ಆ್ಯಪ್ನಗರ

ಕಾಡುಬೆಕ್ಕು ಬೇಟೆ: ಐವರ ಬಂಧನ

ವಿಕ ಸುದ್ದಿಲೋಕ ಮೇಲುಕೋಟೆ ಮೇಲುಕೋಟೆ ವನ್ಯಜೀವಿ ಅರಣ್ಯ ವಲಯದ ನಾರಾಯಣದುರ್ಗ ಗೊದ್ದಪ್ಪನಕಟ್ಟೆ ಅರಣ್ಯಪ್ರದೇಶದಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಐವರನ್ನು ವಲಯ ...

Vijaya Karnataka 13 Jun 2019, 5:00 am
ಮೇಲುಕೋಟೆ: ಮೇಲುಕೋಟೆ ವನ್ಯಜೀವಿ ಅರಣ್ಯ ವಲಯದ ನಾರಾಯಣದುರ್ಗ ಗೊದ್ದಪ್ಪನಕಟ್ಟೆ ಅರಣ್ಯಪ್ರದೇಶದಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಐವರನ್ನು ವಲಯ ಅರಣ್ಯಾಧಿಕಾರಿ ನೇತೃತ್ವದ ತಂಡ ಮಾಲು ಸಮೇತ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.
Vijaya Karnataka Web wild cat hunting 5 people arrested in melukote
ಕಾಡುಬೆಕ್ಕು ಬೇಟೆ: ಐವರ ಬಂಧನ


ಮಂಗಳವಾರ ಮಧ್ಯಾಹ್ನ ಕಾಡುಬೆಕ್ಕನ್ನು ಬೇಟೆಯಾಡುತ್ತಿದ್ದ ವೇಳೆ ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ರಾಯಸಮುದ್ರ ಗ್ರಾಮದ ಚಂದ್ರ (32), ಗಣೇಶ (24), ನವೀನಗೌಡ (25), ಮದೇನಹಳ್ಳಿಯ ನಾಗ(29) ತಿರುಗನಹಳ್ಳಿಯ ಲೋಕೇಶ್‌ (29) ಬಂಧಿತರು.

ಬೇಟೆಯಾಡಿದ್ದ ಒಂದು ಕಾಡು ಬೆಕ್ಕು, ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಮಚ್ಚನ್ನು ವಶಪಡಿಸಿಕೊಳ್ಳಲಾಗಿದೆ. ಪಾಂಡವಪುರ ನ್ಯಾಯಾಧೀಶರ ಮುಂದೆ ಆರೋಪಿಗಳನ್ನು ಹಾಜರುಪಡಿಸಿದ್ದು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ವಲಯ ಅರಣ್ಯಾಧಿಕಾರಿ ಅನನ್ಯ, ಅರಣ್ಯಾಧಿಕಾರಿ ಕುಮಾರ ಮುರಳಿ, ಸುರೇಶ ಅಯ್ಯಪ್ಪ, ಸಿಬ್ಬಂದಿ ದೇವರಾಜ್‌, ವೆಂಕಟೇಶ, ಜಗ, ನಿಂಗ, ಬೋರೇಗೌಡ ನಿಂಗರಾಜು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ