ಆ್ಯಪ್ನಗರ

ಎಸಿಪಿ, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳ ವರ್ಗ

ರಾಜ್ಯದ ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ ಮಾಡಿರುವ ರಾಜ್ಯ ಸರಕಾರ ಹಲವು ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

Vijaya Karnataka 18 Jul 2019, 5:00 am
ಮಂಗಳೂರು: ರಾಜ್ಯದ ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ ಮಾಡಿರುವ ರಾಜ್ಯ ಸರಕಾರ ಹಲವು ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
Vijaya Karnataka Web acp police inspector transferred
ಎಸಿಪಿ, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳ ವರ್ಗ


ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ ದಕ್ಷಿಣ ಉಪ ವಿಭಾಗದ ಎಸಿಪಿ ರಾಮರಾವ್‌ ಕೆ. ಅವರನ್ನು ಬಳ್ಳಾರಿ ನಗರ ಉಪವಿಭಾಗಕ್ಕೆ ಹಾಗೂ ಕೋದಂಡರಾಮ ಎಸಿಬಿಯಿಂದ ಮಂಗಳೂರು ನಗರ ದಕ್ಷಿಣ ಉಪವಿಭಾಗಕ್ಕೆ ವರ್ಗಾವಣೆಯಾಗಿದ್ದಾರೆ.

ಇನ್‌ಸ್ಪೆಕ್ಟರ್‌ಗಳ ವರ್ಗ: ಲೋಕೇಶ್‌ ಎ.ಸಿ. ಕೆಎಲ್‌ಎನಿಂದ ಪಾಂಡೇಶ್ವರ ಪೊಲೀಸ್‌ ಠಾಣೆಗೆ, ಗೋಪಾಲಕೃಷ್ಣ ಭಟ್‌ ಬಿ. ಎಎನ್‌ಎಫ್‌ನಿಂದ ಮಂಗಳೂರು ಪೂರ್ವ ಸಂಚಾರ (ಕದ್ರಿ ಸಂಚಾರಿ), ಶಾಂತರಾಮ್‌ ಡಿಸಿಆರ್‌ಇನಿಂದ ಮಂಗಳೂರು ಕದ್ರಿ ಠಾಣೆಗೆ, ಮಾರುತಿ ಗಣಪತಿ ನಾಯಕ್‌ ಕದ್ರಿ ಠಾಣೆಯಿಂದ ಸಿಸಿಆರ್‌ಬಿ ಮಂಗಳೂರು ನಗರ, ಮೋಹನ್‌ ಕೊಟ್ಟಾರಿ ಮಂಗಳೂರು ನಗರ ಸಿಟಿ ಎಸ್‌ಬಿಯಿಂದ ಮಂಗಳೂರು ಉತ್ತರ ಸಂಚಾರ, ಅಜ್ಮತ್‌ ಆಲಿ ಡಿಸಿಆರ್‌ಇ ಮಂಗಳೂರಿನಿಂದ ಪಣಂಬೂರು ಪೊಲೀಸ್‌ ಠಾಣೆ, ರಾಘವ ಪಡೀಲ್‌ ಸಿಎಸ್‌ಪಿಯಿಂದ ಕಾವೂರು ಠಾಣೆಗೆ ವರ್ಗಾವಣೆಯಾಗಿದ್ದಾರೆ. ಸಂಬಂಧಪಟ್ಟ ಘಟಕಾಧಿಕಾರಿಗಳು ಮೇಲ್ಕಂಡ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಹಾಗೂ ಯಾವುದೇ ಸೇರುವಿಕೆ ಕಾಲವನ್ನು ಉಪಯೋಗಿಸಿಕೊಳ್ಳದೆ ವರ್ಗಾಯಿಸಲಾದ ಸ್ಥಳದ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಿ ವರದಿ ಸಲ್ಲಿಸಲು ಆದೇಶದಲ್ಲಿ ತಿಳಿಸಲಾಗಿದೆ. ಜು.12ರಂದೇ ಈ ವರ್ಗಾವಣೆ ಆದೇಶ ಹೊರಡಿಸಲಾಗಿದ್ದರೂ ಅಂದೇ ರಾತ್ರಿ ಇದಕ್ಕೆ ತಡೆ ನೀಡಲಾಗಿತ್ತು. ಇದೀಗ ತಡೆ ತೆರವುಗೊಳಿಸಿ, ಮರು ವರ್ಗಾವಣೆ ಆದೇಶ ಹೊರಡಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ