ಆ್ಯಪ್ನಗರ

ಕಿರುಗಾವಲು ಕೆರೆಯಲ್ಲಿ ಕಾಡಾನೆ ಹಿಂಡು: ಆತಂಕ

ಆತಂಕ ವಿಕ ಸುದ್ದಿಲೋಕ ಮಳವಳ್ಳಿ (ಮಂಡ್ಯ ಜಿಲ್ಲೆ) ತಾಲೂಕಿನ ಕಿರುಗಾವಲು ಸಮೀಪದ ಕೆರೆ ಬಳಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಆತಂಕ ಮೂಡಿಸಿವೆ...

Vijaya Karnataka 7 Jul 2019, 5:00 am
ಮಳವಳ್ಳಿ (ಮಂಡ್ಯ ಜಿಲ್ಲೆ): ತಾಲೂಕಿನ ಕಿರುಗಾವಲು ಸಮೀಪದ ಕೆರೆ ಬಳಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಆತಂಕ ಮೂಡಿಸಿವೆ.
Vijaya Karnataka Web wild elephants at malavalli taluk kirugavalu lake
ಕಿರುಗಾವಲು ಕೆರೆಯಲ್ಲಿ ಕಾಡಾನೆ ಹಿಂಡು: ಆತಂಕ


ತಾಲೂಕಿನ ಕೊದೈನಕೊಪ್ಪಲು ಹಾಗೂ ದೋರನಹಳ್ಳಿ ಮಧ್ಯೆ ಇರುವ ಕೆರೆ ಸಮೀಪ ನಾಲ್ಕು ಕಾಡಾನೆ ಬೀಡು ಬಿಟ್ಟಿವೆ. ಕೆರೆ ಮಧ್ಯೆ ಬೆಳೆದಿರುವ ಗಿಡ-ಗಂಟಿಗಳ ನಡುವೆ ಆನೆಗಳು ಓಡಾಡುತ್ತಿವೆ. ಸ್ಥಳದಲ್ಲಿ 10 ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಶನಿವಾರ ರಾತ್ರಿ ಕಾರ್ಯಾಚರಣೆ ನಡೆಸಿ ಶಿಂಷಾ ಕಾಡಿಗೆ ಆನೆಗಳನ್ನು ಓಡಿಸಲು ಸಿದ್ಧತೆ ಕೈಗೊಂಡಿದ್ದಾರೆ.

''ಆನೆಗಳು ಶುಕ್ರವಾರ ಬಿ.ಜಿ.ಪುರ ಗ್ರಾಮದ ಬಾಳೆ ತೋಟವೊಂದರಲ್ಲಿ ಇದ್ದವು. ಅವುಗಳನ್ನು ಕಾಡಿಗಟ್ಟಿದ್ದೆವು. ಇದೀಗ ಮತ್ತೆ ಅಲ್ಲಿಂದ ಇಲ್ಲಿಗೆ ಬಂದಿವೆ. ಇವುಗಳನ್ನು ಶಿಂಷಾ ಕಾಡಿಗಟ್ಟಲು ಶನಿವಾರ ರಾತ್ರಿ ಕಾರ್ಯಾಚರಣೆ ನಡೆಸಲಾಗುವುದು,'' ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ