ಆ್ಯಪ್ನಗರ

ರೈತ ಚಳವಳಿಗಾಗಿ ಅಮೆರಿಕದಲ್ಲಿನ ಕಂಪನಿ ಮಾರಾಟ ಮಾಡಿದ್ದೇನೆ: ದರ್ಶನ್‌ ಪುಟ್ಟಣ್ಣಯ್ಯ

ಸಕ್ಕರೆ ಕಾರ್ಖಾನೆಗಳು ಇಳುವರಿ ಆಧರಿಸಿ ಕಬ್ಬಿಗೆ ಬೆಲೆ ನೀಡಬೇಕೆಂಬ ನಿಯಮವಿದೆ. ಆದರೆ, ಬಹುತೇಕ ಕಾರ್ಖಾನೆಯವರು ಶೇ. 8.5ಕ್ಕಿಂತ ಹೆಚ್ಚು ಇಳುವರಿಯನ್ನೇ ತೋರುತ್ತಿಲ್ಲ. ಮಂಡ್ಯ ಜಿಲ್ಲೆಯಲ್ಲಿ 517 ತಳಿಯ ಕಬ್ಬು ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿದೆ.

Vijaya Karnataka 9 Nov 2021, 10:01 pm
ಮಂಡ್ಯ: ರೈತ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ನಿಟ್ಟಿನಲ್ಲಿಅಮೆರಿಕದಲ್ಲಿನ ನಮ್ಮ ಕಂಪನಿಯನ್ನು ಮಾರಾಟ ಮಾಡಿದ್ದೇನೆ. ಅದರ ಒಂದಷ್ಟು ಕೆಲಸ ಕಾರ‍್ಯಗಳು ಬಾಕಿ ಉಳಿದಿವೆ. ಅವುಗಳು ಪೂರ್ಣಗೊಳ್ಳಲು ಸ್ವಲ್ಪ ಕಾಲಾವಕಾಶ ಬೇಕು. ಹೀಗಾಗಿ 6 ತಿಂಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ಜಿಲ್ಲೆಯಲ್ಲೇ ಇರುತ್ತೇನೆ ಎಂದು ರಾಜ್ಯ ರೈತ ಸಂಘದ ಸಂಘಟನಾ ಕಾರ‍್ಯದರ್ಶಿ ದರ್ಶನ್‌ ಪುಟ್ಟಣ್ಣಯ್ಯ ತಿಳಿಸಿದರು.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಮಂಡ್ಯಕ್ಕೆ ವಾಪಸಾಗುವ ಉದ್ದೇಶದಿಂದಲೇ ಕಂಪನಿ ಮಾರಾಟ ಮಾಡಿದ್ದೇನೆ. ಆದರೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ಆಲೋಚಿಸಿಲ್ಲ. ವಿದೇಶದಿಂದ ಪೂರ್ಣ ಪ್ರಮಾಣದಲ್ಲಿ ವಾಪಸಾದ ಬಳಿಕ ರೈತ ಸಂಘದ ಎಲ್ಲ ಮುಖಂಡರು, ಕಾರ‍್ಯಕರ್ತರೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೃಷಿ ಕಾಯ್ದೆ ವಿರೋಧಿಸಿ ನವೆಂಬರ್ 26ರಂದು ಬೆಂಗಳೂರು - ಮೈಸೂರು ಹೆದ್ದಾರಿ ಬಂದ್‌..!

''ತಂದೆಯ ಹಾದಿಯಲ್ಲೇ ಹೋರಾಟದಲ್ಲಿ ಮುಂದುವರಿಯುತ್ತೇನೆ. ರೈತಸಂಘಕ್ಕೆ ಯುವಜನರು ಹೆಚ್ಚೆಚ್ಚು ಬರಬೇಕು. ರೈತ ಚಳವಳಿಯಲ್ಲಿ ಸಕ್ರಿಯರಾಗಬೇಕು. ಆಗ ರೈತ ಸಂಘದ ಶಕ್ತಿ ಇನ್ನಷ್ಟು ಹೆಚ್ಚಾಗಲಿದೆ. ಇದಕ್ಕೆ ಪೂರಕವಾಗಿ ಯುವಕರಿಗೆ ಆದ್ಯತೆ ನೀಡಿ ತರಬೇತಿ ಶಿಬಿರಗಳನ್ನು ನಡೆಸಲಾಗುವುದು'' ಎಂದು ಹೇಳಿದರು.

ರೈತ ಸಂಘದ ವಿಚಾರ ಮತ್ತು ಶಕ್ತಿ ದೊಡ್ಡದಿದೆ. ಇದರ ನಡುವೆಯೂ ರೈತ ಚಳವಳಿಗೆ ಶಕ್ತಿ ತುಂಬುವ ಪ್ರಯತ್ನ ನಡೆಯುತ್ತಿದೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ರೈತಸಂಘ ಹೊಸ ರೂಪ ಪಡೆಯಲಿದೆ. ರೈತ ಚಳವಳಿಯಲ್ಲಿ ಯುವಶಕ್ತಿಯ ಪ್ರಮಾಣವೂ ಹೆಚ್ಚಲಿದೆ.
ಬಡಗಲಪುರ ನಾಗೇಂದ್ರ, ರಾಜ್ಯಾಧ್ಯಕ್ಷ, ರೈತಸಂಘ

''ಸಕ್ಕರೆ ಕಾರ್ಖಾನೆಗಳು ಇಳುವರಿ ಆಧರಿಸಿ ಕಬ್ಬಿಗೆ ಬೆಲೆ ನೀಡಬೇಕೆಂಬ ನಿಯಮವಿದೆ. ಆದರೆ, ಬಹುತೇಕ ಕಾರ್ಖಾನೆಯವರು ಶೇ. 8.5ಕ್ಕಿಂತ ಹೆಚ್ಚು ಇಳುವರಿಯನ್ನೇ ತೋರುತ್ತಿಲ್ಲ. ಮಂಡ್ಯ ಜಿಲ್ಲೆಯಲ್ಲಿ 517 ತಳಿಯ ಕಬ್ಬು ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿದೆ. ಆಲೆಮನೆಗಳಲ್ಲಿ ಒಂದು ಟನ್‌ ಕಬ್ಬಿಗೆ 110 -120 ಕಿಲೋ ಬೆಲ್ಲಇಳುವರಿ ಬರುತ್ತಿದೆ. ಆದರೆ, ಕಾರ್ಖಾನೆಯಲ್ಲಿ ಸಕ್ಕರೆ ಇಳುವರಿ ಶೇ. 8.5 ಮಾತ್ರ ಎಂಬುದನ್ನು ನಂಬಲು ಸಾಧ್ಯವೇ? ಕನಿಷ್ಠ ಶೇ. 11 ರಷ್ಟು ಇಳುವರಿ ಬರುತ್ತಿದೆ. ಇದನ್ನು ಕಾರ್ಖಾನೆಗಳು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಮಂಡ್ಯದಲ್ಲಿ ದುಬೈ ಶೇಖ್‌ ಆದ ಮಾಜಿ ಸಿಎಂ ಸಿದ್ದರಾಮಯ್ಯ..!

ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು 180 ಕೋಟಿ ರೂ. ಕಬ್ಬಿನ ಬಾಕಿ ಉಳಿಸಿಕೊಂಡಿವೆ. ಇದನ್ನು ಕೊಡಿಸಲು ಸರಕಾರ ಮತ್ತು ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಭತ್ತ ಖರೀದಿ ಕೇಂದ್ರಗಳನ್ನು ವರ್ಷಪೂರ್ತಿ ನಿರಂತರವಾಗಿ ತೆರೆಯಬೇಕು. ಎಂಎಸ್‌ಪಿ ಬೆಲೆಯನ್ನು ಕಾನೂನುಬದ್ಧಗೊಳಿಸಬೇಕು. ಭತ್ತ ಕಟಾವು ಬೆಲೆಯನ್ನು ಜಿಲ್ಲಾಡಳಿತ ನಿರ್ಧರಿಸಿ, ದಲ್ಲಾಳಿಗಳ ಹಾವಳಿ ತಪ್ಪಿಸಬೇಕು ಎಂದು ಮಂಡ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ