ಆ್ಯಪ್ನಗರ

ಸ್ಥಿರತೆಯಿದ್ದಾಗ ಭರತನಾಟ್ಯ ಒಲಿಸಿಕೊಳ್ಳಲು ಸಾಧ್ಯ

ಭರತನಾಟ್ಯವೆನ್ನುವುದು ಭಾವ, ರಾಗ, ತಾಳಗಳು ಸಮ್ಮಿಲನವಾದ ಅದ್ಭುತ ಕಲೆಯಾಗಿದ್ದು, ಸ್ಥಿರತೆ, ಗ್ರಹಿಕೆ, ಪರಿಶ್ರಮವಿದ್ದಾಗ ಮಾತ್ರ ಇದನ್ನು ಒಲಿಸಿಕೊಳ್ಳು ಸಾಧ್ಯ ಎಂದು ಪುತ್ತೂರು ಶಾರದಾ ಕಲಾ ಕೇಂದ್ರ ಟ್ರಸ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ವಿದ್ವಾನ್‌ ಸುದರ್ಶನ್‌ ಎಂ.ಎಲ್‌.ಭಟ್‌ ಹೇಳಿದ್ದಾರೆ.

Vijaya Karnataka 29 Nov 2018, 4:52 pm
ಉಪ್ಪಿನಂಗಡಿ : ಭರತನಾಟ್ಯವೆನ್ನುವುದು ಭಾವ, ರಾಗ, ತಾಳಗಳು ಸಮ್ಮಿಲನವಾದ ಅದ್ಭುತ ಕಲೆಯಾಗಿದ್ದು, ಸ್ಥಿರತೆ, ಗ್ರಹಿಕೆ, ಪರಿಶ್ರಮವಿದ್ದಾಗ ಮಾತ್ರ ಇದನ್ನು ಒಲಿಸಿಕೊಳ್ಳು ಸಾಧ್ಯ ಎಂದು ಪುತ್ತೂರು ಶಾರದಾ ಕಲಾ ಕೇಂದ್ರ ಟ್ರಸ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ವಿದ್ವಾನ್‌ ಸುದರ್ಶನ್‌ ಎಂ.ಎಲ್‌.ಭಟ್‌ ಹೇಳಿದ್ದಾರೆ.
Vijaya Karnataka Web
ಸ್ಥಿರತೆಯಿದ್ದಾಗ ಭರತನಾಟ್ಯ ಒಲಿಸಿಕೊಳ್ಳಲು ಸಾಧ್ಯ


ಇಲ್ಲಿನ ಶ್ರೀಗುರು ಸುಧೀಂದ್ರ ಕಲಾ ಮಂದಿರದಲ್ಲಿ ನಡೆದ ಶ್ರೀಮಂಜುನಾಥ ನೃತ್ಯ ಕಲಾ ಶಾಲೆಯ ಉಪ್ಪಿನಂಗಡಿ ಶಾಖೆಯ ವಾರ್ಷಿಕೋತ್ಸವ 'ನೃತ್ಯಾರ್ಪಣಂ' ಉದ್ಘಾಟಿಸಿ ಅವರು ಮಾತನಾಡಿದರು.

ಇಂದ್ರಪ್ರಸ್ಥ ವಿದ್ಯಾಲಯದ ಪ್ರಿನ್ಸಿಪಾಲ್‌ ರವೀಂದ್ರ ಡಿ. ಮಾತನಾಡಿದರು. ಪುತ್ತೂರಿನ ವಿಶ್ವ ಕಲಾನಿಕೇತನ ಇನ್ಸ್ಟಿಟ್ಯೂಟ್‌ ಆಫ್‌ ಆರ್ಟ್‌ ಆ್ಯಂಡ್‌ ಕಲ್ಚರ್‌ನ ನಿರ್ದೇಶಕಿ ವಿದುಷಿ ನಯನಾ ವಿ.ರೈ ಅಧ್ಯಕ್ಷ ತೆ ವಹಿಸಿದ್ದರು.

ಶ್ರೀಮಂಜುನಾಥ ನೃತ್ಯ ಕಲಾ ಶಾಲೆಯ ನಿರ್ದೇಶಕರಾದ ವಿದ್ವಾನ್‌ ಮಂಜುನಾಥ್‌ ಎನ್‌. ಸ್ವಾಗತಿಸಿದರು. ದೀಪ್ತಿ ಮಂಜುನಾಥ್‌ ವಂದಿಸಿದರು. ಬಳಿಕ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ