ಆ್ಯಪ್ನಗರ

ಮಂಗಳೂರು ವಿಮಾನ ದುರಂತಕ್ಕೆ 9 ವರ್ಷ

ಜಾಗತಿಕ ಮಟ್ಟದಲ್ಲಿ ಭಾರಿ ಸುದ್ದಿ ಮಾಡಿದ ಮಂಗಳೂರು ವಿಮಾನ ದುರಂತಕ್ಕೆ ಇದೀಗ 9 ವರ್ಷ ಕಳೆದಿದೆ. ದುರಂತದಲ್ಲಿ ಮಡಿದವರ ಕೆಲವು ನಿಕಟ ಸಂಬಂಧಿಕರು ಹೆಚ್ಚುವರಿ ಪರಿಹಾರಕ್ಕಾಗಿ ಸುಪ್ರೀಂಕೋರ್ಟ್‌ನಲ್ಲಿ ಹೋರಾಟ ನಡೆಸುತ್ತಿದ್ದು, ಶೀಘ್ರದಲ್ಲೇ ತೀರ್ಪು ಹೊರಬೀಳುವ ನಿರೀಕ್ಷೆಯಿದೆ.

Vijaya Karnataka 22 May 2019, 4:01 pm
ಮಂಗಳೂರು: ಜಾಗತಿಕ ಮಟ್ಟದಲ್ಲಿ ಭಾರಿ ಸುದ್ದಿ ಮಾಡಿದ ಮಂಗಳೂರು ವಿಮಾನ ದುರಂತಕ್ಕೆ ಇದೀಗ 9 ವರ್ಷ ಕಳೆದಿದೆ. ದುರಂತದಲ್ಲಿ ಮಡಿದವರ ಕೆಲವು ನಿಕಟ ಸಂಬಂಧಿಕರು ಹೆಚ್ಚುವರಿ ಪರಿಹಾರಕ್ಕಾಗಿ ಸುಪ್ರೀಂಕೋರ್ಟ್‌ನಲ್ಲಿ ಹೋರಾಟ ನಡೆಸುತ್ತಿದ್ದು, ಶೀಘ್ರದಲ್ಲೇ ತೀರ್ಪು ಹೊರಬೀಳುವ ನಿರೀಕ್ಷೆಯಿದೆ.
Vijaya Karnataka Web crash


2010 ಮೇ 22ರಂದು ಬಜಪೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರæ್ರÜ್ರಸ್‌ ವಿಮಾನ ದುರಂತಕ್ಕೀಡಾಗಿತ್ತು. ವಿಮಾನ ದುಬೈಯಿಂದ ಮಂಗಳೂರಿಗೆ ಆಗಮಿಸಿತ್ತು. ಇನ್ನೇನು ವಿಮಾನ ಲ್ಯಾಂಡ್‌ ಆಗಲಿದೆ ಎನ್ನುವಷ್ಟರಲ್ಲಿ ರನ್‌ ವೇಯಿಂದ ಜಿಗಿದು ಇಬ್ಭಾಗವಾಗಿತ್ತು. ವಿಮಾನದಲ್ಲಿದ್ದ 166 ಮಂದಿಯಲ್ಲಿ 158 ಮಂದಿ ಸುಟ್ಟು ಕರಕಲಾಗಿದ್ದರು. ಸತ್ತವರಲ್ಲಿ ಏರ್‌ ಇಂಡಿಯಾದ ಪೈಲಟ್‌ ಸೇರಿದಂತೆ ಎಂಟು ಸಿಬ್ಬಂದಿಗಳಿದ್ದರು. ವಿಮಾನದಿಂದ ಜಿಗಿದು 8 ಮಂದಿ ಪವಾಡಸದೃಶ ಪಾರಾಗಿದ್ದರು.

ಸಾವಿಗೀಡಾದವರಲ್ಲಿ 135 ಮಂದಿ ವಯಸ್ಕರು, 19 ಮಂದಿ ಮಕ್ಕಳು ಹಾಗೂ 4 ಮಂದಿ ಪುಟಾಣಿಗಳಿದ್ದರು. ದುರಂತದ ಭೀಕರತೆ ಎಷ್ಟಿತೆಂದರೆ ಕೇವಲ 22 ಮೃತದೇಹಗಳ ಗುರುತು ಪತ್ತೆ ಹಚ್ಚಲು ಮಾತ್ರ ಸಾಧ್ಯವಾಗಿತ್ತು. ಡಿಎನ್‌ಎ ಪರೀಕ್ಷೆಯ ಬಳಿಕವೂ 12 ಮೃತದೇಹಗಳು ಅನಾಥವಾಗಿದ್ದವು. ನಂತರ ಕೂಳೂರು- ತಣ್ಣೀರುಬಾವಿ ರಸ್ತೆಯ ಪಕ್ಕದಲ್ಲೇ ಇರುವ ಸರಕಾರಿ ಜಾಗದಲ್ಲಿ ಅನಾಥ ಮೃತದೇಹಗಳಿಗೆ ಸರ್ವಧರ್ಮ ಪ್ರಾರ್ಥನೆ ಮೂಲಕ ಅಂತ್ಯ ಸಂಸ್ಕಾರ ನಡೆಸಲಾಗಿತ್ತು. ನಂತರ ಆ ಸ್ಥಳಕ್ಕೆ ವಿಮಾನ ದುರಂತ ಉದ್ಯಾನವನ ಎಂದು ಹೆಸರಿಟ್ಟು ದುರಂತದಲ್ಲಿ ಮಡಿದವರ ಸ್ಮರಣಾರ್ಥವಾಗಿ ಸ್ಮಾರಕವನ್ನು ನಿರ್ಮಿಸಲಾಯಿತು.

ವಿಮಾನ ದುರಂತದಲ್ಲಿ ಮಡಿದವರ ಹೆಚ್ಚಿನ ಸಂಬಂಧಿಕರು ಸಿಕ್ಕಿದ ಪರಿಹಾರ ಪಡೆದುಕೊಂಡು ಸುಮ್ಮನಾದರು. ಸುಮಾರು 1ರಿಂದ 8 ಕೋಟಿ ರೂ. ವರೆಗೆ ಪರಿಹಾರ ದೊರಕಿತ್ತು. ಆದರೆ ಕೆಲವು ಸಂತ್ರಸ್ತರು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.

ಶ್ರದ್ಧಾಂಜಲಿ ಸಮರ್ಪಣೆ

ವಿಮಾನ ದುರಂತದಲ್ಲಿ ಸಾವಿಗೀಡಾದವರ ನೆನಪಿನಾರ್ಥವಾಗಿ ಕೂಳೂರು- ತಣ್ಣೀರು ಬಾವಿ ರಸ್ತೆ ಪಕ್ಕದಲ್ಲಿರುವ ವಿಮಾನ ದುರಂತ ಸ್ಮಾರಕ ಉದ್ಯಾವನದಲ್ಲಿ ಮಂಗಳವಾರ ಜಿಲ್ಲಾಡಳಿತ ಪರವಾಗಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ