ಗರ್ಭಿಣಿಯರಿಗೆ ಕೇಳಿಸದ ವಾತ್ಸಲ್ಯ ವಾಣಿ: 3 ವರ್ಷ ಕಳೆದರೂ 10 ಜಿಲ್ಲೆ ಮಾತ್ರ ಸೀಮಿತ
ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ಕಡಿಮೆ ಮಾಡುವುದು, ಮಕ್ಕಳ ಪೌಷ್ಟಿಕತೆ ಹೆಚ್ಚಿಸುವುದು ಹಾಗೂ ಕಾಲ ಕಾಲಕ್ಕೆ ಗರ್ಭಿಣಿಯರಿಗೆ ದೂರವಾಣಿಯಲ್ಲಿ ಅಗತ್ಯ ಮಾರ್ಗದರ್ಶನ ನೀಡುವ ಸಲುವಾಗಿ ರಾಜ್ಯ ಸರಕಾರ ‘ವಾತ್ಸಲ್ಯ ವಾಣಿ- 104’ ಯೋಜನೆ ಜಾರಿಗೆ ತಂದಿತು
Vijaya Karnataka 1 Oct 2018, 9:39 am
ಸ್ಟೀವನ್ ರೇಗೊ
ಮಂಗಳೂರು: ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ಕಡಿಮೆ ಮಾಡುವುದು, ಮಕ್ಕಳ ಪೌಷ್ಟಿಕತೆ ಹೆಚ್ಚಿಸುವುದು ಹಾಗೂ ಕಾಲ ಕಾಲಕ್ಕೆ ಗರ್ಭಿಣಿಯರಿಗೆ ದೂರವಾಣಿಯಲ್ಲಿ ಅಗತ್ಯ ಮಾರ್ಗದರ್ಶನ ನೀಡುವ ಸಲುವಾಗಿ ರಾಜ್ಯ ಸರಕಾರ ‘ವಾತ್ಸಲ್ಯ ವಾಣಿ- 104’ ಯೋಜನೆ ಜಾರಿಗೆ ತಂದಿತು. ಇದು ಮೊದಲ ಹಂತದಲ್ಲಿ ಹತ್ತು ಜಿಲ್ಲೆಗಳಿಗೆ ಸೀಮಿತವಾಗಿತ್ತು. ಹಂತ ಹಂತವಾಗಿ ಈ ಯೋಜನೆಯನ್ನು ವಿಸ್ತರಿಸುವುದಾಗಿ ಸರಕಾರ ಘೋಷಿಸಿತ್ತು. ಆದರೆ ವಾತ್ಸಲ್ಯವಾಣಿ ಶುರುವಾಗಿ ಮೂರು ವರ್ಷ ಕಳೆದರೂ ಅದರ ವ್ಯಾಪ್ತಿ ಹೆಚ್ಚುತ್ತಿಲ್ಲ.
2015ರ ಸೆ.25ರಂದು ವಾತ್ಸಲ್ಯವಾಣಿಗೆ ಚಾಲನೆ ನೀಡಿದ್ದ ಯು.ಟಿ. ಖಾದರ್ ‘‘ ಇದು ಭಾರತದಲ್ಲೇ ಪ್ರಥಮ ಬಾರಿಗೆ ಜಾರಿಯಾಗುತ್ತಿದೆ. ಈ ಸೇವೆಯಿಂದಾಗಿ ತಾಯಿ ಮತ್ತು ಶಿಶು ಮರಣ ಪ್ರಮಾಣದ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ,’’ ಎನ್ನುವ ಆಶಯವನ್ನು ವ್ಯಕ್ತಪಡಿಸಿದ್ದರು.
ಗರ್ಭಿಣಿ ಮಹಿಳೆಯರ ಆಶಾಕಿರಣ: ಗರ್ಭಿಣಿ ಮಹಿಳೆಯ ಆರೈಕೆ ಮಾಹಿತಿಯ ಜತೆಗೆ ಪೌಷ್ಟಿಕ ಆಹಾರ ಹಾಗೂ ಆರೋಗ್ಯದ ಮಾಹಿತಿ, ಸರಕಾರದ ನಾನಾ ಆರೋಗ್ಯ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಬಗ್ಗೆ ತಿಳಿವಳಿಕೆ ನೀಡುವುದು, ಸಂಕಷ್ಟದಲ್ಲಿರುವ ಗರ್ಭಿಣಿಯರು, ಕಡಿಮೆ ತೂಕವುಳ್ಳ ಮಕ್ಕಳನ್ನು ಗುರುತಿಸುವುದು ಈ ಯೋಜನೆಯ ಪ್ರಮುಖ ಅಂಶಗಳಾಗಿದೆ.
ಹೇಗೆ ಕೆಲಸ ಮಾಡುತ್ತದೆ?
ಗರ್ಭಿಣಿಯರು ಸರಕಾರಿ ಅಥವಾ ಯಾವುದೇ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಾಗ ಅಲ್ಲಿ ನಮೂದಾಗುವ ಅವರ ದೂರವಾಣಿ ಸಂಖ್ಯೆಯ ಮೂಲಕ ವಾತ್ಸಲ್ಯವಾಣಿಗೆ ಮಾಹಿತಿ ಕೊಡಲಾಗುತ್ತದೆ. ಗರ್ಭಿಣಿಯಾಗಿ 6 ತಿಂಗಳೊಳಗೆ ಎರಡು ಬಾರಿ ಹಾಗೂ ಗರ್ಭಿಣಿಯಾದ ಬಳಿಕ ಎರಡು ಬಾರಿ ಸಂಬಂಧಪಟ್ಟ ಗರ್ಭಿಣಿಯರಿಗೆ ಕರೆ ಮಾಡಿ ಅವರಿಗೆ ಮಾಹಿತಿ ಜತೆಯಲ್ಲಿ ಜಾಗೃತಿ ವಿಚಾರಗಳನ್ನು ಹೇಳಲು ಟೋಲ್ ಫ್ರಿ ಸಂಖ್ಯೆಯನ್ನು ಆರೋಗ್ಯ ಇಲಾಖೆಯಲ್ಲಿಯೇ ನೀಡಲಾಗುತ್ತದೆ.
ಹಾವೇರಿ, ಹಾಸನ, ಬೀದರ್, ಗದಗ, ಕೊಡಗು, ಧಾರವಾಡ, ಬಾಗಲಕೋಟೆ, ಬಿಜಾಪುರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಹೀಗೆ 10 ಜಿಲ್ಲೆಗಳಲ್ಲಿ ಇದು ಪರಿಣಾಮಕಾರಿಯಾಗಿ ಜಾರಿಯಾಗಿದೆ.
2015ರಿಂದ 2018ರ ವರೆಗೆ ಸರಿಸುಮಾರು 18,300ಕ್ಕಿಂತ ಅಧಿಕ ಶಿಶು ಮೃತಪಟ್ಟಿರುವುದು ದಾಖಲಾಗಿದೆ. ಅದಕ್ಕಾಗಿ ತಾಯಿ-ಮಗುವಿನ ಟ್ರ್ಯಾಕಿಂಗ್ ಸಿಸ್ಟಂ(ಮದರ್ ಚೈಲ್ಡ್ ಟ್ರ್ಯಾಕಿಂಗ್ ಸಿಸ್ಟಂ) ಬಳಸಿಕೊಳ್ಳಲಾಗುತ್ತಿದೆ.
- ವಾತ್ಸಲ್ಯ ವಾಣಿಸಿಬ್ಬಂದಿ
ಮಂಗಳೂರು: ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ಕಡಿಮೆ ಮಾಡುವುದು, ಮಕ್ಕಳ ಪೌಷ್ಟಿಕತೆ ಹೆಚ್ಚಿಸುವುದು ಹಾಗೂ ಕಾಲ ಕಾಲಕ್ಕೆ ಗರ್ಭಿಣಿಯರಿಗೆ ದೂರವಾಣಿಯಲ್ಲಿ ಅಗತ್ಯ ಮಾರ್ಗದರ್ಶನ ನೀಡುವ ಸಲುವಾಗಿ ರಾಜ್ಯ ಸರಕಾರ ‘ವಾತ್ಸಲ್ಯ ವಾಣಿ- 104’ ಯೋಜನೆ ಜಾರಿಗೆ ತಂದಿತು. ಇದು ಮೊದಲ ಹಂತದಲ್ಲಿ ಹತ್ತು ಜಿಲ್ಲೆಗಳಿಗೆ ಸೀಮಿತವಾಗಿತ್ತು. ಹಂತ ಹಂತವಾಗಿ ಈ ಯೋಜನೆಯನ್ನು ವಿಸ್ತರಿಸುವುದಾಗಿ ಸರಕಾರ ಘೋಷಿಸಿತ್ತು. ಆದರೆ ವಾತ್ಸಲ್ಯವಾಣಿ ಶುರುವಾಗಿ ಮೂರು ವರ್ಷ ಕಳೆದರೂ ಅದರ ವ್ಯಾಪ್ತಿ ಹೆಚ್ಚುತ್ತಿಲ್ಲ.
2015ರ ಸೆ.25ರಂದು ವಾತ್ಸಲ್ಯವಾಣಿಗೆ ಚಾಲನೆ ನೀಡಿದ್ದ ಯು.ಟಿ. ಖಾದರ್ ‘‘ ಇದು ಭಾರತದಲ್ಲೇ ಪ್ರಥಮ ಬಾರಿಗೆ ಜಾರಿಯಾಗುತ್ತಿದೆ. ಈ ಸೇವೆಯಿಂದಾಗಿ ತಾಯಿ ಮತ್ತು ಶಿಶು ಮರಣ ಪ್ರಮಾಣದ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ,’’ ಎನ್ನುವ ಆಶಯವನ್ನು ವ್ಯಕ್ತಪಡಿಸಿದ್ದರು.
ಗರ್ಭಿಣಿ ಮಹಿಳೆಯರ ಆಶಾಕಿರಣ: ಗರ್ಭಿಣಿ ಮಹಿಳೆಯ ಆರೈಕೆ ಮಾಹಿತಿಯ ಜತೆಗೆ ಪೌಷ್ಟಿಕ ಆಹಾರ ಹಾಗೂ ಆರೋಗ್ಯದ ಮಾಹಿತಿ, ಸರಕಾರದ ನಾನಾ ಆರೋಗ್ಯ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಬಗ್ಗೆ ತಿಳಿವಳಿಕೆ ನೀಡುವುದು, ಸಂಕಷ್ಟದಲ್ಲಿರುವ ಗರ್ಭಿಣಿಯರು, ಕಡಿಮೆ ತೂಕವುಳ್ಳ ಮಕ್ಕಳನ್ನು ಗುರುತಿಸುವುದು ಈ ಯೋಜನೆಯ ಪ್ರಮುಖ ಅಂಶಗಳಾಗಿದೆ.
ಹೇಗೆ ಕೆಲಸ ಮಾಡುತ್ತದೆ?
ಗರ್ಭಿಣಿಯರು ಸರಕಾರಿ ಅಥವಾ ಯಾವುದೇ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಾಗ ಅಲ್ಲಿ ನಮೂದಾಗುವ ಅವರ ದೂರವಾಣಿ ಸಂಖ್ಯೆಯ ಮೂಲಕ ವಾತ್ಸಲ್ಯವಾಣಿಗೆ ಮಾಹಿತಿ ಕೊಡಲಾಗುತ್ತದೆ. ಗರ್ಭಿಣಿಯಾಗಿ 6 ತಿಂಗಳೊಳಗೆ ಎರಡು ಬಾರಿ ಹಾಗೂ ಗರ್ಭಿಣಿಯಾದ ಬಳಿಕ ಎರಡು ಬಾರಿ ಸಂಬಂಧಪಟ್ಟ ಗರ್ಭಿಣಿಯರಿಗೆ ಕರೆ ಮಾಡಿ ಅವರಿಗೆ ಮಾಹಿತಿ ಜತೆಯಲ್ಲಿ ಜಾಗೃತಿ ವಿಚಾರಗಳನ್ನು ಹೇಳಲು ಟೋಲ್ ಫ್ರಿ ಸಂಖ್ಯೆಯನ್ನು ಆರೋಗ್ಯ ಇಲಾಖೆಯಲ್ಲಿಯೇ ನೀಡಲಾಗುತ್ತದೆ.
ಹಾವೇರಿ, ಹಾಸನ, ಬೀದರ್, ಗದಗ, ಕೊಡಗು, ಧಾರವಾಡ, ಬಾಗಲಕೋಟೆ, ಬಿಜಾಪುರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಹೀಗೆ 10 ಜಿಲ್ಲೆಗಳಲ್ಲಿ ಇದು ಪರಿಣಾಮಕಾರಿಯಾಗಿ ಜಾರಿಯಾಗಿದೆ.
2015ರಿಂದ 2018ರ ವರೆಗೆ ಸರಿಸುಮಾರು 18,300ಕ್ಕಿಂತ ಅಧಿಕ ಶಿಶು ಮೃತಪಟ್ಟಿರುವುದು ದಾಖಲಾಗಿದೆ. ಅದಕ್ಕಾಗಿ ತಾಯಿ-ಮಗುವಿನ ಟ್ರ್ಯಾಕಿಂಗ್ ಸಿಸ್ಟಂ(ಮದರ್ ಚೈಲ್ಡ್ ಟ್ರ್ಯಾಕಿಂಗ್ ಸಿಸ್ಟಂ) ಬಳಸಿಕೊಳ್ಳಲಾಗುತ್ತಿದೆ.
- ವಾತ್ಸಲ್ಯ ವಾಣಿಸಿಬ್ಬಂದಿ