ಆ್ಯಪ್ನಗರ

‘ಕಬ್ಬು ಕೊಡುತ್ತೇನೆ’ ಎಂದು ಪುಸಲಾಯಿಸಿ ವಿಶೇಷಚೇತನ ಯುವಕನ ಮೇಲೆ ಅತ್ಯಾಚಾರ ಎಸಗಿದ ಕಾಮುಕ!

ಎಂಡೋಸಲ್ಫಾನ್ ಬಾಧಿತ ಇಪ್ಪತ್ತು ವರ್ಷದ ತರುಣ ಶುಕ್ರವಾರ ಮುಸ್ಸಂಜೆಯ ವೇಳೆ ವಾಕಿಂಗ್‌ಗೆ ಹೋಗಿದ್ದಾಗ ತರುಣನ ಮನೆಯ ಸಮೀಪದ ವ್ಯಕ್ತಿ ಮಹಮ್ಮದ್ ಹನೀಫ್‌ ಎಂಬ ಕಾಮುಕ, ಆತನ ಜೊತೆ ಮಾತನಾಡಿದ್ದಲ್ಲದೆ ‘ನಿನಗೆ ಕಬ್ಬು ಕೊಡುತ್ತೇನೆ’ ಎಂದು ಹೇಳಿ ಅಲ್ಲೇ ಪಕ್ಕದ ಪೊದೆಗೆ ಕರೆದುಕೊಂಡು ಹೋಗಿ ಆತನನ್ನು ಬೆತ್ತಲೆ ಮಾಡಿ ತನ್ನ ಲೈಂಗಿಕ ತೀಟೆ ತೀರಿಸಿಕೊಂಡಿದ್ದಾನೆ.

Vijaya Karnataka Web 16 Oct 2021, 2:36 pm
ಪುತ್ತೂರು: ವಾರದ ಹಿಂದೆ ಚಿಕ್ಕೋಡಿಯಲ್ಲಿ ಯುವಕನೊಬ್ಬನ ಮೇಲೆ ಸಲಿಂಗಿ ಕಾಮಿಯೊಬ್ಬ ಅತ್ಯಾಚಾರ ಎಸಗಿದ ಪ್ರಕರಣ ಮಾಸುವ ಮುನ್ನವೇ ಇದೀಗ ಪುತ್ತೂರಿನಲ್ಲೊಬ್ಬ ಸಲಿಂಗಿ ಕಾಮಿ ಎಂಡೋಸಲ್ಫಾನ್ ಬಾಧಿತ ವಿಕಲಚೇತನ ತರುಣನ ಮೇಲೆ ಅತ್ಯಾಚಾರ ಎಸಗಿದ ಹೇಯ ಕೃತ್ಯ ನಡೆದಿದೆ.
Vijaya Karnataka Web police


ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಸ್ಥಳೀಯ ಕುಟುಂಬವೊಂದರ ಎಂಡೋಸಲ್ಫಾನ್ ಬಾಧಿತ ಇಪ್ಪತ್ತು ವರ್ಷದ ತರುಣ ಶುಕ್ರವಾರ ಮುಸ್ಸಂಜೆಯ ವೇಳೆ ವಾಕಿಂಗ್‌ಗೆ ಹೋಗಿದ್ದಾಗ ತರುಣನ ಮನೆಯ ಸಮೀಪದ ವ್ಯಕ್ತಿ ಮಹಮ್ಮದ್ ಹನೀಫ್‌ ಎಂಬ ಕಾಮುಕ, ಆತನ ಜೊತೆ ಮಾತನಾಡಿದ್ದಲ್ಲದೆ ‘ನಿನಗೆ ಕಬ್ಬು ಕೊಡುತ್ತೇನೆ’ ಎಂದು ಹೇಳಿ ಅಲ್ಲೇ ಪಕ್ಕದ ಪೊದೆಗೆ ಕರೆದುಕೊಂಡು ಹೋಗಿ ಆತನನ್ನು ಬೆತ್ತಲೆ ಮಾಡಿ ತನ್ನ ಲೈಂಗಿಕ ತೀಟೆ ತೀರಿಸಿಕೊಂಡಿದ್ದಾನೆ.
ಶಾಕಿಂಗ್ ನ್ಯೂಸ್‌; ಬಂಟ್ವಾಳದಲ್ಲಿ ಅಪ್ರಾಪ್ತ ಬಾಲಕಿಯನ್ನು ಕಿಡ್ನ್ಯಾಪ್‌ ಮಾಡಿ ಗ್ಯಾಂಗ್‌ರೇಪ್‌! ದೂರು ದಾಖಲು
ಕಾಮುಕ ಮಹಮ್ಮದ್ ಹನೀಫ್ ವಿಶೇಷಚೇತನ ತರುಣನ ಮೇಲೆ ಅತ್ಯಾಚಾರ ಎಸಗಿದ ಬಳಿಕ ಆತನಿಗೆ ಜೀವ ಬೆದರಿಕೆ ಹಾಕಿದ್ದು, ಈ ವಿಷಯ ಯಾರಲ್ಲಾದರೂ ತಿಳಿಸಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಒಡ್ಡಿದ್ದಾನೆ. ಮನೆಗೆ ಬಂದ ತರುಣನ ಉಡುಪಿನಲ್ಲಿ ಕೊಳೆಯಾಗಿರುವುದನ್ನು ಕಂಡು ಮನೆಯವರು ವಿಚಾರಿಸಿದಾಗ ಆತ ನಡೆದ ಘಟನೆಯನ್ನು ವಿವರಿಸಿದ್ದಾನೆ. ‘ಮಹಮ್ಮದ್ ಹನೀಫ್‌ನ ಕೈಯಿಂದ ನಾನು ಕೊಸರಾಡಿ ತಪ್ಪಿಸಿಕೊಂಡು ಬಂದಿದ್ದೇನೆ’ ಎಂದು ಸಂತ್ರಸ್ತ ತರುಣ ತಿಳಿಸಿರುವುದಾಗಿ ಆತನ ತಂದೆ ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಘಟನೆ ಸಂಬಂಧ ಪುತ್ತೂರು ನಗರ ಠಾಣೆಯಲ್ಲಿ ಆರೋಪಿ, ಸಲಿಂಗ ಕಾಮುಕ ಮಹಮ್ಮದ್ ಹನೀಪ್ ವಿರುದ್ಧ ದೂರು ದಾಖಲಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ವಿಜಯಪುರ: ಆಟವಾಡುತ್ತಿದ್ದ ಪುಟ್ಟ ಬಾಲಕಿ ಮೇಲೆ 59 ವರ್ಷದ ಮುದಿ ಕಾಮುಕನಿಂದ ಲೈಂಗಿಕ ದೌರ್ಜನ್ಯ!
ಅಥಣಿಯಲ್ಲೂ ನಡೆದಿತ್ತು ಇಂತಹದ್ದೇ ಘಟನೆ!ರಾಜ್ಯದಲ್ಲಿ ಇತ್ತೀಚೆಗೆ ಅತ್ಯಾಚಾರ ಪ್ರಕರಣ ಸಂಖ್ಯೆ ದಿನನಿತ್ಯ ಏರಿಕೆಯಾಗುತ್ತಿದ್ದು, ಕಾಮುಕರು ಅಲ್ಲಲ್ಲಿ ತಮ್ಮ ಅಟ್ಟಹಾಸ ಮೆರೆಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅಥಣಿಯಲ್ಲಿ ಕೂಡ ಯುವಕನೊಬ್ಬನ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿತ್ತು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಯುವಕನನ್ನು ಪುಸಲಾಯಿಸಿ ತನ್ನ ಬೈಕ್‌ನಲ್ಲಿ ಕುಳ್ಳಿರಿಸಿದ ಕಾಮುಕನೊಬ್ಬ ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಬಳಿಕ ಜೀವ ಬೆದರಿಕೆ ಹಾಕಿದ್ದಾನೆ ಎಂದು ನೊಂದ ಯುವಕ ಅಥಣಿ ಪೊಲೀಸರಿಗೆ ದೂರು ನೀಡಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ