ಆ್ಯಪ್ನಗರ

ದೇರಳಕಟ್ಟೆ: ಎ.ಬಿ. ಶೆಟ್ಟಿ ಕಾಲೇಜಿನಲ್ಲಿ ಓರೋಫೇಶಿಯಲ್‌ ಪೈನ್‌ ಕ್ಲಿನಿಕ್‌ ಉದ್ಘಾಟನೆ

ದಂತ ಚಿಕಿತ್ಸೆಯಲ್ಲಿ ಎ.ಬಿ. ಶೆಟ್ಟಿ ಕಾಲೇಜು ನೂತನ ತಂತ್ರಜ್ಞಾನದೊಂದಿಗೆ ಸದಾ ಮುಂದಿದ್ದು ನೂತನ ಕ್ಲಿನಿಕ್‌ ಗುಣಮಟ್ಟದ ಚಿಕಿತ್ಸೆಗೆ ಇನ್ನಷ್ಟು ಬಲ ತುಂಬಲಿದೆ. ದೇಶದಲ್ಲಿರುವ ದಂತ ಕಾಲೇಜುಗಳ ಪೈಕಿ ಎ.ಬಿ. ಶೆಟ್ಟಿ ಕಾಲೇಜು ಎರಡನೇ ಸ್ಥಾನ ಪಡೆದಿದ್ದು ಇಲ್ಲಿನ ವೈದ್ಯರು, ಸಿಬ್ಬಂದಿಯ ಕಠಿಣ ಪರಿಶ್ರಮ ಕಾರಣವಾಗಿದ್ದು ಶೀಘ್ರವೇ ಮೊದಲ ಸ್ಥಾನ ತಲುಪಿಸುವಲ್ಲಿ ತಂಡ ಇನ್ನಷ್ಟು ಪರಿಶ್ರಮಪಡಬೇಕಿದೆ ಎಂದು ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ವಿಶಾಲ್‌ ಹೆಗ್ಡೆ ಹೇಳಿದರು.

Vijaya Karnataka 12 Jun 2019, 3:28 pm
ತೊಕ್ಕೊಟ್ಟು: ದಂತ ಚಿಕಿತ್ಸೆಯಲ್ಲಿ ಎ.ಬಿ. ಶೆಟ್ಟಿ ಕಾಲೇಜು ನೂತನ ತಂತ್ರಜ್ಞಾನದೊಂದಿಗೆ ಸದಾ ಮುಂದಿದ್ದು ನೂತನ ಕ್ಲಿನಿಕ್‌ ಗುಣಮಟ್ಟದ ಚಿಕಿತ್ಸೆಗೆ ಇನ್ನಷ್ಟು ಬಲ ತುಂಬಲಿದೆ. ದೇಶದಲ್ಲಿರುವ ದಂತ ಕಾಲೇಜುಗಳ ಪೈಕಿ ಎ.ಬಿ. ಶೆಟ್ಟಿ ಕಾಲೇಜು ಎರಡನೇ ಸ್ಥಾನ ಪಡೆದಿದ್ದು ಇಲ್ಲಿನ ವೈದ್ಯರು, ಸಿಬ್ಬಂದಿಯ ಕಠಿಣ ಪರಿಶ್ರಮ ಕಾರಣವಾಗಿದ್ದು ಶೀಘ್ರವೇ ಮೊದಲ ಸ್ಥಾನ ತಲುಪಿಸುವಲ್ಲಿ ತಂಡ ಇನ್ನಷ್ಟು ಪರಿಶ್ರಮಪಡಬೇಕಿದೆ ಎಂದು ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ವಿಶಾಲ್‌ ಹೆಗ್ಡೆ ಹೇಳಿದರು.
Vijaya Karnataka Web a b shetty college orofacial pain clinic
ದೇರಳಕಟ್ಟೆ: ಎ.ಬಿ. ಶೆಟ್ಟಿ ಕಾಲೇಜಿನಲ್ಲಿ ಓರೋಫೇಶಿಯಲ್‌ ಪೈನ್‌ ಕ್ಲಿನಿಕ್‌ ಉದ್ಘಾಟನೆ


ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯ ಅಧೀನದ ದೇರಳಕಟ್ಟೆಯ ಎ.ಬಿ. ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದಲ್ಲಿ ನೂತನವಾಗಿ ಆರಂಭಗೊಂಡ 'ಓರೋಫೇಶಿಯಲ್‌ ಪೈನ್‌ ಕ್ಲಿನಿಕ್‌'ನ್ನು ಮಂಗಳವಾರ ಉದ್ಘಾಟಿಸಿ, ವಿಂಶತಿ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ದಂತ ಕೌನ್ಸಿಲ್‌ ಅಧ್ಯಕ್ಷ ಡಾ. ರಾಜ್‌ ಕುಮಾರ್‌ ಅಲೆ, ನೂತನ ಕ್ಲಿನಿಕ್‌ ಅತ್ಯಾಧುನಿಕ ಹಾಗೂ ನೂತನ ತಂತ್ರಜ್ಞಾನಗಳನ್ನು ಹೊಂದಿದ್ದು, ಮುಖಾಂಗಕ್ಕೆ ಸಂಬಂಧಪಟ್ಟ ಕ್ಲಿಷ್ಟಕರ ಸಮಸ್ಯೆಗಳ ಪರಿಹಾರ ಸುಲಭವಾಗಲಿದೆ ಎಂದರು.

ಮಂಗಳೂರು ಎಂಸಿಓಡಿಎಸ್‌ ಓರಲ್‌ ಮೆಡಿಸಿನ್‌ ಮತ್ತು ರೇಡಿಯೋಲಜಿ ವಿಭಾಗ ಮುಖ್ಯಸ್ಥ ಡಾ. ರವಿಕಿರಣ್‌ ಓಂಗೋಲೆ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಎ.ಬಿ. ಶೆಟ್ಟಿ ದಂತ ಕಾಲೇಜಿನ ಸ್ಥಾಪಕ ಡೀನ್‌ ಡಾ.ಎನ್‌. ಶ್ರೀಧರ್‌ ಶೆಟ್ಟಿ, ಕಾರ್ಯಕ್ರಮ ಸಹಸಂಯೋಜಕಿ ಡಾ. ಶೃತಿ ಹೆಗ್ಡೆ ಉಪಸ್ಥಿತರಿದ್ದರು. ಕಾಲೇಜಿನ ಡೀನ್‌ ಡಾ.ಯು.ಎಸ್‌. ಕೃಷ್ಣ ನಾಯಕ್‌ ಸ್ವಾಗತಿಸಿದರು. ಡಾ. ವಿದ್ಯಾ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.

ಡಾ. ಸುಪ್ರಿಯಾ ಭಟ್‌ ಕಾರ್ಯಕ್ರಮ ನಿರೂಪಿಸಿದರು. ಓರಲ್‌ ಮೆಡಿಸಿನ್‌ ಮತ್ತು ರೇಡಿಯೋಲಜಿ ವಿಭಾಗ ಮುಖ್ಯಸ್ಥ ಡಾ. ಸುಭಾಷ್‌ ಬಾಬು ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ