ಆ್ಯಪ್ನಗರ

ದ.ಕ.: ಪ್ರತಿಭಟನೆ ನಡುವೆ ಚಿನ್ನ ವ್ಯವಹಾರ ಆರಂಭ

ಕೆಲವು ದಿನಗಳಲ್ಲಿ ಜಿಲ್ಲೆಯಲ್ಲಿ ಚಿನ್ನದ ವ್ಯಾಪಾರಿಗಳು ವ್ಯವಹಾರ ಸ್ಥಗಿತಗೊಳಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದು, ಮಾ.25ರಿಂದ ಎಂದಿನಂತೆ ವ್ಯವಹಾರ ನಡೆದಿದೆ. ಮಳಿಗೆಗಳಲ್ಲಿ ಬ್ಯಾನರ್ ಅಳವಡಿಸಿ, ಕಪ್ಪು ಪಟ್ಟಿ ಪ್ರತಿಭಟನೆ ಮುಂದುವರಿಸಿವೆ. ದ.ಕ. ಜಿಲ್ಲಾ ಸ್ವರ್ಣ ವ್ಯಾಪಾರ ಸಂಘದ ಸದಸ್ಯರು ಮತ್ತು ಪದಾಧಿಕಾರಿಗಳು ಗುರುವಾರ ತುರ್ತು ಸಭೆ ನಡೆಸಿ, ಈ ನಿರ್ಧಾರಕ್ಕೆ ಬಂದಿದ್ದಾರೆ.

ವಿಕ ಸುದ್ದಿಲೋಕ 25 Mar 2016, 4:14 pm
ಮಂಗಳೂರು: ಕೆಲವು ದಿನಗಳಲ್ಲಿ ಜಿಲ್ಲೆಯಲ್ಲಿ ಚಿನ್ನದ ವ್ಯಾಪಾರಿಗಳು ವ್ಯವಹಾರ ಸ್ಥಗಿತಗೊಳಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದು, ಮಾ.25ರಿಂದ ಎಂದಿನಂತೆ ವ್ಯವಹಾರ ನಡೆದಿದೆ. ಮಳಿಗೆಗಳಲ್ಲಿ ಬ್ಯಾನರ್ ಅಳವಡಿಸಿ, ಕಪ್ಪು ಪಟ್ಟಿ ಪ್ರತಿಭಟನೆ ಮುಂದುವರಿಸಿವೆ. ದ.ಕ. ಜಿಲ್ಲಾ ಸ್ವರ್ಣ ವ್ಯಾಪಾರ ಸಂಘದ ಸದಸ್ಯರು ಮತ್ತು ಪದಾಧಿಕಾರಿಗಳು ಗುರುವಾರ ತುರ್ತು ಸಭೆ ನಡೆಸಿ, ಈ ನಿರ್ಧಾರಕ್ಕೆ ಬಂದಿದ್ದಾರೆ.
Vijaya Karnataka Web
ದ.ಕ.: ಪ್ರತಿಭಟನೆ ನಡುವೆ ಚಿನ್ನ ವ್ಯವಹಾರ ಆರಂಭ


ಕೇಂದ್ರ ಸರಕಾರ ಬಜೆಟ್‌ನಲ್ಲಿ ವಿಧಿಸಿದ ಅಬಕಾರಿ ಸುಂಕ, ಸೇವಾ ತೆರಿಗೆ ಹಾಗೂ ಪ್ಯಾನ್‌ಕಾರ್ಡ್ ವಿರೋಧಿಸಿ ಮಾ.2ರಿಂದ ಅಖಿಲ ಭಾರತ ಮಟ್ಟದಲ್ಲಿ ಚಿನ್ನದ ವರ್ತಕರು ಬಂದ್ ಆಚರಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದರು.

ಕೇಂದ್ರ ಸರಕಾರದ ಆಶ್ವಾಸನೆ ಮೇರೆಗೆ ಜಿಜೆಎಫ್ ಮತ್ತು ಐಬಿಜೆಎ ಸಂಘಟನೆಗಳು ಮುಷ್ಕರವನ್ನು ಮಾ.19ರಂದು ಹಿಂತೆಗೆದಿದ್ದರು. ಅದರಂತೆ ಕರ್ನಾಟಕ ಮತ್ತಿತರ ಪ್ರದೇಶಗಳಲ್ಲಿ ಬಂದ್ ಕೈಬಿಡಲಾಗಿತ್ತು. ಇದನ್ನು ಮನಗಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಬಂದ್ ಮಾಡಿ ವ್ಯಾಪಾರ ಸ್ಥಗಿತಗೊಳಿಸುವುದು ಅರ್ಥಹೀನ ಎಂದು ಚಿನ್ನದ ವರ್ತಕ ಸಂಘದ ಅಧ್ಯಕ್ಷ ನಾಗರಾಜ ಪಾಲ್ಕೆ ಅಭಿಪ್ರಾಯಟ್ಟಿದ್ದರು.

ಉತ್ತರ ಭಾರತದ ಅನೇಕ ಸ್ಥಳಗಳಲ್ಲಿ ಇಂದಿಗೂ ಚಿನ್ನದ ವ್ಯಾಪಾರ ಸ್ಥಗಿತ ಮುಂದುವರಿದಿರುವ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿತ್ತು. ಪ್ರತಿಭಟನೆಯಡಿ ವ್ಯಾಪಾರ ವಹಿವಾಟು ಮುಂದುವರೆಸಲು ತೀರ್ಮಾನಿಸಲಾಯಿತು.

ಬಂದ್ ಕೈಬಿಟ್ಟು ವ್ಯವಹಾರ ನಡೆಸುವುರಿಂದ ಸಣ್ಣ ಉದ್ದಿಮೆದಾರರು, ಚಿನ್ನದ ಕೆಲಸಗಾರರು ಹಾಗೂ ಗ್ರಾಹಕರಿಗೆ ಪ್ರಯೋಜನವಾಗಲಿದೆ. ಪುತ್ತೂರು, ಬಂಟ್ವಾಳ ಪ್ರದೇಶಗಳಲ್ಲೂ ವ್ಯಾಪಾರ ವಹಿವಾಟು ಪುನಾರಂಭಗೊಳ್ಳಲಿದೆ ಎಂದು ಅಧ್ಯಕ್ಷ ನಾಗರಾಜ ಪಾಲ್ಕೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ