ಮಂಗಳೂರು : ಮಂಗಳೂರಿನಲ್ಲಿ ಮಂಗಳವಾರ ಮಳೆ ಸ್ವಲ್ಪ ಪ್ರಮಾಣದಲ್ಲಿ ಇಳಿಮುಖವಾಗಿದ್ದು, ನಗರದ ಅಲೋಶಿಯಸ್ ಕಾಲೇಜು ಬಳಿ ಮನೆಯೊಂದರ ಆವರಣಗೋಡೆ ಕುಸಿದು ಬಿದ್ದಿದೆ. ಬಜಪೆ ಸಮೀಪದ ಆದ್ಯಪಾಡಿ ಬಳಿ ಗುಡ್ಡ ರಸ್ತೆಗೆ ಜರಿದು ಬಿದ್ದಿದೆ.
ಅಲೋಶಿಯಸ್ ಕಾಲೇಜು ಈಜು ಕೊಳದ ಬಳಿಯ ಸಾರ್ವಜನಿಕರು ನಡೆದಾಡುವ ದಾರಿಗೆ ತಾಗಿಕೊಂಡಂತಿದ್ದ ಮನೆಯ ಆವರಣ ಗೋಡೆ ಮಂಗಳವಾರ ಬೆಳಗ್ಗೆ ಸುಮಾರು 10 ಗಂಟೆ ವೇಳೆಗೆ ಜರಿದು ಬಿದ್ದಿದೆ.
ಕರಂಗಲಪಾಡಿ ಕಡೆಯಿಂದ ನಡೆದುಕೊಂಡು ಬರುವ ಕಾಂಕ್ರೀಟ್ ಮೆಟ್ಟಿಲುಗಳನ್ನು ಹೊಂದಿರುವ ಒಳಹಾದಿ ಇದಾಗಿದೆ. ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಇದೇ ದಾರಿಯನ್ನು ಉಪಯೋಗಿಸುತ್ತಿದ್ದರು. ಆವರಣ ಗೋಡೆ ಜರಿದು ಬಿದ್ದ ಕಡೆ ಮೇಲ್ಭಾಗದಲ್ಲಿ ಕಾಲೇಜಿನ ಈಜುಕೊಳವಿದೆ. ಘಟನೆಯಲ್ಲಿ ಕಾಂಕ್ರೀಟ್ ಹಾದಿಯ ಅಡಿಭಾಗದ ಮಣ್ಣು ಕೂಡ ಜರಿದು ಬಿದ್ದಿದೆ. ಸಾರ್ವಜನಿಕರು ಸಂಚರಿಸುವುದು ಅಪಾಯಕಾರಿಯಾಗಿದೆ. ಮನೆಗೆ ಯಾವುದೇ ಹಾನಿಯುಂಟಾಗಿಲ್ಲ. ಮಿನಿ ವಿಧಾನಸಭೆ ಬಳಿ ಮರವೊಂದು ಉರುಳಿಬಿದ್ದಿದೆ.
ಪಾಲಿಕೆ ಎಂಜಿನಿಯರ್ಗಳಾದ ರಘುಪಾಲ್ ಮತ್ತು ವಿಶಾಲ್ನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಣ್ಣ ಜರಿದ ಜಾಗದಲ್ಲಿ ಮರಳು ತುಂಬಿದ ಚೀಲವನ್ನು ಇಡುವಂತೆ ಸೂಚಿಸಿದ್ದಾರೆ. ಸುಮಾರು 2 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಜಪೆಗೆ ಹೋಗುವ ದಾರಿಯಲ್ಲಿ ಅದ್ಯಪಾಡಿ ಬಳಿ ಗುಡ್ಡ ಕುಸಿದು ಬಿದ್ದಿದೆ. ಪಡು ಎಂಬಲ್ಲಿ ಕೂಡ ಮನೆಯೊಂದರ ಸಮೀಪ ಗುಡ್ಡ ಕುಸಿದು ಬಿದ್ದಿದೆ.
ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ರಿಂದ ಮಂಗಳವಾರ ಬೆಳಗ್ಗೆ 8.30ರ ವರಗೆ ಸರಾಸರಿ 85.6 ಮಿಮೀ. ಮಳೆಯಾಗಿದೆ. ಜಿಲ್ಲೆಯ ವಂಗಳೂರು ತಾಲೂಕಿನಲ್ಲಿ 106.7ಮಿಮೀ. ಮಳೆಯಾಗಿದೆ.
ಅಲೋಶಿಯಸ್ ಕಾಲೇಜು ಈಜು ಕೊಳದ ಬಳಿಯ ಸಾರ್ವಜನಿಕರು ನಡೆದಾಡುವ ದಾರಿಗೆ ತಾಗಿಕೊಂಡಂತಿದ್ದ ಮನೆಯ ಆವರಣ ಗೋಡೆ ಮಂಗಳವಾರ ಬೆಳಗ್ಗೆ ಸುಮಾರು 10 ಗಂಟೆ ವೇಳೆಗೆ ಜರಿದು ಬಿದ್ದಿದೆ.
ಕರಂಗಲಪಾಡಿ ಕಡೆಯಿಂದ ನಡೆದುಕೊಂಡು ಬರುವ ಕಾಂಕ್ರೀಟ್ ಮೆಟ್ಟಿಲುಗಳನ್ನು ಹೊಂದಿರುವ ಒಳಹಾದಿ ಇದಾಗಿದೆ. ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಇದೇ ದಾರಿಯನ್ನು ಉಪಯೋಗಿಸುತ್ತಿದ್ದರು. ಆವರಣ ಗೋಡೆ ಜರಿದು ಬಿದ್ದ ಕಡೆ ಮೇಲ್ಭಾಗದಲ್ಲಿ ಕಾಲೇಜಿನ ಈಜುಕೊಳವಿದೆ. ಘಟನೆಯಲ್ಲಿ ಕಾಂಕ್ರೀಟ್ ಹಾದಿಯ ಅಡಿಭಾಗದ ಮಣ್ಣು ಕೂಡ ಜರಿದು ಬಿದ್ದಿದೆ. ಸಾರ್ವಜನಿಕರು ಸಂಚರಿಸುವುದು ಅಪಾಯಕಾರಿಯಾಗಿದೆ. ಮನೆಗೆ ಯಾವುದೇ ಹಾನಿಯುಂಟಾಗಿಲ್ಲ. ಮಿನಿ ವಿಧಾನಸಭೆ ಬಳಿ ಮರವೊಂದು ಉರುಳಿಬಿದ್ದಿದೆ.
ಪಾಲಿಕೆ ಎಂಜಿನಿಯರ್ಗಳಾದ ರಘುಪಾಲ್ ಮತ್ತು ವಿಶಾಲ್ನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಣ್ಣ ಜರಿದ ಜಾಗದಲ್ಲಿ ಮರಳು ತುಂಬಿದ ಚೀಲವನ್ನು ಇಡುವಂತೆ ಸೂಚಿಸಿದ್ದಾರೆ. ಸುಮಾರು 2 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಜಪೆಗೆ ಹೋಗುವ ದಾರಿಯಲ್ಲಿ ಅದ್ಯಪಾಡಿ ಬಳಿ ಗುಡ್ಡ ಕುಸಿದು ಬಿದ್ದಿದೆ. ಪಡು ಎಂಬಲ್ಲಿ ಕೂಡ ಮನೆಯೊಂದರ ಸಮೀಪ ಗುಡ್ಡ ಕುಸಿದು ಬಿದ್ದಿದೆ.
ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ರಿಂದ ಮಂಗಳವಾರ ಬೆಳಗ್ಗೆ 8.30ರ ವರಗೆ ಸರಾಸರಿ 85.6 ಮಿಮೀ. ಮಳೆಯಾಗಿದೆ. ಜಿಲ್ಲೆಯ ವಂಗಳೂರು ತಾಲೂಕಿನಲ್ಲಿ 106.7ಮಿಮೀ. ಮಳೆಯಾಗಿದೆ.