ಆ್ಯಪ್ನಗರ

ಗಾಯಗೊಂಡಿದ್ದ ಹಾವಿನ ರಕ್ಷಣೆ

ಶಾಂತಿಕೊಪ್ಪಲು ಬಳಿ ಪೆಟ್ಟು ಬಿದ್ದು ಬೆನ್ನು ಮೂಳೆ ಮುರಿದ ಹಾವಿಗೆ ಶಸ್ತ್ರ ಚಿಕಿತ್ಸೆ ಕೊಡಿಸಿ ಉರಗತಜ್ಞ ಕೆಂಪರಾಜು ಪ್ರಾಣಿಪ್ರೀತಿ ಮೆರೆದಿದ್ದಾರೆ.

Vijaya Karnataka 8 Dec 2018, 5:00 am
ಶ್ರೀರಂಗಪಟ್ಟಣ : ಶಾಂತಿಕೊಪ್ಪಲು ಬಳಿ ಪೆಟ್ಟು ಬಿದ್ದು ಬೆನ್ನು ಮೂಳೆ ಮುರಿದ ಹಾವಿಗೆ ಶಸ್ತ್ರ ಚಿಕಿತ್ಸೆ ಕೊಡಿಸಿ ಉರಗತಜ್ಞ ಕೆಂಪರಾಜು ಪ್ರಾಣಿಪ್ರೀತಿ ಮೆರೆದಿದ್ದಾರೆ.
Vijaya Karnataka Web wounded snake protection
ಗಾಯಗೊಂಡಿದ್ದ ಹಾವಿನ ರಕ್ಷಣೆ


ಗ್ರಾಮದ ಬಳಿ ನಾಗರ ಹಾವೊಂದು ರಸ್ತೆ ದಾಟುವಾಗ ಬೈಕ್‌ ಹಾವಿನ ದೇಹದ ಮೇಲೆ ಹರಿದಿತ್ತು. ನಿತ್ರಾಣವಾಗಿ ಮುಂದೆ ಹೋಗಲು ಸಾಧ್ಯವಾಗದೆ ರಸ್ತೆ ಮಗ್ಗುಲಲ್ಲೇ ಮಲಗಿತ್ತು. ಇದನ್ನು ನೋಡಿದ ರೈತರೊಬ್ಬರು ಕೆಂಪರಾಜುಗೆ ದೂರವಾಣಿ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಕೆಂಪರಾಜು ಹಾವನ್ನು ಹಿಡಿದು ನೋಡಿದಾಗ ತಲೆ ಕೆಳಗಿನ ಮೂಳೆ ಮುರಿದು ಹೊರ ಬಂದಿತ್ತು. ನೀರು ಕುಡಿಸಿ ಸ್ವಲ್ಪ ಚೇತರಿಸಿಕೊಂಡ ನಂತರ ಹಾವನ್ನು ಪಶು ಚಿಕಿತ್ಸಾಲಯಕ್ಕೆ ತೆಗೆದುಕೊಂಡು ಹೋಗಿ ಶಸ್ತ್ರ ಚಿಕಿತ್ಸೆ ಕೊಡಿಸಿದ್ದು, ಚೇತರಿಸಿಕೊಂಡ ಬಳಿಕ ಅರಣ್ಯಕ್ಕೆ ಬಿಡುವುದಾಗಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ