ಆ್ಯಪ್ನಗರ

ತಿಂಗಳಾಡಿ: ಸಫಿಯಾ ನಿಗೂಢ ನಾಪತ್ತೆಗೆ 5 ವರ್ಷ, ಏನಾದಳು ಮೂರು ಮಕ್ಕಳ ತಾಯಿ?

ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ತ್ಯಾಗರಾಜೆ ಎಂಡೆಸಾಗು ನಿವಾಸಿ ಎಂ.ಎಸ್‌. ವಾಜಿದ್‌ ಎಂಬವರ ಪತ್ನಿ ಸಫಿಯಾ ಅವರು 2014 ರಲ್ಲಿ ನಾಪತ್ತೆಯಾಗಿದ್ದರು.

Vijaya Karnataka 9 Sep 2019, 8:48 am
ತಿಂಗಳಾಡಿ: ಕೆದಂಬಾಡಿ ಗ್ರಾಮದ ತಿಂಗಳಾಡಿ ಸಮೀಪದ ತ್ಯಾಗರಾಜೆ ಎಂಡೆಸಾಗುವಿನ ವಿವಾಹಿತ ಮಹಿಳೆ ಸಫಿಯಾ ನಿಗೂಢ ನಾಪತ್ತೆಯಾಗಿ 5 ವರ್ಷ ವರ್ಷಗಳಾಗಿದ್ದು, ಇದುವರೆಗೂ ಅವರ ಸುಳಿವು ದೊರಕದೇ ಪ್ರಕರಣ ನಿಗೂಢವಾಗಿಯೇ ಉಳಿದಿದೆ. ಪ್ರಕರಣವನ್ನು ಬೇಧಿಸಲು ಪೊಲೀಸರು ವಿಫಲವಾಗಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
Vijaya Karnataka Web Police Hat


ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ತ್ಯಾಗರಾಜೆ ಎಂಡೆಸಾಗು ನಿವಾಸಿ ಎಂ.ಎಸ್‌. ವಾಜಿದ್‌ ಎಂಬವರ ಪತ್ನಿ ಸಫಿಯಾ ಅವರು 2014 ರಲ್ಲಿ ನಾಪತ್ತೆಯಾಗಿದ್ದರು. ಬೆಳಗ್ಗೆ 6.30 ರ ವೇಳೆಗೆ ಕೆದಂಬಾಡಿ ಗ್ರಾಮದ ಸನ್ಯಾಸಿಗುಡ್ಡೆಯಲ್ಲಿರುವ ತನ್ನ ತಂದೆಯ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಅಲ್ಲಿಗೂ ಹೋಗದೆ, ಮರಳಿ ಮನೆಗೂ ಬಾರದೇ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಪುತ್ರ ಮಹಮ್ಮದ್‌ ರಿಯಾಝ್‌ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಹುಟುಕಾಟ ನಡೆಸಿದ್ದರೂ ಪತ್ತೆ ಹಚ್ಚಲು ಮಾತ್ರ ಸಾಧ್ಯವಾಗಿಲ್ಲ. ಸಫಿಯಾರವರ ಕುಟುಂಬಸ್ಥರೂ ಕೂಡಾ ಎಲ್ಲೆಡೆ ಹುಡುಕಾಟ ನಡೆಸಿದ್ದರು. ಸಂಬಂಧಿಕರಿಗೆಲ್ಲರಿಗೂ ವಿಚಾರ ತಿಳಿಸಿ ಪತ್ತೆಗಾಗಿ ಸಹಾಯ ಯಾಚಿಸಿದ್ದರು. ಕಾಸರಗೋಡು, ಉಳ್ಳಾಲ, ಚೆರ್ಕಳ, ಕಾಞಂಗಾಡ್‌, ಮೂಡಿಗೆರೆ ಮತ್ತಿತರ ಕಡೆಗಳಲ್ಲಿರುವ ಸಂಬಂಧಿಕರ ಮನೆಗೂ ತೆರಳಿ ಹುಡುಕಾಟ ನಡೆಸಿದ್ದರು. ಪರಿಚಯಸ್ಥರೆಲ್ಲರಿಗೂ ಫೋನ್‌ ಮುಖಾಂತರ ನಾಪತ್ತೆ ವಿಚಾರ ತಿಳಿಸಿ ಪತ್ತೆಗಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಪತ್ರಿಕಾ ಮಾಧ್ಯಮಗಳ ಮುಖಾಂತರವೂ ಅವರ ಪತ್ತೆಗಾಗಿ ಪ್ರಯತ್ನ ನಡೆಸಿದ್ದರು. ಆದರೆ ಅವರ ಪ್ರಯತ್ನಗಳೆಲ್ಲವೂ ವಿಫಲವಾಗಿದ್ದು ಇದುವರೆಗೂ ಯಾವುದೇ ಸುಳಿವು ಮಾತ್ರ ಲಭ್ಯವಾಗಿಲ್ಲ.

ಸಫಿಯಾ ಅವರ ಮೂವರು ಮಕ್ಕಳಾದ ಮಹಮ್ಮದ್‌ ರಿಯಾಝ್‌(22), ನವಾಝ್‌(18), ಹಾಗೂ ಕಿರಿಯ ಮಗಳು ಉನೈಸಾ(12)ರವರು ತಮ್ಮ ತಾಯಿ ಮರಳಿ ಬರಬಹುದು ಎಂಬ ನಿರೀಕ್ಷೆಯಲ್ಲಿ ಈಗಲೂ ಕಾಯುತ್ತಿದ್ದಾರೆ.

ಸೂಕ್ತ ತನಿಖೆಯಾಗಬೇಕಿದೆ...

ಸಫಿಯಾ ಅವರು ನಾಪತ್ತೆಯಾಗಿ 5 ವರ್ಷವಾದರೂ ಪ್ರಕರಣ ನಿಗೂಢತೆಯಲ್ಲೇ ಮುಂದುವರಿದಿರುವ ಹಿನ್ನೆಲೆಯಲ್ಲಿಪೊಲೀಸ್‌ ಇಲಾಖೆ ಸಮಗ್ರ ತನಿಖೆ ನಡೆಸಿ ಪ್ರಕರಣವನ್ನು ಬೇಧಿಸಬೇಕಿದೆ ಎಂಬ ಆಗ್ರಹ ಸಾರ್ವಜನಿಕರದ್ದಾಗಿದೆ. ಹೆಣ್ಮಕ್ಕಳ ನಾಪತ್ತೆ ವಿಚಾರದಲ್ಲಿಬೀದಿಗಿಳಿಯುವ ಮಹಿಳಾ ಸಂಘಟನೆಗಳು ಕೂಡಾ ಈ ವಿಚಾರದಲ್ಲಿಮೌನಕ್ಕೆ ಶರಣಾಗಿವೆ ಎಂಬ ಆರೋಪವೂ ಪ್ರಾರಂಭದಲ್ಲಿಕೇಳಿ ಬಂದಿತ್ತು. ನಮ್ಮ ಅಮ್ಮ ಮರಳಿ ಬಂದೇ ಬರುತ್ತಾರೆ ಎಂದು ಸಫಿಯಾರವರ ಮಕ್ಕಳು ಈಗಲೂ ಹೇಳುತ್ತಿದ್ದು ಸಮಗ್ರ ತನಿಖೆಯಿಂದಷ್ಟೇ ನೈಜಾಂಶ ಹೊರಬರಬಹುದಾಗಿದೆ.

ತಾಯಿ ನಾಪತ್ತೆಯಾಗಿ 5 ವರ್ಷವಾಗಿದೆ. ನಮಗೆ ಮೂವರು ಮಕ್ಕಳಿಗೂ ಯಾವಾಗಲೂ ತಾಯಿಯ ನೆನಪಾಗುತ್ತಿದೆ. ಇಂದಲ್ಲ, ನಾಳೆಯಾದರೂ ನಮ್ಮ ತಾಯಿ ಮರಳಿ ಬಂದೇ ಬರುತ್ತಾರೆ ಎಂದು ವಿಶ್ವಾಸದಲ್ಲಿದ್ದು ಪ್ರಾರ್ಥಿಸುತ್ತಿದ್ದೇವೆ. ಯಾರಾದರೂ ತಾಯಿಯನ್ನು ಕಂಡರೆ ದಯವಿಟ್ಟು ಮಾಹಿತಿ ನೀಡಬೇಕಾಗಿ ವಿನಂತಿ-ಮುಹಮ್ಮದ್‌ ರಿಯಾಝ್‌, ಸಫಿಯಾರ ಹಿರಿಯ ಪುತ್ರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ