಆತನ ಸಹಚರರಾದ ಗುರು, ಅರ್ಜುನ್ನನ್ನು ಬಂಧಿಸಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.

ಪ್ರಕರಣ ಬೇಧಿಸಿರುವ ಅರಕೆರೆ ಪೊಲೀಸರು ಇಂದು ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ದು ಶವ ಹೊರ ತೆಗೆಸಿ ಪಂಚನಾಮೆ ಮಾಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ