ಆ್ಯಪ್ನಗರ

ಅನ್ವೇಷಣೆಗಳಲ್ಲಿ ಭವಿಷ್ಯದ ಪರಿಕಲ್ಪನೆ ಬೇಕು: ಯು.ಟಿ. ಖಾದರ್

ಅನ್ವೇಷಣಾ ಗುಣ ನಮ್ಮಲ್ಲಿದ್ದಾಗ ಹೊಸತನದ ಸಾಕಾರ ಸಾಧ್ಯ. ಅನ್ವೇಷಣೆಗಳಲ್ಲಿ ಸಾಮಾಜಿಕ ಬದ್ಧತೆ, ಭವಿಷ್ಯತ್ತಿನ ಪರಿಕಲ್ಪನೆ ಅಗತ್ಯ. ತಾಂತ್ರಿಕತೆಯ ಅಭಿವೃದ್ಧಿ ಗ್ರಾಮೀಣ ಜನರಿಗೂ ಉಪಯುಕ್ತವಾಗುವ ರೀತಿ ನಿರೂಪಿಸುವುದು ಸೂಕ್ತ ಎಂದು ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.

ವಿಕ ಸುದ್ದಿಲೋಕ 25 Feb 2016, 3:57 pm
ಬಜಪೆ: ಅನ್ವೇಷಣಾ ಗುಣ ನಮ್ಮಲ್ಲಿದ್ದಾಗ ಹೊಸತನದ ಸಾಕಾರ ಸಾಧ್ಯ. ಅನ್ವೇಷಣೆಗಳಲ್ಲಿ ಸಾಮಾಜಿಕ ಬದ್ಧತೆ, ಭವಿಷ್ಯತ್ತಿನ ಪರಿಕಲ್ಪನೆ ಅಗತ್ಯ. ತಾಂತ್ರಿಕತೆಯ ಅಭಿವೃದ್ಧಿ ಗ್ರಾಮೀಣ ಜನರಿಗೂ ಉಪಯುಕ್ತವಾಗುವ ರೀತಿ ನಿರೂಪಿಸುವುದು ಸೂಕ್ತ ಎಂದು ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.
Vijaya Karnataka Web
ಅನ್ವೇಷಣೆಗಳಲ್ಲಿ ಭವಿಷ್ಯದ ಪರಿಕಲ್ಪನೆ ಬೇಕು: ಯು.ಟಿ. ಖಾದರ್


ಕೆಂಜಾರು ಶ್ರೀದೇವಿ ಕಾಲೇಜಿನಲ್ಲಿ ಮಂಗಳವಾರ ರಾಷ್ಟ್ರಮಟ್ಟದ ತಾಂತ್ರಿಕ-ಆಡಳಿತಾತ್ಮಕ-ಸಾಂಸ್ಕತಿಕ ಸ್ಪರ್ಧೆ - ಪ್ರದರ್ಶನ ‘ಸಂಭ್ರಮ್-2016’ನ್ನು ಉದ್ಘಾಟಿಸಿ ಮಾತನಾಡಿದರು.

ಮಂಗಳೂರಿನ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಪ್ರಿನ್ಸಿಪಾಲ್ ಡಾ. ಕೆ. ಪಾಲಾಕ್ಷಪ್ಪ ದಿಕ್ಸೂಚಿ ಭಾಷಣ ಮಾಡಿ, ನಮ್ಮಲ್ಲಿ ಕ್ರಿಯಾಶೀಲತೆ ಇದ್ದಾಗ ನಿಖರತೆಯಿಂದ ಸವಾಲುಗಳನ್ನು ನಿಭಾಯಿಸಲು ಸಾಧ್ಯ. ಕೇವಲ ಸ್ವಹಿತದಿಂದ ಏನನ್ನೂ ಸಾಸಲಾಗದು. ಪರ’’ತದ ಗುಣವೂ ನಮ್ಮಲ್ಲಿರಬೇಕು. ಅನುಭವಗಳಷ್ಟೇ ಪ್ರಸ್ತುತತೆ ಕೂಡಾ ಮುಖ್ಯ. ಆಧುನಿಕತೆಗೆ ಒಗ್ಗಿಕೊಳ್ಳುವ ಭರಾಟೆಯಲ್ಲಿ ಸಾಂಸ್ಕತಿಕ ಹಾಗೂ ಸಂಸ್ಕಾರಗಳ ಚೌಕಟ್ಟನ್ನು ಮರೆಯಲಾಗದು ಎಂದು ಅವರು ಹೇಳಿದರು.

ಶ್ರೀ ದೇವಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಸಂಚಿಕೆ ಸೂರ್ತಿಯನ್ನು ಅನಾವರಣಗೊಳಿಸಲಾಯಿತು.

ಶ್ರೀದೇವಿ ಎಜುಕೇಶನ್ ಟ್ರಸ್ಟ್‌ನ ಉಪಾಧ್ಯಕ್ಷ ನೀಶ್ ಎಸ್.ಶೆಟ್ಟಿ, ಕಾರ್ಯದರ್ಶಿ ಮೈನಾ ಎಸ್.ಶೆಟ್ಟಿ, ಟ್ರಸ್ಟಿ ಪ್ರಿಯಾಂಕಾ ಎನ್.ಶೆಟ್ಟಿ, ಎಂ.ಸಿ.ಎ ವಿಭಾಗದ ಪ್ರೊ.ನೇತಾವತಿ ಪಿ.ಎಸ್.ಮತ್ತಿತರರು ಉಪಸ್ಥಿತರಿದ್ದರು.

ಪ್ರಿನ್ಸಿಪಾಲ್ ಡಾ.ದಿಲೀಪ್ ಕುಮಾರ್ ಕೆ.ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಗೀತಾ ಹಾಗೂ ಶಬರಿ ಪ್ರಾರ್ಥಿಸಿದರು. ರವೀಲಾ ವಂದಿಸಿದರು. ಡೇಸಸ್ ವಿಖ್ಯಾತ್ ಹಾಗೂ ಅವನ್ನಾ ಕಾರ್ಯಕ್ರಮ ನಿರೂಪಿಸಿದರು. ಸಂಭ್ರಮ್-2016, ಮೇಧಾ-2016, ಎಕೊಲೊನ್ -2016 ತಾಂತ್ರಿಕ-ಸಾಂಸ್ಕೃತಿಕ-ಆಡಳಿತಾತ್ಮಕ ಪ್ರದರ್ಶನ ಸ್ಪರ್ಧೆಗಳಲ್ಲಿ ದೇಶದ 100ಕ್ಕೂ ಹೆಚ್ಚು ಕಾಲೇಜುಗಳಿಂದ 3,500ರಷ್ಟು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ