ಮಂಗಳೂರು: ಪ್ರಕಾಶ್ ರೈ ನನ್ನ ನಿಜವಾದ ಹೆಸರು. ಪ್ರಕಾಶ್ರಾಜ್ ನನ್ನ ಸಿನಿಮಾದ ಹೆಸರು. ರಜನಿಕಾಂತ್ ಅವರ ನಿಜವಾದ ಹೆಸರು ಶಿವಾಜಿರಾವ್ ಗಾಯಕ್ವಾಡ್, ನಟ ಸಾರ್ವಭೌಮ ಡಾ. ರಾಜ್ಕುಮಾರ್ ಅವರ ನಿಜವಾದ ಹೆಸರು ಮುತ್ತುರಾಜ್, ವಿಷ್ಣುವರ್ಧನ್ ಅವರ ನಿಜವಾದ ಹೆಸರು ಕುಮಾರ್, ಇದೆಲ್ಲ ಕಾಮನ್ಸೆನ್ಸ್ ಎಂದರು.
ಜಿಲ್ಲಾಡಳಿತ ವತಿಯಿಂದ ನಗರದ ಕರಾವಳಿ ಉತ್ಸವ ಮೈದಾನದಲ್ಲಿಡಿ.31ರ ವರೆಗೆ ನಡೆಯಲಿರುವ ಕರಾವಳಿ ಉತ್ಸವವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸದ ಪ್ರತಾಪ್ ಸಿಂಹ ಅವರಿಗೆ ನನ್ನ ಹೆಸರಿನ ಬಗ್ಗೆ ಸಂದೇಹವಿದೆ. ನನ್ನ ಹೆಸರು ಪ್ರಕಾಶ್ ರೈಯೇ ಅಥವಾ ಪ್ರಕಾಶ್ರಾಜ್ ಎಂದೇ ಅವರು ಪ್ರಶ್ನಿಸಿದ್ದಾರೆ. ಸಂಸದರ ಹೆಸರಿನ ಮುಂದೆ ಸಿಂಹ ಇದೆ. ಹಾಗಾದರೆ ಅವರು ಮನುಷ್ಯರೇ ಅಥವಾ ಪ್ರಾಣಿಯೇ? ಎಂದು ಪ್ರಕಾಶ್ ರೈ ಖಾರವಾಗಿ ಪ್ರತಿಕ್ರಿಯಿಸಿದರು.
ನಾನು ಸಾಲೆತ್ತೂರಿನ ಮಂಜುನಾಥ ರೈ ಅವರ ಮಗ. ನನ್ನ ತಾಯಿ ಗದಗದವರು ಎಂದು ವಿವರ ನೀಡಿದ ಪ್ರಕಾಶ್ ರೈ, ನನ್ನ ಹೆಸರಿನ ಬಗ್ಗೆ ನಿಮಗೇನು ಸಮಸ್ಯೆ ಎಂದು ಪ್ರಶ್ನಿಸಿದರು.
ಪ್ರತಾಪ್ ಸಿಂಹ ಹೆಸರಿಟ್ಟುಕೊಂಡ ನೀವು ಮಾತನಾಡುವುದೇ ಅಥವಾ ಘರ್ಜಿಸುವುದೇ? ನಮ್ಮ ಹಾಗೆ ಉತ್ತು ಬಿತ್ತು ಬೆಳೆಸಿದ ದವಸಧಾನ್ಯ ತಿನ್ನುವುದೇ ಅಥವಾ ಬೇಟೆಯಾಡುವುದೇ ಎಂದು ಪ್ರಶ್ನಿಸಿದರು. ಆದರೆ ನನಗೆ ನಿಮ್ಮ ರೀತಿಯ ಭಾಷೆ ಬೇಕಾಗಿಲ್ಲ ಎಂದರು.
ಎಷ್ಟೇ ಎತ್ತರಕ್ಕೆ ಬೆಳೆದರೂ ನಾನು ಕರಾವಳಿಯ ಕೂಸು. ಕನ್ನಡ ನಾಡಿನ ಕೂಸು. ನನ್ನ ಭಾಷೆ, ನನ್ನ ನಾಡು, ನನ್ನ ರಂಗಭೂಮಿ, ನನ್ನ ಸಾಹಿತ್ಯ ನನ್ನನ್ನು ಅಷ್ಟು ಎತ್ತರಕ್ಕೇರಿಸಿದೆ. ನನಗೆ ನಿಮ್ಮ ತರಹ ಅವಾಚ್ಯ ಭಾಷೆ ಗೊತ್ತಿಲ್ಲ. ರೈತರ ನೋವಿನ ಭಾಷೆ, ನಿರುದ್ಯೋಗಿ ಯುವಕ ಯುವತಿಯರ ನೋವಿನ ಭಾಷೆ ನಿಮಗೆ ಗೊತ್ತಿಲ್ಲ ಎಂದು ಅವರು ಕಿಡಿ ಕಾರಿದರು.
ಜಿಲ್ಲಾಡಳಿತ ವತಿಯಿಂದ ನಗರದ ಕರಾವಳಿ ಉತ್ಸವ ಮೈದಾನದಲ್ಲಿಡಿ.31ರ ವರೆಗೆ ನಡೆಯಲಿರುವ ಕರಾವಳಿ ಉತ್ಸವವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸದ ಪ್ರತಾಪ್ ಸಿಂಹ ಅವರಿಗೆ ನನ್ನ ಹೆಸರಿನ ಬಗ್ಗೆ ಸಂದೇಹವಿದೆ. ನನ್ನ ಹೆಸರು ಪ್ರಕಾಶ್ ರೈಯೇ ಅಥವಾ ಪ್ರಕಾಶ್ರಾಜ್ ಎಂದೇ ಅವರು ಪ್ರಶ್ನಿಸಿದ್ದಾರೆ. ಸಂಸದರ ಹೆಸರಿನ ಮುಂದೆ ಸಿಂಹ ಇದೆ. ಹಾಗಾದರೆ ಅವರು ಮನುಷ್ಯರೇ ಅಥವಾ ಪ್ರಾಣಿಯೇ? ಎಂದು ಪ್ರಕಾಶ್ ರೈ ಖಾರವಾಗಿ ಪ್ರತಿಕ್ರಿಯಿಸಿದರು.
ನಾನು ಸಾಲೆತ್ತೂರಿನ ಮಂಜುನಾಥ ರೈ ಅವರ ಮಗ. ನನ್ನ ತಾಯಿ ಗದಗದವರು ಎಂದು ವಿವರ ನೀಡಿದ ಪ್ರಕಾಶ್ ರೈ, ನನ್ನ ಹೆಸರಿನ ಬಗ್ಗೆ ನಿಮಗೇನು ಸಮಸ್ಯೆ ಎಂದು ಪ್ರಶ್ನಿಸಿದರು.
ಪ್ರತಾಪ್ ಸಿಂಹ ಹೆಸರಿಟ್ಟುಕೊಂಡ ನೀವು ಮಾತನಾಡುವುದೇ ಅಥವಾ ಘರ್ಜಿಸುವುದೇ? ನಮ್ಮ ಹಾಗೆ ಉತ್ತು ಬಿತ್ತು ಬೆಳೆಸಿದ ದವಸಧಾನ್ಯ ತಿನ್ನುವುದೇ ಅಥವಾ ಬೇಟೆಯಾಡುವುದೇ ಎಂದು ಪ್ರಶ್ನಿಸಿದರು. ಆದರೆ ನನಗೆ ನಿಮ್ಮ ರೀತಿಯ ಭಾಷೆ ಬೇಕಾಗಿಲ್ಲ ಎಂದರು.
ಎಷ್ಟೇ ಎತ್ತರಕ್ಕೆ ಬೆಳೆದರೂ ನಾನು ಕರಾವಳಿಯ ಕೂಸು. ಕನ್ನಡ ನಾಡಿನ ಕೂಸು. ನನ್ನ ಭಾಷೆ, ನನ್ನ ನಾಡು, ನನ್ನ ರಂಗಭೂಮಿ, ನನ್ನ ಸಾಹಿತ್ಯ ನನ್ನನ್ನು ಅಷ್ಟು ಎತ್ತರಕ್ಕೇರಿಸಿದೆ. ನನಗೆ ನಿಮ್ಮ ತರಹ ಅವಾಚ್ಯ ಭಾಷೆ ಗೊತ್ತಿಲ್ಲ. ರೈತರ ನೋವಿನ ಭಾಷೆ, ನಿರುದ್ಯೋಗಿ ಯುವಕ ಯುವತಿಯರ ನೋವಿನ ಭಾಷೆ ನಿಮಗೆ ಗೊತ್ತಿಲ್ಲ ಎಂದು ಅವರು ಕಿಡಿ ಕಾರಿದರು.