ಆ್ಯಪ್ನಗರ

ರಾಜ್ಯದಲ್ಲಿ ಬಿಜೆಪಿ- ಆರೆಸ್ಸೆಸ್‌ ತಿಕ್ಕಾಟ: ಐವನ್‌ ಆರೋಪ

ರಾಜ್ಯದ ಸಮ್ಮಿಶ್ರ ಸರಕಾರವನ್ನು ಅಭದ್ರಗೊಳಿಸಿ ಉತ್ತಮ ಆಡಳಿತ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿಬಿಜೆಪಿ- ಆರೆಸ್ಸೆಸ್‌ ಮಧ್ಯೆ ತಿಕ್ಕಾಟ ಆರಂಭಗೊಂಡಿದೆ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಆರೋಪಿಸಿದರು.

Vijaya Karnataka 28 Aug 2019, 4:13 pm
ಮಂಗಳೂರು: ರಾಜ್ಯದ ಸಮ್ಮಿಶ್ರ ಸರಕಾರವನ್ನು ಅಭದ್ರಗೊಳಿಸಿ ಉತ್ತಮ ಆಡಳಿತ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿಬಿಜೆಪಿ- ಆರೆಸ್ಸೆಸ್‌ ಮಧ್ಯೆ ತಿಕ್ಕಾಟ ಆರಂಭಗೊಂಡಿದೆ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಆರೋಪಿಸಿದರು.
Vijaya Karnataka Web Ivan Dsouza


ಸಿಎಂ ಅಧಿಕಾರ ವಹಿಸಿದ ಒಂದು ತಿಂಗಳ ಬಳಿಕ ಸಚಿವ ಸಂಪುಟ ರಚನೆಯಾಗಿದೆ. ಈ ಹಿಂದೆ ಇಬ್ಬರು ಡಿಸಿಎಂ ಮಾಡಿದ್ದ ಬಿಜೆಪಿ, ಇದೀಗ ರಾಜ್ಯದ ಇತಿಹಾಸದಲ್ಲಿಪ್ರಥಮ ಬಾರಿ ತ್ರೀಡಿ ಡಿಸಿಎಂಗಳನ್ನು ಮಾಡಿ ನಗೆಪಾಟಲಿಗೀಡಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿಮಂಗಳವಾರ ಅವರು ಟೀಕಿಸಿದರು.

ಸಚಿವರು ಯಾರಾಗಬೇಕು ಎಂಬ ಪಟ್ಟಿಯನ್ನು ದಿಲ್ಲಿಯಿಂದ ಬಿಜೆಪಿ ಹೈಕಮಾಂಡ್‌ ಕೊಟ್ಟರೆ, ಸಚಿವರು ಯಾರಾಗಬೇಕು ಎಂಬ ಪಟ್ಟಿಯನ್ನು ನಾಗಪುರದಿಂದ ಆರೆಸ್ಸೆಸ್‌ ಹೈಕಮಾಂಡ್‌ ಕೊಟ್ಟಿದೆ. ಕಾಂಗ್ರೆಸ್‌ನ್ನು ಟೀಕಿಸುತ್ತಿದ್ದ ಬಿಜೆಪಿ ಕೂಡ ಲಕೋಟೆ ಸಂಸ್ಕೃತಿ ನಡೆಸುತ್ತಿದ್ದು, ಅದೂ ಎರಡೆರಡು ಲಕೋಟೆ ಬಂದಿವೆ. ಅಮಿತ್‌ ಶಾ ಮತ್ತು ಜಿ.ಸಂತೋಷ್‌ ನಡುವಿನ ತಿಕ್ಕಾಟದಿಂದ ಯಡಿಯೂರಪ್ಪ ಹೈರಾಣಾಗಿದ್ದಾರೆ. ಸಚಿವ ಸಿ.ಟಿ.ರವಿ ರಾಜೀನಾಮೆಗೆ ಮುಂದಾಗುವ ಮೂಲಕ ಬಿಜೆಪಿ ಬಂಡವಾಳ ಬಯಲಾಗುತ್ತಿದೆ ಎಂದು ಐವನ್‌ ಹೇಳಿದರು.

ಆರು ತಿಂಗಳ ತನಕ ಸಮಸ್ಯೆ ಇಲ್ಲಎಂದವರಿಗೆ ಭ್ರಮನಿರಸನವಾಗಿದೆ. ಅಧಿಕಾರ ಪಡೆದ ತಕ್ಷಣ ದ್ವೇಷದ ರಾಜಕೀಯ ಆರಂಭಿಸಿದ್ದು, ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ ಮುಚ್ಚಲು ಹುನ್ನಾರ ನಡೆಸುತ್ತಿದೆ ಎಂದರು.

ನಮ್ಮಲ್ಲಿಸಮ್ಮಿಶ್ರ ಸರಕಾರ ಮಾತ್ರ ಇತ್ತು. ಬಿಜೆಪಿಯಲ್ಲಿತೃಪ್ತರು, ಅತೃಪ್ತರು, ಅನರ್ಹರ ಗುಂಪುಗಳಿವೆ. ಇಂಥವರಿಂದ ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯವಿಲ್ಲ. ಆರ್‌.ಅಶೋಕ್‌, ಜಗದೀಶ್‌ ಶೆಟ್ಟರ್‌ ಕೂಡ ಅತೃಪ್ತರಾಗಿದ್ದಾರೆ. 2013ರ ಮಾದರಿಯಲ್ಲೇ ಒಳಜಗಳ, ಸಿಎಂಗಳ ಬದಲಾವಣೆ ಆಗಲಿದೆ. ಈ ಮಧ್ಯೆ ಯಡಿಯೂರಪ್ಪ ಮತ್ತು ಮಕ್ಕಳಿಂದ ವರ್ಗಾವಣೆ ದಂಧೆæ ಜೋರಾಗಿ ನಡೆಯುತ್ತಿದೆ ಎಂದರು.

ರಾಜ್ಯದಲ್ಲಿ26 ಮಂದಿ ಸಂಸದರು ಮತ್ತು ನಾಲ್ಕು ಮಂದಿ ಕೇಂದ್ರದ ಸಚಿವರು ಇದ್ದರೂ ನೆರೆ ಪರಿಹಾರಕ್ಕೆ ಐದು ಪೈಸೆ ತರಲಾಗಿಲ್ಲ. ರಾಜ್ಯದಲ್ಲಿ50 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಯಡಿಯೂರಪ್ಪ ಹೇಳುತ್ತಿದ್ದರೆ. ಒಂದು ಲಕ್ಷ ಕೋಟಿ ನಷ್ಟ ಎಂದು ತಜ್ಞರು ಅಂದಾಜಿಸಿದ್ದಾರೆ. ಕೇಂದ್ರದ ಅಧ್ಯಯನ ತಂಡ ಕಾರಿನಿಂದ ಕೆಳಗಿಳಿಯದೆ ಸಮೀಕ್ಷೆ ನಡೆಸಿ, ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ. ಕರಾವಳಿಯಲ್ಲಿಅಡಕೆ ಬೆಳೆ ನಾಶವಾದರೂ ಕೇಳುವವರಿಲ್ಲ. ಸರ್ವಪಕ್ಷದ ನಿಯೋಗವನ್ನಾದರೂ ಕೇಂದ್ರಕ್ಕೆ ಕೊಂಡೊಯ್ಯುವ ಕೆಲಸ ಸರಕಾರದಿಂದ ಆಗಲಿ ಎಂದು ಐವನ್‌ ಆಗ್ರಹಿಸಿದರು.

ಮುಖಂಡರಾದ ಜೆಸಿಂತಾ ವಿಜಯ ಆಲ್ಫ್ರೆಡ್‌, ಮನುರಾಜ್‌, ಹಬೀಬ್‌ ಕಣ್ಣೂರು, ಪ್ರೇಮ್‌ ಬಲ್ಲಾಳ್‌ಬಾಗ್‌, ನಝೀರ್‌ ಬಜಾಲ್‌ ಸುದ್ದಿಗೋಷ್ಠಿಯಲ್ಲಿಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ