ಆ್ಯಪ್ನಗರ

ಮಲ್ಲಿಕಾ ಘಂಟಿಯವರಿಂದ ಧಾರ್ಮಿಕ ಭಾವನೆಗೆ ಧಕ್ಕೆ : ಅಯ್ಯಪ್ಪ ಭಕ್ತರಿಂದ ದೂರು

mallika ganti damages the religious feelings

Vijaya Karnataka 20 Nov 2018, 5:03 pm
ಮೂಡುಬಿದಿರೆ: ಇಲ್ಲಿ ನಡೆದ ಆಳ್ವಾಸ್‌ ನುಡಿಸಿರಿಯ ಅಧ್ಯಕ್ಷ ತೆ ವಹಿಸಿದ್ದ ಮಲ್ಲಿಕಾ ಘಂಟಿ, ಶಬರಿಮಲೆಯಲ್ಲಿ ಎಲ್ಲಾ ವಯೋಮಾನದ ಹೆಣ್ಣು ಮಕ್ಕಳಿಗೆ ಪ್ರವೇಶ ನೀಡದಿರುವುದು ಸರಿಯಲ್ಲ ಎಂದು ಸಮರ್ಥನೆ ಮಾಡಿ ಭಕ್ತರು ಮತ್ತು ದೇವಳದ ಧಾರ್ಮಿಕ ನಿಲುವುಗಳಿಗೆ ಅಪಚಾರ ಮಾಡಿದ್ದು ಅದನ್ನು ಖಂಡಿಸಿ ಅಯ್ಯಪ್ಪ ಭಕ್ತ ವೃಂದ ಆಳ್ವಾಸ್‌ ಶಿಕ್ಷ ಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವರಿಗೆ ಖಂಡನಾ ಪತ್ರ ನೀಡಿದೆ.
Vijaya Karnataka Web
ಮಲ್ಲಿಕಾ ಘಂಟಿಯವರಿಂದ ಧಾರ್ಮಿಕ ಭಾವನೆಗೆ ಧಕ್ಕೆ : ಅಯ್ಯಪ್ಪ ಭಕ್ತರಿಂದ ದೂರು


ಮಹಿಳೆಯರ ಋುತುಚಕ್ರದ ಸಮಯ ಮಹಿಳೆಯರು ದೇವಸ್ಥಾನ ಪ್ರವೇಶಿಸುವುದಿಲ್ಲ. ಮನೆಯ ದೇವರ ಕೋಣೆಯನ್ನೂ ಪ್ರವೇಶಿಸುವುದಿಲ್ಲ. ಸಾಹಿತ್ಯದ ವೇದಿಕೆಯಲ್ಲಿ ಧಾರ್ಮಿಕತೆಯನ್ನು ಎಳೆದು ತಂದು ಮಾತನಾಡಿರುವುದು ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿದ್ದು ಬಿಟ್ಟರೆ ಅಲ್ಲಿ ಸಮಾನತೆ, ಸಾಮಾಜಿಕ ಕಳಕಳಿಯ ನಿಲುವು ಇರಲಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಘಂಟಿಯವರು ಶಬರಿಮಲೆ ಬಗ್ಗೆ ಸ್ಪಷ್ಟತೆ ಇಲ್ಲದೆ ಮಾತನಾಡಿರುವುದು ಮೇಲ್ನೋಟಕ್ಕೆ ಖಚಿತವಾಗಿದೆ. ಅಯ್ಯಪ್ಪ ದೇವರ ಲಕ್ಷಾಂತರ ಮಹಿಳಾ ಭಕ್ತರು ತೀರ್ಪನ್ನು ವಿರೋಧಿಸಿ ಹೋರಾಟ ಮಾಡುತ್ತಿದ್ದಾರೆ. ಬೆರಳೆಣಿಕೆಯ ಮಹಿಳೆಯರು ಪ್ರಚಾರಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ವಿರುದ್ಧವಾಗಿ ಮಾತನಾಡುತ್ತಾರೆ. ಒಂದು ಧರ್ಮದ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿ ಆನಂದಿಸುವ ಎಡಪಂಥೀಯರ ನಿಲುವುಗಳನ್ನು ಖಂಡಿಸುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದಾರೆ. ಈÜ ಸಂದರ್ಭದಲ್ಲಿ ಸುದರ್ಶನ ಎಂ., ರಾಘು ಗುರುಸ್ವಾಮಿ, ನವೀನ್‌ ಗುರುಸ್ವಾಮಿ, ವಿಶ್ವನಾಥ, ಮುರಳೀಧರ್‌, ಸತೀಶ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ