ಆ್ಯಪ್ನಗರ

ಕುಖ್ಯಾತ ರೌಡಿ ಬಂಧನದ ವೇಳೆ ಪೊಲೀಸರ ಮೇಲೆ ದಾಳಿ: ಆತ್ಮರಕ್ಷಣೆಗೆ ಖಾಕಿ ಪಡೆ ಫೈರಿಂಗ್, ಆರೋಪಿ ಸೆರೆ

ಆರೋಪಿ ಉಮ್ಮರ್ ಫಾರೂಕ್ ಟಾರ್ಗೆಟ್ ಗ್ರೂಪ್‌ನ ದಿ.ಇಲಿಯಾಸ್‌ನ ಸಂಬಂಧಿಯಾಗಿದ್ದು, 2018 ರಲ್ಲಿ ಇಲಿಯಾಸ್ ಕೊಲೆ ಆದ ನಂತರ ಟಾರ್ಗೆಟ್ ಗ್ರೂಪನ್ನು ಮರು ಸಂಘಟನೆ ಮಾಡುವುದಕ್ಕೆ ಯತ್ನಿಸುತ್ತಿದ್ದ. ಹಾಗೂ ಇಲಿಯಾಸ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಮೀರ್ ಎಂಬಾತನನ್ನು ಕೊಲೆ ಮಾಡಲು ಉಮ್ಮರ್ ಫಾರೂಕ್ ಹಾಗೂ ಇನ್ನಿತರರು ಜತೆಗೂಡಿ ಸಂಚು ರೂಪಿಸುತ್ತಿದ್ದ. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vijaya Karnataka Web 29 May 2019, 2:20 pm
ಮಂಗಳೂರು: ಮಂಗಳೂರಿನ ಕಂಕನಾಡಿ ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರದೀಪ್ ಹಾಗೂ ಸಿಬ್ಬಂದಿ ಟಾರ್ಗೆಟ್ ಗ್ರೂಪ್‌ನ ಕುಖ್ಯಾತ ರೌಡಿ ಉಮ್ಮರ್ ಫಾರೂಕ್‌ನನ್ನು ಮಂಗಳವಾರ ತಡರಾತ್ರಿ 12.30ಕ್ಕೆ ನಗರದ ಪಚ್ಚನಾಡಿ ಸಮೀಪ ಬಂಧಿಸಲು ಹೋದ ಸಂದರ್ಭ ಆತ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದು, ಪೊಲೀಸ್ ಕಾನ್ಸ್‌ಟೆಬಲ್ ಸಂದೀಪ್‌ಗೆ ಗಾಯವಾಗಿದೆ. ಈ ಸಂದರ್ಭ ಆತ್ಮರಕ್ಷಣೆಗಾಗಿ ಎಸ್‌ಐ ಪ್ರದೀಪ್ ಉಮ್ಮರ್ ಫಾರೂಕ್‌ನ ಮೇಲೆ ಫೈರಿಂಗ್ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.
Vijaya Karnataka Web 3


ಆರೋಪಿ ಉಮ್ಮರ್ ಫಾರೂಕ್ ಟಾರ್ಗೆಟ್ ಗ್ರೂಪ್‌ನ ದಿ.ಇಲಿಯಾಸ್‌ನ ಸಂಬಂಧಿಯಾಗಿದ್ದು, 2018 ರಲ್ಲಿ ಇಲಿಯಾಸ್ ಕೊಲೆ ಆದ ನಂತರ ಟಾರ್ಗೆಟ್ ಗ್ರೂಪನ್ನು ಮರು ಸಂಘಟನೆ ಮಾಡುವುದಕ್ಕೆ ಯತ್ನಿಸುತ್ತಿದ್ದ. ಹಾಗೂ ಇಲಿಯಾಸ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಮೀರ್ ಎಂಬಾತನನ್ನು ಕೊಲೆ ಮಾಡಲು ಉಮ್ಮರ್ ಫಾರೂಕ್ ಹಾಗೂ ಇನ್ನಿತರರು ಜತೆಗೂಡಿ ಸಂಚು ರೂಪಿಸುತ್ತಿದ್ದ. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಮ್ಮರ್ ಫಾರೂಕ್ ಇತ್ತೀಚೆಗೆ ಎಂ.ಎ.ಹಸನ್ ಬಾವ ಎಂಬವರಿಂದ ಬಲವಂತವಾಗಿ ಹಣ ವಸೂಲಿ ಮಾಡಿರುವ ಬಗ್ಗೆಯೂ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಾಕಿ ಪಡೆ ಫೈರಿಂಗ್


ಈ ಎರಡೂ ಪ್ರಕರಣಗಳ ರೂವಾರಿಯಾದ ಉಮ್ಮರ್ ಫಾರೂಕ್‌ನನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ದಾಳಿ ಮಾಡಿದ್ದಾನೆ. ಉಮ್ಮರ್ ಫಾರೂಕ್ ಮೇಲೆ ಈ ಹಿಂದೆ 9 ಪ್ರಕರಣಗಳು ದಾಖಲಾಗಿದ್ದು, ಕುಖ್ಯಾತ ರೌಡಿಯಾಗಿ ಟಾರ್ಗೆಟ್ ಗ್ರೂಪ್‌ನಲ್ಲಿ ಗುರುತಿಸಿಕೊಂಡು ಜನರಿಗೆ ಹೆದರಿಸುವುದು, ಸುಲಿಗೆ ಮಾಡುವುದು ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿದ್ದ.

ಪೊಲೀಸರ ಮೇಲೆ ದಾಳಿ ನಡೆಸಿದ ಸಂದರ್ಭ ಎಸ್‌ಐ ಪ್ರದೀಪ್ ತನ್ನ ರಿವಾಲ್ವರ್‌ನಿಂದ ಫೈರಿಂಗ್ ಮಾಡಿದ್ದು, ಆರೋಪಿಯ ಮೊಣಕಾಲಿಗೆ ಗುಂಡು ತಗುಲಿದೆ. ಬಳಿಕ ಆತನನ್ನು ವಶಕ್ಕೆ ಪಡೆದ ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್, ಡಿಸಿಪಿ ಹನುಮಂತರಾಯ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ಪೊಲೀಸರಿಂದ ಪರಿಶೀಲನೆ


ತಿಂಗಳಲ್ಲಿ ಎರಡನೇ ಪ್ರಕರಣ
ಆರೋಪಿ ಬಂಧನ ವೇಳೆ ಪೊಲೀಸರ ಮೇಲೆ ದಾಳಿ ನಡೆಸಿದಾಗ ಪೊಲೀಸರು ಫೈರಿಂಗ್ ನಡೆಸಿ ಆರೋಪಿಯನ್ನು ಬಂಧಿಸಿದ ಎರಡನೇ ಪ್ರಕರಣ ಈ ತಿಂಗಳಲ್ಲಿ ನಡೆದಿದೆ.
ಜಪ್ಪಿನಮೊಗರು ಬಳಿ ಮೇ 9ರಂದು ತಡರಾತ್ರಿ ಕಂಕನಾಡಿ ಕುಂಟಾಲಗುಡ್ಡೆ ಬಜಾಲ್ ನಿವಾಸಿ ನಟೋರಿಯಸ್ ರೌಡಿ ಗೌರೀಶ್ ಯಾನೆ ಸುಜಿತ್ ಯಾನೆ ಗೌರಿ (29) ಎಂಬಾತನನ್ನು ಬಂಧಿಸಲು ಪೊಲೀಸರು ದಾಳಿ ನಡೆಸಿದ್ದ ಸಂದರ್ಭ ಆತ ಮಾರಕಾಸ್ತ್ರದಿಂದ ಪೊಲೀಸರ ಮೇಲೆ ದಾಳಿ ನಡೆಸಿದ್ದ. ಇದರಲ್ಲಿ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಶೀನಪ್ಪ ಎಂಬವರು ಗಾಯಗೊಂಡಿದ್ದರು. ಈ ಸಂದರ್ಭ ಸಿಸಿಬಿ ಎಸ್‌ಐ ಕಬ್ಬಳ್‌ರಾಜ್ ರೌಡಿಶೀಟರ್ ಗೌರೀಶ್ ಕಾಲಿಗೆ ಶೂಟ್ ಮಾಡಿದ್ದಾರೆ. ಇದರಿಂದ ರೌಡಿ ತಪ್ಪಿಸಿಕೊಳ್ಳಲಾಗದೆ ಶರಣಾಗಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ