* ವಿಜಯ್ ಕೋಟ್ಯಾನ್ ಮಂಗಳೂರು
ತುಳುನಾಡಿನ ಇತಿಹಾಸದಲ್ಲೇ ಮೊತ್ತಮೊದಲ ವಿಶ್ವ ತುಳು ಸಮ್ಮೇಳನ ವಿದೇಶದಲ್ಲಿ ನಡೆಯುತ್ತಿದ್ದು, ಇದಕ್ಕೆ ದುಬೈಯ ಐಸ್ರಿಂಕ್ ಇಂಡೋರ್ ಸ್ಟೇಡಿಯಂ ಅಲ್ನಜಾರ್ ಲೀಸರ್ ಲ್ಯಾಂಡ್ ಕ್ರೀಡಾಂಗಣ ಸಜ್ಜಾಗಿದೆ.
ಕಡಲಾಯೆರೆದ ತುಳುವೆರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಅಖಿಲ ಭಾರತ ತುಳು ಒಕ್ಕೂಟದಿಂದ ನ.23 ಮತ್ತು 24ರಂದು ಈ ಸಮ್ಮೇಳನ ನಡೆಯಲಿದ್ದು, ಕೊಲ್ಲಿ ರಾಷ್ಟ್ರದಲ್ಲಿ ತುಳುವ ಕಂಪನ್ನು ಪಸರಿಸುವ ಎಲ್ಲ ಪ್ರಯತ್ನವಾಗಲಿದೆ.
ದುಬೈ ಮಾತ್ರವಲ್ಲದೆ ವಿಶ್ವದ ನಾನಾ ಕಡೆಯಿಂದ ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಈ ವೈಭವದ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದು, 200ಕ್ಕೂ ಅಧಿಕ ಮಂದಿ ತುಳುನಾಡ ಕಲಾವೈಭವ ಪ್ರದರ್ಶನ ಮಾಡಲಿದ್ದಾರೆ. ಇದಕ್ಕಾಗಿ ಈಗಾಗಲೇ ಯಕ್ಷ ಗಾನ, ನೃತ್ಯರೂಪಕ, ಹಾಸ್ಯ ತಂಡಗಳು ಸೇರಿದಂತೆ ಇತರ ತಂಡಗಳು ದುಬೈಗೆ ಬಂದು ತಲುಪಿವೆ.
ಇಂದು ಉದ್ಘಾಟನೆ: ಕಾರ್ಯಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಉಧಿದ್ಯಮಿ ಡಾ.ಬಿ.ಆರ್. ಶೆಟ್ಟಿ ಅಧ್ಯಕ್ಷ ತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವರಾದ ಡಾ. ಜಯಮಾಲ, ಯು.ಟಿ. ಖಾದರ್, ಮಂಗಳೂರು ಬಿಷಪ್ ಪೀಟರ್ ಪೌಲ್ ಸಲ್ಡಾನಾ, ಬಳ್ಳಾರಿ ಬಿಷಪ್ ಹೆನ್ರಿ ಡಿಸೋಜ, ಪ್ರೊಟೆಸ್ಟಂಟ್ ಧರ್ಮಗುರು ಎಬಿನೇರ್ ಜತ್ತನ್ನ, ಮಾಧ್ಯಮ ಕಮ್ಯುನಿಕೇಶನ್ ನಿರ್ದೇಶಕ ಅಬ್ದುಲ್ ಸಲಾಂ ಪುತ್ತಿಗೆ, ಚಿತ್ರನಟ ಸುನೀಲ್ ಶೆಟ್ಟಿ, ಉದ್ಯಮಿ ರೊನಾಲ್ಡೊ ಕುಲಾಸೊ, ಶಾಸಕ ಉಮಾನಾಥ ಕೋಟ್ಯಾನ್, ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ, ಆಳ್ವಾಸ್ ಎಜುಕೇಶನ್ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ, ಸಂಗೀತ ನಿರ್ದೇಶಕ ಗುರುಕಿರಣ್, ಉದ್ಯಮಿ ಸುಶಾಂತ್ ಶೆಟ್ಟಿ, ಅರವಿಂದ್ ಜತ್ತಿ ಉಪಸ್ಥಿತರಿರಧಿಲಿಧಿದ್ದಾಧಿರೆ.
ವೈಭವದ ಮೆರವಣಿಗೆ: ಸಮ್ಮೇಳನ ನ.23ರಂದು ಮಧ್ಯಾಹ್ನ 2ಗಂಟೆಯಿಂದ ರಾತ್ರಿ 11ರವರೆಗೆ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಮುನ್ನ ಧ್ವಜಾರೋಹಣ ನಡೆಯಲಿದೆ. ಆ ಬಳಿಕ ವೈಭವದ ಮೆರವಣಿಗೆ ನಡೆಯಲಿದ್ದು ಗಣ್ಯರು, ಕಲಾವಿದರು, ನಾನಾ ವೇಷ ಭೂಷಣಗಳು ಸೇರಿದಂತೆ ಸಹಸ್ರಾರು ಜನರು ಭಾಗವಹಿಸಲಿದ್ದಾರೆ. 100ಕ್ಕೂ ಅಧಿಕ ಮಹಿಳೆಯರು ಪೂರ್ಣಕುಂಭದೊಂದಿಗೆ ಎಲ್ಲರನ್ನು ಸ್ವಾಗತಿಸಿ ಗಣ್ಯರನ್ನು ಸಭಾ ವೇದಿಕೆಯತ್ತ ಕರೆದೊಯ್ಯಲಿದ್ದಾರೆ.
ಸಾಂಪ್ರದಾಯಿಕ ಉಡುಗೆ: ಮೊದಲ ದಿನದ ಸಮ್ಮೇಳನದಲ್ಲಿ ಪುರುಷರು ಬಿಳಿ ಪಂಚೆ ಮತ್ತು ಬಿಳಿ ಶರ್ಟ್ ಧರಿಸಿದರೆ, ಮಹಿಳೆಯರು ಜರಿ ಸೀರೆಯಲ್ಲಿ ಮಿಂಚಲಿದ್ದಾರೆ. ಮಾತ್ರವಲ್ಲದೆ ಸಮ್ಮೇಳನಕ್ಕೆ ಆಗಮಿಸುವ ಎಲ್ಲರಿಗೂ ಮುಟ್ಟಾಳೆ ತೊಡಿಸಿ ಸ್ವಾಗತಿಸಲು ಸಂಘಟಕರು ತೀರ್ಮಾನಿಸಿದ್ದಾರೆ.
15 ಸಮಿತಿ ರಚನೆ: ಮೆರವಣಿಗೆ, ಸಭಾಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವಿಶ್ವ ತುಳು ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಸರ್ವೋತ್ತಮ ಶೆಟ್ಟಿ ಮತ್ತು ಶೋಧನ್ ಪ್ರಸಾದ್ ನಿರ್ದೇಶನದಲ್ಲಿ 500ಕ್ಕೂ ಅಧಿಕ ಮಂದಿಯ 15 ಸಧಿಮಿಧಿತಿಗಳನ್ನು ರಚಿಸಲಾಗಿದೆ.
ನೇರಪ್ರಸಾರ: 2 ದಿನ ನಡೆಯುವ ವೈಭವದ ತುಳು ಸಮ್ಮೇಳನ ನಮ್ಮ ಕುಡ್ಲ ಚಾನೆಲ್ನಲ್ಲಿ ನೇರಪ್ರಸಾರವಾಗಲಿದ್ದು, ಇದರ ಪೂರ್ವಸಿದ್ಧತೆಗೆ 8ಮಂದಿಯ ತಂಡ ಈಗಾಗಲೇ ದುಬೈ ತಲುಪಿದೆ.
ಇಂದಿನ ಕಾರ್ಯಕ್ರಮಗಳು
ನ.23ರಂದು ಮಧ್ಯಾಹ್ನ 2 ಗಂಟೆಗೆ ಉದ್ಘಾಟನೆ, 3.30ರಿಂದ ಗಲ್ಫ್ ರಾಷ್ಟ್ರದ 6 ತಂಡಗಳಿಗೆ ಗುಂಪು ಜನಪದ ನಲಿಕೆ ಪಂಥ, 5.20ರಿಂದ ತುಳುನಾಡ ಪರ್ಬೊಲು ನೃತ್ಯರೂಪಕ, 6.20ರಿಂದ ಕಾಪು ತಂಡದಿಂದ ಹಾಸ್ಯ ಪ್ರಹಸನ, 6.40ರಿಂದ ಯಕ್ಷ ಮಿತ್ರರು ದುಬೈು ತಂಡದ ತುಳು ಯಕ್ಷ ಗಾನ ಜಾಂಬವತಿ ಕಲ್ಯಾಣ, 7.40ರಿಂದ ತುಳುನಾಡ ಪಿಲಿನಲಿಕೆ, 8.30ರಿಂದ ಮಿಜಾರು ತಂಡದಿಂದ ಹಾಸ್ಯ ಪ್ರಹಸನ, ರಾತ್ರಿ 8.50ರಿಂದ ಸತೀಶ್ ಶೆಟ್ಟಿ ಪಟ್ಲ ಮತ್ತು ತಂಡದಿಂದ ಯಕ್ಷ ಗಾನ ನಾಟ್ಯ ವೈಭವ ನಡೆಯಲಿದೆ. ಇಂದು ತುಳು ಜಾನಪದ ಆಚರಣೆ ಗೋಷ್ಠಿ ಡಾ.ಬಿ.ಎ. ವಿವೇಕ್ ರೈ ಅಧ್ಯಕ್ಷ ತೆಯಲ್ಲಿ ನಡೆಯಲಿದೆ.
ತುಳುನಾಡಿನ ಇತಿಹಾಸದಲ್ಲೇ ಮೊತ್ತಮೊದಲ ವಿಶ್ವ ತುಳು ಸಮ್ಮೇಳನ ವಿದೇಶದಲ್ಲಿ ನಡೆಯುತ್ತಿದ್ದು, ಇದಕ್ಕೆ ದುಬೈಯ ಐಸ್ರಿಂಕ್ ಇಂಡೋರ್ ಸ್ಟೇಡಿಯಂ ಅಲ್ನಜಾರ್ ಲೀಸರ್ ಲ್ಯಾಂಡ್ ಕ್ರೀಡಾಂಗಣ ಸಜ್ಜಾಗಿದೆ.
ಕಡಲಾಯೆರೆದ ತುಳುವೆರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಅಖಿಲ ಭಾರತ ತುಳು ಒಕ್ಕೂಟದಿಂದ ನ.23 ಮತ್ತು 24ರಂದು ಈ ಸಮ್ಮೇಳನ ನಡೆಯಲಿದ್ದು, ಕೊಲ್ಲಿ ರಾಷ್ಟ್ರದಲ್ಲಿ ತುಳುವ ಕಂಪನ್ನು ಪಸರಿಸುವ ಎಲ್ಲ ಪ್ರಯತ್ನವಾಗಲಿದೆ.
ದುಬೈ ಮಾತ್ರವಲ್ಲದೆ ವಿಶ್ವದ ನಾನಾ ಕಡೆಯಿಂದ ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಈ ವೈಭವದ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದು, 200ಕ್ಕೂ ಅಧಿಕ ಮಂದಿ ತುಳುನಾಡ ಕಲಾವೈಭವ ಪ್ರದರ್ಶನ ಮಾಡಲಿದ್ದಾರೆ. ಇದಕ್ಕಾಗಿ ಈಗಾಗಲೇ ಯಕ್ಷ ಗಾನ, ನೃತ್ಯರೂಪಕ, ಹಾಸ್ಯ ತಂಡಗಳು ಸೇರಿದಂತೆ ಇತರ ತಂಡಗಳು ದುಬೈಗೆ ಬಂದು ತಲುಪಿವೆ.
ಇಂದು ಉದ್ಘಾಟನೆ: ಕಾರ್ಯಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಉಧಿದ್ಯಮಿ ಡಾ.ಬಿ.ಆರ್. ಶೆಟ್ಟಿ ಅಧ್ಯಕ್ಷ ತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವರಾದ ಡಾ. ಜಯಮಾಲ, ಯು.ಟಿ. ಖಾದರ್, ಮಂಗಳೂರು ಬಿಷಪ್ ಪೀಟರ್ ಪೌಲ್ ಸಲ್ಡಾನಾ, ಬಳ್ಳಾರಿ ಬಿಷಪ್ ಹೆನ್ರಿ ಡಿಸೋಜ, ಪ್ರೊಟೆಸ್ಟಂಟ್ ಧರ್ಮಗುರು ಎಬಿನೇರ್ ಜತ್ತನ್ನ, ಮಾಧ್ಯಮ ಕಮ್ಯುನಿಕೇಶನ್ ನಿರ್ದೇಶಕ ಅಬ್ದುಲ್ ಸಲಾಂ ಪುತ್ತಿಗೆ, ಚಿತ್ರನಟ ಸುನೀಲ್ ಶೆಟ್ಟಿ, ಉದ್ಯಮಿ ರೊನಾಲ್ಡೊ ಕುಲಾಸೊ, ಶಾಸಕ ಉಮಾನಾಥ ಕೋಟ್ಯಾನ್, ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ, ಆಳ್ವಾಸ್ ಎಜುಕೇಶನ್ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ, ಸಂಗೀತ ನಿರ್ದೇಶಕ ಗುರುಕಿರಣ್, ಉದ್ಯಮಿ ಸುಶಾಂತ್ ಶೆಟ್ಟಿ, ಅರವಿಂದ್ ಜತ್ತಿ ಉಪಸ್ಥಿತರಿರಧಿಲಿಧಿದ್ದಾಧಿರೆ.
ವೈಭವದ ಮೆರವಣಿಗೆ: ಸಮ್ಮೇಳನ ನ.23ರಂದು ಮಧ್ಯಾಹ್ನ 2ಗಂಟೆಯಿಂದ ರಾತ್ರಿ 11ರವರೆಗೆ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಮುನ್ನ ಧ್ವಜಾರೋಹಣ ನಡೆಯಲಿದೆ. ಆ ಬಳಿಕ ವೈಭವದ ಮೆರವಣಿಗೆ ನಡೆಯಲಿದ್ದು ಗಣ್ಯರು, ಕಲಾವಿದರು, ನಾನಾ ವೇಷ ಭೂಷಣಗಳು ಸೇರಿದಂತೆ ಸಹಸ್ರಾರು ಜನರು ಭಾಗವಹಿಸಲಿದ್ದಾರೆ. 100ಕ್ಕೂ ಅಧಿಕ ಮಹಿಳೆಯರು ಪೂರ್ಣಕುಂಭದೊಂದಿಗೆ ಎಲ್ಲರನ್ನು ಸ್ವಾಗತಿಸಿ ಗಣ್ಯರನ್ನು ಸಭಾ ವೇದಿಕೆಯತ್ತ ಕರೆದೊಯ್ಯಲಿದ್ದಾರೆ.
ಸಾಂಪ್ರದಾಯಿಕ ಉಡುಗೆ: ಮೊದಲ ದಿನದ ಸಮ್ಮೇಳನದಲ್ಲಿ ಪುರುಷರು ಬಿಳಿ ಪಂಚೆ ಮತ್ತು ಬಿಳಿ ಶರ್ಟ್ ಧರಿಸಿದರೆ, ಮಹಿಳೆಯರು ಜರಿ ಸೀರೆಯಲ್ಲಿ ಮಿಂಚಲಿದ್ದಾರೆ. ಮಾತ್ರವಲ್ಲದೆ ಸಮ್ಮೇಳನಕ್ಕೆ ಆಗಮಿಸುವ ಎಲ್ಲರಿಗೂ ಮುಟ್ಟಾಳೆ ತೊಡಿಸಿ ಸ್ವಾಗತಿಸಲು ಸಂಘಟಕರು ತೀರ್ಮಾನಿಸಿದ್ದಾರೆ.
15 ಸಮಿತಿ ರಚನೆ: ಮೆರವಣಿಗೆ, ಸಭಾಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವಿಶ್ವ ತುಳು ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಸರ್ವೋತ್ತಮ ಶೆಟ್ಟಿ ಮತ್ತು ಶೋಧನ್ ಪ್ರಸಾದ್ ನಿರ್ದೇಶನದಲ್ಲಿ 500ಕ್ಕೂ ಅಧಿಕ ಮಂದಿಯ 15 ಸಧಿಮಿಧಿತಿಗಳನ್ನು ರಚಿಸಲಾಗಿದೆ.
ನೇರಪ್ರಸಾರ: 2 ದಿನ ನಡೆಯುವ ವೈಭವದ ತುಳು ಸಮ್ಮೇಳನ ನಮ್ಮ ಕುಡ್ಲ ಚಾನೆಲ್ನಲ್ಲಿ ನೇರಪ್ರಸಾರವಾಗಲಿದ್ದು, ಇದರ ಪೂರ್ವಸಿದ್ಧತೆಗೆ 8ಮಂದಿಯ ತಂಡ ಈಗಾಗಲೇ ದುಬೈ ತಲುಪಿದೆ.
ಇಂದಿನ ಕಾರ್ಯಕ್ರಮಗಳು
ನ.23ರಂದು ಮಧ್ಯಾಹ್ನ 2 ಗಂಟೆಗೆ ಉದ್ಘಾಟನೆ, 3.30ರಿಂದ ಗಲ್ಫ್ ರಾಷ್ಟ್ರದ 6 ತಂಡಗಳಿಗೆ ಗುಂಪು ಜನಪದ ನಲಿಕೆ ಪಂಥ, 5.20ರಿಂದ ತುಳುನಾಡ ಪರ್ಬೊಲು ನೃತ್ಯರೂಪಕ, 6.20ರಿಂದ ಕಾಪು ತಂಡದಿಂದ ಹಾಸ್ಯ ಪ್ರಹಸನ, 6.40ರಿಂದ ಯಕ್ಷ ಮಿತ್ರರು ದುಬೈು ತಂಡದ ತುಳು ಯಕ್ಷ ಗಾನ ಜಾಂಬವತಿ ಕಲ್ಯಾಣ, 7.40ರಿಂದ ತುಳುನಾಡ ಪಿಲಿನಲಿಕೆ, 8.30ರಿಂದ ಮಿಜಾರು ತಂಡದಿಂದ ಹಾಸ್ಯ ಪ್ರಹಸನ, ರಾತ್ರಿ 8.50ರಿಂದ ಸತೀಶ್ ಶೆಟ್ಟಿ ಪಟ್ಲ ಮತ್ತು ತಂಡದಿಂದ ಯಕ್ಷ ಗಾನ ನಾಟ್ಯ ವೈಭವ ನಡೆಯಲಿದೆ. ಇಂದು ತುಳು ಜಾನಪದ ಆಚರಣೆ ಗೋಷ್ಠಿ ಡಾ.ಬಿ.ಎ. ವಿವೇಕ್ ರೈ ಅಧ್ಯಕ್ಷ ತೆಯಲ್ಲಿ ನಡೆಯಲಿದೆ.