ಆ್ಯಪ್ನಗರ

ನೀವೇ 'ಗೋ ಬ್ಯಾಕ್' ಅಂದ್ರೆ ನಾವೆಲ್ಲಿ ಹೋಗಬೇಕು: ಮಂಡ್ಯ ಜನತೆ ಮುಂದೆ ಸಿಎಂ ಅಳಲು

ನೀವು ಒರಟರಲ್ಲ. ಮುಗ್ದರು. ಪ್ರೀತಿಸಿದವರನ್ನು ತಲೆ ಮೇಲೆ ಹೊತ್ತು ಮೆರೆಸುತ್ತೀರಾ. ಆದೇ ರೀತಿ ದ್ವೇಷಿಸಲು ಶುರು ಮಾಡಿದರೆ, ಪಾತಾಳಕ್ಕೆ ಹಾಗಿ ತುಳಿಯುತ್ತೀರಾ. ನಿಖಿಲ್ ನೋವಿನಲ್ಲಿರುವ ಜನರ ಕಣ್ಣೀರು ಒರೆಸಲು ಬಂದಿದ್ದಾನೆ ಹೊರತು, ಲೋಕಸಭೆ ಸದಸ್ಯನಾಗಿ ಮೆರೆಯಲು ಅಲ್ಲ. ಮಂಡ್ಯ ಜನರನ್ನು ಮರೆಯಬೇಡ ಎಂದು ಮಗನಿಗೆ ಹೇಳುತ್ತೇನೆಂದು ಅವರು ಹೇಳಿದರು.

Vijaya Karnataka Web 14 Mar 2019, 7:45 pm
ಮಂಡ್ಯ: 'ಇಲ್ಲಿಯವರೆಗೂ ನೀವೇ ನಮ್ಮನ್ನು ಬೆಳೆಸಿದವರು. ಈಗ ನೀವೇ 'ಗೋ ಬ್ಯಾಕ್' ಅಂದ್ರೆ ಹೇಗೆ. ನಾವು ಇನ್ನೆಲ್ಲಿಗೆ ಹೋಗಬೇಕು' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಜನತೆ ಬಳಿ ಅಳಲು ತೊಡಿಕೊಂಡಿದ್ದಾರೆ.
Vijaya Karnataka Web kumarswamy


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಒರಟರಲ್ಲ. ಮುಗ್ದರು. ಪ್ರೀತಿಸಿದವರನ್ನು ತಲೆ ಮೇಲೆ ಹೊತ್ತು ಮೆರೆಸುತ್ತೀರಾ. ಆದೇ ರೀತಿ ದ್ವೇಷಿಸಲು ಶುರು ಮಾಡಿದರೆ, ಪಾತಾಳಕ್ಕೆ ಹಾಗಿ ತುಳಿಯುತ್ತೀರಾ. ನಿಖಿಲ್ ನೋವಿನಲ್ಲಿರುವ ಜನರ ಕಣ್ಣೀರು ಒರೆಸಲು ಬಂದಿದ್ದಾನೆ ಹೊರತು, ಲೋಕಸಭೆ ಸದಸ್ಯನಾಗಿ ಮೆರೆಯಲು ಅಲ್ಲ. ಮಂಡ್ಯ ಜನರನ್ನು ಮರೆಯಬೇಡ ಎಂದು ಮಗನಿಗೆ ಹೇಳುತ್ತೇನೆಂದು ಅವರು ಹೇಳಿದರು.

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ 'ಗೋ ಬ್ಯಾಕ್' ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ನಾವು ಯಾರಿಗೋ ಹೆದರಿ ಓಡಿ ಹೋಗುವ ಜಾಯಮಾನದವರಲ್ಲ. ನೀವೇ ನಮ್ಮನ್ನು ಬೆಳೆಸಿದವರು. ಈಗ ನೀವೇ 'ಗೋ ಬ್ಯಾಕ್' ಅಂದ್ರೆ ಹೇಗೆ. ನಾವು ಇನ್ನೆಲ್ಲಿಗೆ ಹೋಗಬೇಕು' ಎಂದು ಗೋಗರೆದರು.

ಹಾಸನ ಜನ ಕೈಬಿಟ್ಟಗಾ ದೇವೇಗೌಡರನ್ನು ಕೈ ಹಿಡಿದಿದ್ದೀರಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಪ್ರಚಾರಕ್ಕೆ ಬಂದಿದ್ದ. ಇವತ್ತು ನಿಮ್ಮ ಸೇವೆ ಮಾಡಬೇಕಿದೆ. ಇಡೀ ರಾಜ್ಯವನ್ನು ನೋಡಬೇಕಿದೆ. ನಾನು ಮಂಡಿಸಿದ್ದ ಬಜೆಟ್‌ನ್ನು ಮಂಡ್ಯ ಬಜೆಟ್ ಎಂದರು. ನಿಮ್ಮ ಹೃದಯದಿಂದ ನನ್ನನ್ನ ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಿಎಂ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ