ಆ್ಯಪ್ನಗರ

ಚೆಂಡ್ತಿಮಾರ್:ಇಂದಿನಿಂದ ಮಹಾಶಿವರಾತ್ರಿ

ಚೆಂಡ್ತಿಮಾರ್ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಆದಿ ದ್ರಾವಿಡ್ ಸುಧಾ ರಕ ಸಂಘ ವತಿ ಯಿಂದ ಮಾ.6ರಿಂದ 8ರ ತನಕ 55ನೇ ವರ್ಷದ ಮಹಾಶಿವರಾತ್ರಿ ಭಜನೋತ್ಸವ, ನೇಮೋತ್ಸವ ಜರುಗಲಿದೆ.

Vijaya Karnataka Web 6 Mar 2016, 3:24 pm
ಬಂಟ್ವಾಳ : ಚೆಂಡ್ತಿಮಾರ್ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಆದಿ ದ್ರಾವಿಡ್ ಸುಧಾ ರಕ ಸಂಘ ವತಿ ಯಿಂದ ಮಾ.6ರಿಂದ 8ರ ತನಕ 55ನೇ ವರ್ಷದ ಮಹಾಶಿವರಾತ್ರಿ ಭಜನೋತ್ಸವ, ನೇಮೋತ್ಸವ ಜರುಗಲಿದೆ.
Vijaya Karnataka Web
ಚೆಂಡ್ತಿಮಾರ್:ಇಂದಿನಿಂದ ಮಹಾಶಿವರಾತ್ರಿ


6ರಂದು ಬೆಳಗ್ಗೆ 7 ಗಂಟೆಗೆ ಧ್ವಜಾರೋಹಣ, 8ಕ್ಕೆ ವೇಮೂ ನಾವೂರು ಶ್ರೀ ಸುದರ್ಶನ ಬಲ್ಲಾಳ್ ಪೌರೋಹಿತ್ವದಲ್ಲಿ ಪ್ರತಿಷ್ಠಾ ಹೋಮ, ಪ್ರಧಾನ ಹೋ ಮ, ಪಂಚವಿಶಂತಿ ಕಲಶ ಪೂಜೆ, ಪಂಚಾಮೃತ ಅಭಿ ಷೇಕ, ಕಲಶಾಭಿಷೇಕ, ಮಹಾಪೂಜೆ ನಡೆಯಲಿದೆ.

ಸಂಜೆ 6ಕ್ಕೆ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮ ವನ್ನು ಉಳಿಪಾಡಿಗುತ್ತು ರಾಜೇಶ್ ನಾಯಕ್ ಉದ್ಘಾಟಿಸಲಿದ್ದಾರೆ. ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ, ಮಂಗಳೂರು ಸಹಾಯಕ ಆಯುಕ್ತ ಡಾ. ಅಶೋಕ್ ಡಿ.ಆರ್., ಸ್ವರ್ಣೋದ್ಯಮಿ ಬಿ. ನಾಗೇಂದ್ರ ಬಾಳಿಗ, ಸಂದೀಪ್ ಪೂಜಾರಿ ಚೆಂಡ್ತಿಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 7ರಂದು ಬೆಳಗ್ಗೆ 6.30ಕ್ಕೆ ಭಜನಾ ಮಂಡಳಿ ಗಳಿಂದ ಭಜನಾ ಕಾರ್ಯ ಕ್ರಮ, ರಾತ್ರಿ 12ಕ್ಕೆ ಮಹಾಪೂಜೆ, 8ರಂದು ಸೂರ್ಯೋದಯಕ್ಕೆ ಮಹಾ ಮಂಗಳೋ ತ್ಸವ, ಬಳಿಕ ಪ್ರಸಾದ ವಿತರಣೆ, 8ರಂದು ಶ್ರೀ ಸತ್ಯ ಪದ್ನಾಜಿ ಸಾರ ಮುಪ್ಪಣ್ಯ, ಅಲೆರ ಪಂಜುರ್ಲಿ ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಆದಿ ದ್ರಾವಿಡ ಸುಧಾರಕ ಸಂಘದ ಅಧ್ಯಕ್ಷ ಜನಾರ್ದನ ಚೆಂಡ್ತಿಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ