ಆ್ಯಪ್ನಗರ

ಪುತ್ತೂರು ರಾಜಧಾನಿ ಜುವೆಲ್ಲರ್ಸ್ ಮೇಲೆ ಗುಂಡು ಹಾರಿಸಿದ ಪ್ರಕರಣ: ಕಲಿ ಯೋಗೀಶ ಸಹಚರನಿಗೆ ಪೊಲೀಸ್ ಕಸ್ಟಡಿ

ಏಪ್ರಿಲ್ ಒಂದರಂದು ಬಂಧಿತನಾದ ಪುತ್ತೂರಿನ ರಾಜಧಾನಿ ಜುವೆಲ್ಲರ್ಸ್ ಶೂಟೌಟ್ ಪ್ರಕರಣದ ಆರೋಪಿ ಅಬ್ದುಲ್ ಆಸಿರ್(21) ನಿಗೆ ಏಳು ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.

ವಿಕ ಸುದ್ದಿಲೋಕ 5 Apr 2016, 3:29 pm
ಪುತ್ತೂರು: ಏಪ್ರಿಲ್ ಒಂದರಂದು ಬಂಧಿತನಾದ ಪುತ್ತೂರಿನ ರಾಜಧಾನಿ ಜುವೆಲ್ಲರ್ಸ್ ಶೂಟೌಟ್ ಪ್ರಕರಣದ ಆರೋಪಿ ಅಬ್ದುಲ್ ಆಸಿರ್(21) ನಿಗೆ ಏಳು ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
Vijaya Karnataka Web
ಪುತ್ತೂರು ರಾಜಧಾನಿ ಜುವೆಲ್ಲರ್ಸ್ ಮೇಲೆ ಗುಂಡು ಹಾರಿಸಿದ ಪ್ರಕರಣ: ಕಲಿ ಯೋಗೀಶ ಸಹಚರನಿಗೆ ಪೊಲೀಸ್ ಕಸ್ಟಡಿ


ಸೋಮವಾರ ಈತನನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಶುಕ್ರವಾರ ಬಂಧಿತನಾದ ಆಸೀರ್‌ನನ್ನು ಅದೇ ದಿನ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಒಂದು ದಿನದ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿತ್ತು. ಶನಿವಾರ ಮತ್ತೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಸ್ತರಣೆಯಾಗಿತ್ತು. ಶೂಟೌಟ್ ಪ್ರಕರಣದ ಮೇಲೆ ವಿಚಾರಣೆ ನಡೆಸಲು ಬಾಕಿ ಇರುವ ಕಾರಣ ಪೊಲೀಸ್ ಕಸ್ಟಡಿಗೆ ಕೊಡಬೇಕೆಂದು ಪೊಲೀಸರು ಅರ್ಜಿ ಸಲ್ಲಿಸಿದ್ದರು. ನಾಡ ಪಿಸ್ತೂಲ್ ಇಟ್ಟುಕೊಂಡು ತಿರುಗಾಡುತ್ತಿದ್ದ ಸಂದರ್ಭ ಬಂಧಿತನಾಗಿದ್ದ ಆಸೀರ್ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆ ಪ್ರಕಾರ ಪ್ರಕರಣ ದಾಖಲಾಗಿತ್ತು. ವಿಚಾರಣೆ ಸಂದರ್ಭ ಈತ ಶೂಟೌಟ್ ಪ್ರಕರಣದಲ್ಲೂ ಆರೋಪಿ ಎಂಬುದು ಬೆಳಕಿಗೆ ಬಂದಿತ್ತು. ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ಗ್ರಾಮದ ನಾಂಗಿ ಕಡಪ್ಪುರ ನಿವಾಸಿಯಾದ ಅಬ್ದುಲ್ ಆಸಿರ್(21) ಕುಖ್ಯಾತ ಭೂಗತ ಪಾತಕಿ ಕಲಿ ಯೋಗೀಶ್‌ನ ಸಹಚರ. ರಾಜಧಾನಿ ಜುವೆಲ್ಲರ್ಸ್ ಮಾಲೀಕರಿಂದ ಹತ್ತು ಲಕ್ಷ ರೂ. ಹಫ್ತಕ್ಕಾಗಿ ಬೇಡಿಕೆ ಇಟ್ಟಿದ್ದ ಕಲಿ ಯೋಗೀಶ, ಹಣ ಸಿಗದೇ ಇದ್ದಾಗ ಆಸೀರ್‌ನ ಗುರು ಉಪ್ಪಳದ ಕಾಲೀಯಾ ರಫೀಕ್‌ಗೆ ಗುಂಡು ಹಾರಾಟದ ಸುಪಾರಿ ನೀಡಿದ್ದ. ಕಾಲಿಯಾ ರಫೀಕ್‌ನ ಸೂಚನೆಯಂತೆ ಆಸೀರ್ ಕಾರ್ಯಪ್ರವತ್ತನಾಗಿದ್ದ. 50,000 ರೂ. ಹಣ ಪಡೆದುಕೊಂಡು ಇನ್ನೊಬ್ಬ ಸಹಚರನೊಂದಿಗೆ ಪುತ್ತೂರಿಗೆ ಬಂದು 2015ರ ಅಕ್ಟೋಬರ್ 6ರಂದು ಮುಸ್ಸಂಜೆ ರಾಜಧಾನಿ ಜುವೆಲ್ಲರ್ಸ್ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ