ಆ್ಯಪ್ನಗರ

ಅಬ್ದುಲ್‌ ಕಲಾಂ ನಮ್ಮ ಪಾಲಿನ ದ್ವಿತೀಯ ಮಹಾತ್ಮ

: ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರವನ್ನು ದೊರಕಿಸಿಕೊಡುವಲ್ಲಿ ಶ್ರಮಿಸಿದ ಮಹಾತ್ಮ ಗಾಂಧಿಯನ್ನು ನಾವೆಲ್ಲಾ ನೋಡದಿರಬಹುದು. ಆದರೆ ಕ್ಷಿಪಣಿ ಮನುಷ್ಯನೆಂದು ಗುರುತಿಸಲ್ಪಟ್ಟ ದೇಶದ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರು ನಮ್ಮ ಪಾಲಿನ ದ್ವಿತೀಯ ಮಹಾತ್ಮ ಎಂದು ಸಂತ ಅಲೋಶಿಯಸ್‌ ಕಾಲೇಜಿನ ಭೌತಶಾಸ್ತ್ರದ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಚಂದ್ರಶೇಖರ ಶೆಟ್ಟಿ ಟಿ. ಹೇಳಿದರು.

Vijaya Karnataka 28 Jul 2019, 3:31 pm
ಮಂಗಳೂರು: ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರವನ್ನು ದೊರಕಿಸಿಕೊಡುವಲ್ಲಿ ಶ್ರಮಿಸಿದ ಮಹಾತ್ಮ ಗಾಂಧಿಯನ್ನು ನಾವೆಲ್ಲಾ ನೋಡದಿರಬಹುದು. ಆದರೆ ಕ್ಷಿಪಣಿ ಮನುಷ್ಯನೆಂದು ಗುರುತಿಸಲ್ಪಟ್ಟ ದೇಶದ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರು ನಮ್ಮ ಪಾಲಿನ ದ್ವಿತೀಯ ಮಹಾತ್ಮ ಎಂದು ಸಂತ ಅಲೋಶಿಯಸ್‌ ಕಾಲೇಜಿನ ಭೌತಶಾಸ್ತ್ರದ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಚಂದ್ರಶೇಖರ ಶೆಟ್ಟಿ ಟಿ. ಹೇಳಿದರು.
Vijaya Karnataka Web 27M-Kalam


ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಆಶ್ರಯದಲ್ಲಿ ರಥಬೀದಿಯ ಡಾ.ಪಿ.ದಯಾನಂದ ಪೈ- ಪಿ. ಸತೀಶ್‌ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ವಿಭಾಗದ ಸಹಕಾರದಲ್ಲಿ ಶನಿವಾರ ನಡೆದ ಅಬ್ದುಲ್‌ ಕಲಾಂ ಮತ್ತು ಆಧುನಿಕ ಭಾರತ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅವರೊಬ್ಬ ಮಹಾತ್ಮ ಮಾತ್ರವಲ್ಲ, ಸರಳ ವ್ಯಕ್ತಿತ್ವದ ಆದರ್ಶ ಪುರುಷ. ಅವರು ಬಡತನದಲ್ಲಿದ್ದರೂ ಎಂದೂ ಬಡತನವನ್ನು ಶಪಿಸಲಿಲ್ಲ. ಆದರೆ ಕನಸು ಕಾಣವುದನ್ನು ಬಿಡಲಿಲ್ಲ. ಅವರು ಹೋದಲ್ಲೆಲ್ಲ ವಿದ್ಯಾರ್ಥಿಗಳಿಗೂ ಕನಸು ಕಾಣಲು ಪ್ರೇರೇಪಿಸುತ್ತಿದ್ದರು. ಭಾರತ ರತ್ನ ಪ್ರಶಸ್ತಿಯೊಂದಿಗೆ 48 ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್‌ ಪಡೆದ ಮೇಧಾವಿ ಅಬ್ದುಲ್‌ ಕಲಾಂ. ಅವರು ತೋರಿಸಿದ ಮಾರ್ಗದಲ್ಲಿ ಇಂದಿನ ಯುವ ವಿದ್ಯಾರ್ಥಿ ವಿಜ್ಞಾನಿಗಳು ಸಾಗಬೇಕು ಎಂದು ಪ್ರೊ.ಚಂದ್ರಶೇಖರ್‌ ಸಲಹೆ ನೀಡಿದರು.

ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ರೊಯ್‌ ಕ್ಯಾಸ್ತಲಿನೊ ಮಾತನಾಡಿ, ಭಾರತ ಇಂದು ಅಮೆರಿಕ ಹಾಗೂ ಚೀನಾಕ್ಕೆ ಸಮಾನವಾಗಿ ಬೆಳೆಯುವಲ್ಲಿ ವಿಜ್ಞಾನಿಗಳ ಪಾತ್ರ ಮಹತ್ತರವಾದುದು. ಅಂತಹ ಸಂದರ್ಭ ಡಾ.ಅಬ್ದುಲ್‌ ಕಲಾಂರ ಆದರ್ಶಗಳನ್ನು ಪಾಲಿಸಿಕೊಂಡು ಇಂದಿನ ಯುವ ವಿದ್ಯಾರ್ಥಿಗಳು ಬೆಳೆಯಬೇಕಾಗಿದೆ ಎಂದರು.

ಕಾಲೇಜಿನ ಪ್ರಿನ್ಸಿಪಾಲ್‌ ಪ್ರೊ.ರಾಜೇಶೇಖರ್‌ ಹೆಬ್ಬಾರ್‌ ಸಿ., ಪೊ›.ಜೆಫ್ರಿ ರಾಡ್ರಿಗಸ್‌, ಉಪನ್ಯಾಸಕಿ ಡಾ.ಕೃಷ್ಣ ಪ್ರಭಾ, ರೋಶನ್‌ ಡಿಸೋಜ ಉಪಸ್ಥಿತರಿದ್ದರು. ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಸ್ಥಾಪಕ ಫ್ರ್ಯಾಂಕ್ಲಿನ್‌ ಮೊಂತೆರೋ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಸುಧಾಕರನ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ