ಆ್ಯಪ್ನಗರ

ನಾಲೆಗೆ ಜಾರಿ ಬಿದ್ದು ಮಹಿಳೆ ಸಾವು

ನಾಲೆಗೆ ಜಾರಿ ಬಿದ್ದು ಮಹಿಳೆ ಸಾವು ವಿಕ ಸುದ್ದಿಲೋಕ, ಕೆಆರ್‌...

Vijaya Karnataka 26 Sep 2018, 5:00 am
ಕೆ.ಆರ್‌.ಪೇಟೆ: ತಾಲೂಕಿನ ನಾಟನಹಳ್ಳಿ ಗ್ರಾಮದ ಬಳಿಯಿರುವ ಹೇಮಾವತಿ ನಾಲೆಯಲ್ಲಿ ಬಟ್ಟೆ ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮಹಿಳೆ ಮೃತಪಟ್ಟಿದ್ದಾರೆ.
Vijaya Karnataka Web woman was died felled into nala
ನಾಲೆಗೆ ಜಾರಿ ಬಿದ್ದು ಮಹಿಳೆ ಸಾವು


ಗ್ರಾಮದ ಲೇಟ್‌ ದೇವೇಗೌಡರ ಪತ್ನಿ ಜಯಮ್ಮ (50) ಮೃತರು.

ಜಯಮ್ಮ ಅವರು ಬೆಳಗ್ಗೆ ಬಟ್ಟೆ ತೊಳೆಯಲು ನಾಲೆಯ ಬಳಿಗೆ ತೆರಲಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದಿದ್ದಾರೆ. ಅವರ ಜತೆ ಬಟ್ಟೆ ತೊಳೆಯಲು ತೆರಳಿದ್ದ ಮಹಿಳೆಯರು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಗ್ರಾಮಸ್ಥರು ಬಂದು ಹುಡುಕಿದಾಗ ಮೂಡನಹಳ್ಳಿ ಗ್ರಾಮದ ಬಳಿ ನಾಲೆಯಲ್ಲಿ ಜಯಮ್ಮ ಅವರ ಮೃತದೇಹ ಸಿಕ್ಕಿದೆ. ವಿಷಯ ತಿಳಿದು ಅವರ ಪುತ್ರಿಯರು ಗ್ರಾಮಕ್ಕೆ ಬಂದು ಗ್ರಾಮಸ್ಥರ ಸಹಕಾರದೊಂದಿಗೆ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯಾವುದೇ ದೂರು ದಾಖಲಾಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ