ಆ್ಯಪ್ನಗರ

ಎಂಡಿಎಂಎ ಮಾದಕ ಜಾಲ ಪತ್ತೆ: ಮೂವರ ಸೆರೆ

ಬೀಚ್‌ಗಳಲ್ಲಿ ಮಾದಕ(ಎಂಡಿಎಂಎ) ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪಣಂಬೂರು ಪೊಲೀಸರು ಕಾರ್ಯಾಚರಣೆ ನಡೆಸಿ ಶುಕ್ರವಾರ ಮೂವರನ್ನು ಬಂಧಿಸಿದ್ದು, ಈ ಸಂದರ್ಭ ಲಕ್ಷಾಂತರ ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.

Vijaya Karnataka 20 Jul 2019, 3:52 pm
ಮಂಗಳೂರು: ನಗರದ ಬೀಚ್‌ಗಳಲ್ಲಿ ಮಾದಕ(ಎಂಡಿಎಂಎ) ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪಣಂಬೂರು ಪೊಲೀಸರು ಕಾರ್ಯಾಚರಣೆ ನಡೆಸಿ ಶುಕ್ರವಾರ ಮೂವರನ್ನು ಬಂಧಿಸಿದ್ದು, ಈ ಸಂದರ್ಭ ಲಕ್ಷಾಂತರ ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.
Vijaya Karnataka Web 3 arested for mdma drugs
ಎಂಡಿಎಂಎ ಮಾದಕ ಜಾಲ ಪತ್ತೆ: ಮೂವರ ಸೆರೆ


ಉಳ್ಳಾಲ ಒಳಪೇಟೆ ನಿವಾಸಿ ಅಬೂಬಕರ್‌ ಮಿಸ್ಬಾ (24), ಸೋಮೇಶ್ವರ ಪೆರ್ಮನ್ನೂರು ನಿವಾಸಿ ಶಬ್ಬೀರ್‌ ಅಹಮ್ಮದ್‌ ಯಾನೆ ಶಬ್ಬೀರ್‌ (27), ಉಳ್ಳಾಲ ಅಲೇಕಳ ನಿವಾಸಿ ಶಿಹಾಬ್‌ ಅಬ್ದುಲ್‌ ರಝಾಕ್‌ (27) ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳಿಂದ 80 ಸಾವಿರ ರೂ. ಮೌಲ್ಯದ 16.55 ಗ್ರಾಂ ತೂಕದ ಎಂಡಿಎಂಎ, 25 ಸಾವಿರ ಮೌಲ್ಯದ ಸ್ಕೂಟರ್‌, 2 ಸಾವಿರ ರೂ. ಮೌಲ್ಯದ 4 ಮೊಬೈಲ್‌ಗಳು, 3,200 ರೂ. ನಗದು ವಶಪಡಿಸಿಕೊಂಡಿದ್ದಾರೆ. ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 1,10,200 ರೂ. ಎಂದು ಅಂದಾಜಿಸಲಾಗಿದೆ.

ಘಟನೆ ವಿವರ: ಮೂವರು ಆರೋಪಿಗಳು ಮುಂಬಯಿಗೆ ತೆರಳಿ ಅಲ್ಲಿಂದ 'ಎಂಡಿಎಂಎ' ಮಾದಕದ್ರವ್ಯ ಖರೀದಿ ಮಾಡುತ್ತಿದ್ದರು. ಬಳಿಕ ಕಾಲೇಜು ವಿದ್ಯಾರ್ಥಿಗಳನ್ನೇ ಪ್ರಮುಖವಾಗಿ ಟಾರ್ಗೆಟ್‌ ಮಾಡಿ ಮಂಗಳೂರು ನಗರ, ಉಳ್ಳಾಲ ಪಣಂಬೂರು, ಇತರ ಬೀಚ್‌ ಪರಿಸರದಲ್ಲಿ ಮಾರಾಟ ಮಾಡುತ್ತಿದ್ದರು. ಶುಕ್ರವಾರ ಬೈಕಂಪಾಡಿಯಿಂದ ಕೂರಿಕಟ್ಟ ಕಡೆಗೆ ಹೋಗುವ ಕಾಂಕ್ರೀಟ್‌ ರಸ್ತೆಯಲ್ಲಿ ಸ್ಕೂಟರ್‌ ನಿಲ್ಲಿಸಿ ಆರೋಪಿ ಎಂಡಿಎಎಂ ಮಾರಾಟಕ್ಕೆ ಯತ್ನಿಸುತ್ತಿದ್ದರು. ಈ ಬಗ್ಗೆ ವಿಶೇಷ ಅಪರಾಧ ಪತ್ತೆದಳಕ್ಕೆ ಸಿಕ್ಕ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಸುತ್ತುವರಿದರು. ಈ ವೇಳೆ ಆರೋಪಿಗಳು ಪರಾರಿಯಾಗಲು ಯತ್ನಿಸಿದರೂ ಕಾರ್ಯಾಚರಣೆ ನಡೆಸಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಮುಂದಿನ ಕ್ರಮಕ್ಕಾಗಿ ಪಣಂಬೂರು ಪೊಲೀಸ್‌ ಠಾಣೆಗೆ ಹಸ್ತಾಂತರಿಸಲಾಗಿದೆ.

ಮಂಗಳೂರು ನಗರ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೇಗಣೇಶ್‌ ಮಾರ್ಗದರ್ಶನದಲ್ಲಿ ಮಂಗಳೂರು ಉತ್ತರ ವಿಭಾಗದ ಎಸಿಪಿ ಶ್ರೀನಿವಾಸ ಆರ್‌. ಗೌಡ ನೇತೃತ್ವದಲ್ಲಿ ಪಣಂಬೂರು ಪೊಲೀಸ್‌ ಠಾಣೆ ಪೊಲೀಸ್‌ ನಿರೀಕ್ಷ ಕ ಅಜ್ಮತ್‌ ಅಲಿ, ಮಂಗಳೂರು ಉತ್ತರ ಉಪವಿಭಾಗದ ವಿಶೇಷ ಅಪರಾದ ಪತ್ತೆ ದಳದ ಅಧಿಕಾರಿ ಎಎಸ್ಸೈ ಮುಹಮ್ಮದ್‌, ಸಿಬ್ಬಂದಿ ಕುಶಲ ಮಣಿಯಾಣಿ, ಸತೀಶ್‌ ಎಂ., ವಿಜಯ ಕಾಂಚನ್‌, ಇಸಾಕ್‌, ಶರಣ್‌ ಕಾಳಿ ಹಾಗೂ ಮಂಗಳೂರು ನಗರ ಸಿಸಿಬಿ ಘಟಕದ ಪೊಲೀಸ್‌ ಉಪನಿರೀಕ್ಷ ಕ ಕಬ್ಬಾಳ್‌ರಾಜ್‌, ಎಎಸ್ಸೈಗಳಾದ ಮೋಹನ್‌ ಶೆಟ್ಟಿಯಾರ್‌, ಹರೀಶ್‌ ಮತ್ತು ಸಿಬ್ಬಂದಿ ಚಂದ್ರಶೇಖರ, ಜಬ್ಬಾರ್‌, ರಾಜಾ, ಮಣಿ, ಯೋಗೀಶ್‌, ನೂತನ್‌ ಹಾಗೂ ವಿಶ್ವ ಪೂಜಾರಿ ಹಾಗೂ ಪಣಂಬೂರು ಠಾಣಾ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ