ತೊಕ್ಕೊಟ್ಟು: ಕಿಡ್ನಿ ವೈಫಲ್ಯಕ್ಕೊಳಗಾಗಿ ದೇರಳಕಟ್ಟೆಯ ಯೇನೆಪೋಯ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರಿಗೆ ಬದಲಿ ಕಿಡ್ನಿಯನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದ್ದು, ಯೇನೆಪೋಯ ಆಸ್ಪತ್ರೆಯ ವೈದ್ಯರ ತಂಡದ ಈ ಸಾಧನೆ ಆರೋಗ್ಯ ಕ್ಷೇತ್ರದಲ್ಲಿ ಜಿಲ್ಲೆಗೆ ಗರಿ ಮೂಡಿಸಿದೆ.
ಮೆದುಳು ನಿಷ್ಕ್ರಿಯಗೊಂಡು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯ ಕಿಡ್ನಿಯನ್ನು ಮಂಗಳವಾರ 11 ಗಂಟೆಗೆ ತರಲಾಗಿದ್ದು, ದೇರಳಕಟ್ಟೆಯ ಯೇನೆಪೋಯ ಆಸ್ಪತ್ರೆಯಲ್ಲಿರುವ ರೋಗಿಗೆ ಮಂಗಳವಾರ ತಡರಾತ್ರಿ ಅಳವಡಿಸಲಾಗಿದೆ.
ದೇರಳಕಟ್ಟೆಯ ಯೇನೆಪೋಯ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ 25ರ ಹರೆಯದ ವಿವಾಹಿತ ಮಹಿಳೆಯೊಬ್ಬರು ಕಿಡ್ನಿ ವೈಫಲ್ಯಕ್ಕೊಳಗಾಗಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಬದಲಿ ಕಿಡ್ನಿಯ ವ್ಯವಸ್ಥೆ ಮಾಡುವ ಪ್ರಯತ್ನ ಫಲ ನೀಡಿರಲಿಲ್ಲ. ಕಿಡ್ನಿ ದಾನಗೈದ ಪುರುಷೋತ್ತಮ ನಾಕ್, ಕುಟುಂಬಕ್ಕೆ ಹಾಗೂ ಉಡುಪಿಯಿಂದ ದೇರಳಟ್ಟೆಗೆ ಕಿಡ್ನಿ ಸಾಗಿಸುವ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ಕೈಗೊಂಡ ಕ್ರಮಕ್ಕೆ ಆಸ್ಪತ್ರೆ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ. ಉಭಯ ಜಿಲ್ಲೆಗಳಲ್ಲಿ ಪ್ರಥಮ ಯಶಸ್ವಿ ಕಿಡ್ನಿ ಕಸಿ ಇದಾಗಿದ್ದು, ರೋಗಿ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕಿಡ್ನಿ ಕಸಿ ಮಾಡಿದ ತಂಡದಲ್ಲಿ ಯೂರೋಲಜಿ ವಿಭಾಗದ ಡಾ. ಮುಜೀಬ್ ರಹಿಮಾನ್, ಡಾ. ನಿಶ್ಚಿತ್ ಡಿಸೋಜ, ಡಾ. ಅಲ್ತಾಫ್ ಖಾನ್, ಮೂತ್ರಪಿಂಡ ವಿಭಾಗ ಮುಖ್ಯಸ್ಥ ಡಾ. ಸಂತೋಷ್ ಪೈ, ಅರಿವಳಿಕೆ ವಿಭಾಗದ ಡಾ. ಪದ್ಮನಾಭ ಭಟ್, ಡಾ. ರಾಮಮೂರ್ತಿ ಹಾಗೂ ಡಾ. ಶ್ರುತಿ ಪಾಲ್ಗೊಂಡಿದ್ದರು.
*ಯೇನೆಪೋಯ ಆಸ್ಪತ್ರೆಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ಲಭ್ಯವಿದ್ದು. ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. -ಫರ್ಹಾದ್ ಯೇನೆಪೋಯ, ಹಣಕಾಸು ನಿರ್ದೇಶಕ, ಯೇನೆಪೋಯ ವಿಶ್ವವಿದ್ಯಾಲಯ
ಮೆದುಳು ನಿಷ್ಕ್ರಿಯಗೊಂಡು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯ ಕಿಡ್ನಿಯನ್ನು ಮಂಗಳವಾರ 11 ಗಂಟೆಗೆ ತರಲಾಗಿದ್ದು, ದೇರಳಕಟ್ಟೆಯ ಯೇನೆಪೋಯ ಆಸ್ಪತ್ರೆಯಲ್ಲಿರುವ ರೋಗಿಗೆ ಮಂಗಳವಾರ ತಡರಾತ್ರಿ ಅಳವಡಿಸಲಾಗಿದೆ.
ದೇರಳಕಟ್ಟೆಯ ಯೇನೆಪೋಯ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ 25ರ ಹರೆಯದ ವಿವಾಹಿತ ಮಹಿಳೆಯೊಬ್ಬರು ಕಿಡ್ನಿ ವೈಫಲ್ಯಕ್ಕೊಳಗಾಗಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಬದಲಿ ಕಿಡ್ನಿಯ ವ್ಯವಸ್ಥೆ ಮಾಡುವ ಪ್ರಯತ್ನ ಫಲ ನೀಡಿರಲಿಲ್ಲ. ಕಿಡ್ನಿ ದಾನಗೈದ ಪುರುಷೋತ್ತಮ ನಾಕ್, ಕುಟುಂಬಕ್ಕೆ ಹಾಗೂ ಉಡುಪಿಯಿಂದ ದೇರಳಟ್ಟೆಗೆ ಕಿಡ್ನಿ ಸಾಗಿಸುವ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ಕೈಗೊಂಡ ಕ್ರಮಕ್ಕೆ ಆಸ್ಪತ್ರೆ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ. ಉಭಯ ಜಿಲ್ಲೆಗಳಲ್ಲಿ ಪ್ರಥಮ ಯಶಸ್ವಿ ಕಿಡ್ನಿ ಕಸಿ ಇದಾಗಿದ್ದು, ರೋಗಿ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕಿಡ್ನಿ ಕಸಿ ಮಾಡಿದ ತಂಡದಲ್ಲಿ ಯೂರೋಲಜಿ ವಿಭಾಗದ ಡಾ. ಮುಜೀಬ್ ರಹಿಮಾನ್, ಡಾ. ನಿಶ್ಚಿತ್ ಡಿಸೋಜ, ಡಾ. ಅಲ್ತಾಫ್ ಖಾನ್, ಮೂತ್ರಪಿಂಡ ವಿಭಾಗ ಮುಖ್ಯಸ್ಥ ಡಾ. ಸಂತೋಷ್ ಪೈ, ಅರಿವಳಿಕೆ ವಿಭಾಗದ ಡಾ. ಪದ್ಮನಾಭ ಭಟ್, ಡಾ. ರಾಮಮೂರ್ತಿ ಹಾಗೂ ಡಾ. ಶ್ರುತಿ ಪಾಲ್ಗೊಂಡಿದ್ದರು.
*ಯೇನೆಪೋಯ ಆಸ್ಪತ್ರೆಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ಲಭ್ಯವಿದ್ದು. ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. -ಫರ್ಹಾದ್ ಯೇನೆಪೋಯ, ಹಣಕಾಸು ನಿರ್ದೇಶಕ, ಯೇನೆಪೋಯ ವಿಶ್ವವಿದ್ಯಾಲಯ