ಆ್ಯಪ್ನಗರ

ಶ್ರೀರಂಗಪಟ್ಟಣದಲ್ಲಿ ಮತ್ತೊಂದು ಹಲ್ಲೆ ಪ್ರಕರಣ: ಯುವಕನನ್ನು ಕಾರಿನಲ್ಲಿ ಕರೆದೊಯ್ದು ಮೊಳೆಯಿಂದ ಚುಚ್ಚಿದ ದುಷ್ಕರ್ಮಿಗಳು

ತೊಡೆಯ ಭಾಗಕ್ಕೆ ರಾಡಿನಿಂದ ಹೊಡೆದಿದ್ದಾರೆ. ಜೇಬಿನಲ್ಲಿದ್ದ 200 ರೂಪಾಯಿಯನ್ನು ಕಸಿದುಕೊಂಡು ಶ್ರೀರಂಗಪಟ್ಟಣ ಹೊರವಲಯದಲ್ಲಿ ರುವ ಕರಿಘಟ್ಟ ಸಿಡಿಎಸ್ ನಾಲೆ ಏರಿ ಮೇಲೆ ಆತನನ್ನು ಎಸೆದು ಹೋಗಿದ್ದಾರೆ.

Vijaya Karnataka Web 15 Feb 2020, 4:41 pm
ಶ್ರೀರಂಗಪಟ್ಟಣ: ಪಾಂಡವಪುರದಲ್ಲಿ ಬಸ್ಸಿಗಾಗಿ ಕಾಯುತ್ತ ನಿಂತಿದ್ದ ವಿದ್ಯಾರ್ಥಿಯನ್ನು ದುಷ್ಕರ್ಮಿಗಳು ಕಾರಿನಲ್ಲಿ ಕರೆದೊಯ್ದು ಮರ್ಮಾಂಗ ಕತ್ತರಿಸಿದ್ದ ಘಟನೆ ಮಾಸುವ ಮುನ್ನವೇ ಶನಿವಾರ ಪಾಂಡವಪುರ ಟೌನ್ ವಿಜಯಬ್ಯಾಂಕ್ ಮುಂಭಾಗ ನಡೆದುಕೊಂಡು ಹೋಗುತ್ತಿದ್ದ ಯುವಕನನ್ನು ಮೂವರು ದುಷ್ಕರ್ಮಿಗಳು ಕಾರಿನಲ್ಲಿ ಕರೆದೊಯ್ದು ಬಲಗಡೆ ಎದೆಯ ಭಾಗಕ್ಕೆ ಹ್ಯಾಂಡ್ ಗ್ರಿಪ್ ಮೊಳೆಯಿಂದ ಚುಚ್ಚಿ ಗಾಯಗೊಳಿಸಿದ್ದಾರೆ.
Vijaya Karnataka Web ಹಲ್ಲೆಗೊಳಗಾದ ಯುವಕ
ಹಲ್ಲೆಗೊಳಗಾದ ಯುವಕ


ತೊಡೆಯ ಭಾಗಕ್ಕೆ ರಾಡಿನಿಂದ ಹೊಡೆದಿದ್ದಾರೆ. ಜೇಬಿನಲ್ಲಿದ್ದ 200 ರೂ ಕಸಿದುಕೊಂಡು ಶ್ರೀರಂಗಪಟ್ಟಣ ಹೊರವಲಯದಲ್ಲಿ ರುವ ಕರಿಘಟ್ಟ ಸಿಡಿಎಸ್ ನಾಲೆ ಏರಿ ಮೇಲೆ ಆತನನ್ನು ಎಸೆದು ಹೋಗಿದ್ದಾರೆ.

ಪಾಂಡವಪುರ ಕಾತ್ಯಾಯಿನಿ ಮಿಲ್ಟ್ರಿ ಹೋಟೆಲ್ ಮಾಣಿ ಮಲ್ಲೇಶ (23) ಹಲ್ಲೆಗೊಳಗಾದ ಯುವಕ. ಹೋಟೆಲ್‌ನಿಂದ ತಿಂಡಿ ತಿಂದು ಹೊರಹೋದವನು ಬಾರದ ಹಿನ್ನಲೆಯಲ್ಲಿ ಹೋಟೆಲ್ ಮಾಲೀಕ ವಿಜಯ್ ಮೊಬೈಲ್ ಕರೆ ಮಾಡಿದಾಗ ನಾಲೆ ಏರಿ ಮೇಲೆ ಬಿದ್ದಿದ್ದ ವಿಷಯ ಗೊತ್ತಾಗಿದೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೋಟೆಲ್ ನಲ್ಲಿ ತಿಂಡಿ ತಿಂದು ಹೊರಗಡೆ ಬಾಳೆಹಣ್ಣು ತಿನ್ನಲು ವಿಜಯಬ್ಯಾಂಕ್ ರಸ್ತೆಯಲ್ಲಿ ಬೆಳಗ್ಗೆ 11 ಗಂಟೆ ಸಮಯದಲ್ಲಿ ಹೋಗುತ್ತಿದ್ದಾಗ ಬಿಳಿ ಕಾರು ಬಂದು ನನ್ನ ಮುಂದೆ ನಿಂತಿತು. ಹಿಂದಿನಿಂದ ಒಬ್ಬ ಕಾರಿಗೆ ನೂಕಿದ ಇಬ್ಬರು ಹಿಂಬದಿ ಸೀಟಿನಲ್ಲಿ ಇದ್ದರು ಮೂವರು ಕಪ್ಪಾಗಿದ್ದರು. ಗಲ್ಲಕ್ಕೆ ರಿಂಗ್ ಹಾಕಿದ್ದರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ಹಲ್ಲೆಗೊಳಗಾದ ಮಲ್ಲೇಶ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ