ಆ್ಯಪ್ನಗರ

ದ.ಕನ್ನಡದಲ್ಲಿ 246 ಕೊರೊನಾ ಪಾಸಿಟಿವ್‌, 6 ಮಂದಿ ಮೃತ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಕೊರೊನಾ ಸೋಂಕಿತ ಆರು ಮಂದಿ ಮೃತಪಟ್ಟಿದ್ದು, ಇಲ್ಲಿವರೆಗೆ ಒಟ್ಟು 250 ಮಂದಿ ಸಾವನ್ನಪ್ಪಿದ್ದಾರೆ. 246 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8071ಕ್ಕೇರಿಕೆಯಾಗಿದೆ.

Vijaya Karnataka Web 13 Aug 2020, 9:05 pm
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಕೊರೊನಾ ಸೋಂಕಿತ ಆರು ಮಂದಿ ಮೃತಪಟ್ಟಿದ್ದು, ಇಲ್ಲಿವರೆಗೆ ಒಟ್ಟು 250 ಮಂದಿ ಸಾವನ್ನಪ್ಪಿದ್ದಾರೆ. 246 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8071ಕ್ಕೇರಿಕೆಯಾಗಿದೆ. ಮೃತರಲ್ಲಿ 209 ಮಂದಿ ದಕ ಜಿಲ್ಲೆಯವರಾದರೆ, 41 ಮಂದಿ ಹೊರಜಿಲ್ಲೆಯವರು.
Vijaya Karnataka Web coronavirus
ಸಾಂದರ್ಭಿಕ ಚಿತ್ರ


ಗುರುವಾರ ಮೃತಪಟ್ಟವರಲ್ಲಿ ಮಂಗಳೂರು ತಾಲೂಕಿನ ಮೂವರು, ಬಂಟ್ವಾಳದ ಒಬ್ಬರು ಮತ್ತು ಹೊರಜಿಲ್ಲೆಯ ಇಬ್ಬರು ಇದ್ದಾರೆ. 641 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಅದರಲ್ಲಿ100 ಮಂದಿ ಕೋವಿಡ್‌ ಸೆಂಟರ್‌ನಿಂದ, 429 ಮಂದಿ ಮನೆಗಳಿಂದ ಮತ್ತು 112 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಒಟ್ಟು 5873 ಮಂದಿ ಸೋಂಕಿನಿಂದ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 1948 ಮಂದಿ ಸೋಂಕಿತರ ಚಿಕಿತ್ಸೆ ಮುಂದುವರಿದಿದೆ.

ಪಾಸಿಟಿವ್‌ ಆದವರಲ್ಲಿ ಮಂಗಳೂರು ತಾಲೂಕಿನ 150, ಬಂಟ್ವಾಳದ 47, ಪುತ್ತೂರಿನ 16, ಸುಳ್ಯದ 7, ಬೆಳ್ತಂಗಡಿಯ 15 ಮತ್ತು ಇತರ ಜಿಲ್ಲೆಗಳ 11 ಮಂದಿ ಇದ್ದಾರೆ. ಅವರಲ್ಲಿ36 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. 103 ಮಂದಿಗೆ ಇನ್‌ಫ್ಲುಯೆಂಜ್ಝಾ ಲೈಕ್‌ ಇಲ್‌ನೆಸ್‌ ಕಂಡುಬಂದಿದ್ದು, 10 ಮಂದಿ ಉಸಿರಾಟ ಸಮಸ್ಯೆಯಿಂದ ಚಿಕಿತ್ಸೆಗೆ ತೆರಳಿದಾಗ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ.

ಏನಿದು ಪಾರದರ್ಶಕ ತೆರಿಗೆ ನೀತಿ? ಹೇಗಿರಲಿದೆ ಹೊಸ ತೆರಿಗೆ ವಿಧಾನ?

97 ಮಂದಿಗೆ ಸೋಂಕು ತಗುಲಿದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. 67 ಪುರುಷರು ಮತ್ತು 34 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 101 ಸಿಂಪ್ಟಮ್ಯಾಟಿಕ್‌ ಮತ್ತು 87 ಪುರುಷರು, 58 ಮಹಿಳೆಯರು ಸೇರಿದಂತೆ 145 ಮಂದಿ ಅಸಿಂಪ್ಟಮ್ಯಾಟಿಕ್‌ ಪ್ರಕರಣಗಳಿವೆ. ಎಲ್ಲರಿಗೂ ವಿವಿಧ ಆಸ್ಪತ್ರೆಗಳಲ್ಲಿಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಡಳಿತದ ವರದಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ