ಆ್ಯಪ್ನಗರ

ನಿರಂತರ ಮಳೆಯಿಂದ ಸಂಕಷ್ಟದಲ್ಲಿ ರೈತರು; ಭತ್ತ, ಅಡಕೆಗೆ ರೋಗದ ಆತಂಕ! ರಬ್ಬರ್‌ ಫಸಲಿಗೂ ತೊಂದರೆ

ಈಗ ಮಳೆ ಹಾಗೂ ಆಗಾಗ ಬಿಸಿಲಿನ ವಾತಾವರಣವಿದ್ದು, ಇದು ಕೊಳೆ ರೋಗ ಹರಡಲು ಪೂರಕವಾಗಿದೆ. ಈಗಾಗಲೇ ತೋಟಗಳಲ್ಲಿ ಕಂಡು ಬಂದಿದ್ದ ಕೊಳೆ ರೋಗ ಕಳೆದ ಕೆಲವು ದಿನಗಳ ಹಿಂದೆ ಸ್ವಲ್ಪ ಹಿಡಿತಕ್ಕೆ ಬಂದಿತ್ತು.ಆದರೆ ಈಗ ಮಳೆಯ ಪರಿಣಾಮ ಮತ್ತೆ ಕಾಯಿ ಅಡಕೆ ಉದುರತೊಡಗಿದೆ. ಮುಂದೆಯೂ ಮಳೆ ಸುರಿದರೆ ಕೊಳೆರೋಗ ವ್ಯಾಪಕವಾಗಿ ಹರಡುವ ಆತಂಕ ಉಂಟಾಗಿದೆ.

Vijaya Karnataka 10 Sep 2021, 10:07 am
ಅರವಿಂದ ಹೆಬ್ಬಾರ್‌
Vijaya Karnataka Web areca nut

ಮುಂಡಾಜೆ: ಕಳೆದೊಂದು ವಾರದಿಂದ ಬೆಳ್ತಂಗಡಿ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆ ಕೃಷಿಕರು ಹಾಗೂ ಜನಸಾಮಾನ್ಯರಲ್ಲಿ ಆತಂಕ ಹೆಚ್ಚಿಸಿದೆ.

ಈ ಬಾರಿ ಉತ್ತಮ ಬೇಸಿಗೆ ಮಳೆ ಸುರಿದ ಕಾರಣ ಏಣೇಲ್‌ ಭತ್ತದ ಗದ್ದೆಗಳ ನಾಟಿ ಕಾರ್ಯ ಜೂನ್‌ ಆರಂಭದಲ್ಲೆ ಮುಗಿದಿತ್ತು. ಇದೀಗ ಗದ್ದೆಗಳು ಹಾಲು ತೆನೆಗಳನ್ನು ಬಿಡಲು ತಯಾರಾಗಿದೆ. ಈ ಸಮಯದಲ್ಲಿ ಜೋರಾದ ಮಳೆ ಸುರಿದರೆ ಪರಾಗಸ್ಪರ್ಶ ಕ್ರಿಯೆ ಸರಿಯಾಗಿ ನಡೆಯದೆ ಫಸಲು ನಷ್ಟವಾಗುವ ಭೀತಿ ಎದುರಾಗಿದೆ. ಈಗ ಗದ್ದೆ ಕೃಷಿಗೆ ದಿನಕ್ಕೆ ಒಂದು ಸಾಮಾನ್ಯ ಮಳೆ ಸುರಿದರೆ ಉತ್ತಮ ಫಸಲು ಬರಲು ಸಹಕಾರಿಯಾಗುತ್ತದೆ. ಮಳೆ ಮಿತಿಗಿಂತ ಹೆಚ್ಚಾಗಿ ಸುರಿದರೆ ತೆನೆಗಳಲ್ಲಿ ಬಿಡುವ ಭತ್ತದ ಒಳಭಾಗದಲ್ಲಿ ಫಸಲು ಇರದೆ ಜೊಳ್ಳು ಹೆಚ್ಚುತ್ತದೆ. ಕೆಲವು ಕಡೆ ಈಗಾಗಲೇ ಭತ್ತ ಬೆಳೆಯುತ್ತ ಬಂದಿದೆ. ಇಂತಹ ಗದ್ದೆಗಳಲ್ಲಿ ಮಳೆ ವಿಪರೀತವಾದುದರಿಂದ ತೆನೆಗಳು ನೆಲಕ್ಕೆ ಉದುರಿ ನೀರು ಪಾಲಾಗುತ್ತಿದೆ. ತೆನೆಗಳು ನೆಲಕ್ಕೆ ಬಾಗಿದರೆ ಹೆಚ್ಚಿನ ಫಸಲು ನಷ್ಟ ಖಚಿತ.
ಕಣ್ಣೀರ ತರಿಸುವ ‘ಈರುಳ್ಳಿ’ಗೀಗ ಕೊಳೆ ರೋಗ; 12 ಸಾವಿರ ಹೆಕ್ಟೇರ್‌ ಪ್ರದೇಶದ ಬೆಳೆನಾಶ
ಅಡಕೆಗೂ ಆತಂಕ: ಹೆಚ್ಚಿನ ಅಡಕೆ ತೋಟಗಳಿಗೆ ಮೂರನೇ ಸರದಿಯ ಔಷಧ ಸಿಂಪಡಣೆ ಪೂರ್ಣಗೊಂಡಿದೆ. ಕೆಲವು ಕಡೆ ಪ್ರಗತಿಯಲ್ಲಿದೆ. ಬೇಸಿಗೆ ಮಳೆಯಿಂದ ಈ ಬಾರಿ ಅಡಕೆ ಫಸಲು ಹಾಗೂ ಬೆಳವಣಿಗೆಯ ಹಂತ ಉತ್ತಮವಾಗಿದೆ. ಸಾಮಾನ್ಯವಾಗಿ ಅಕ್ಟೋಬರ್‌ನಲ್ಲಿ ಅತ್ತ ಕಾಯಿಯೂ ಅಲ್ಲ, ಇತ್ತ ಹಣ್ಣೂ ಅಲ್ಲದ ಪರಿಸ್ಥಿತಿ ಅಡಕೆಯಲ್ಲಿ ಉಂಟಾಗುತ್ತದೆ. ಆದರೆ ಈ ಬಾರಿ ಈ ಸ್ಥಿತಿ ಸೆಪ್ಟೆಂಬರ್‌ನಲ್ಲೆ ಕಂಡುಬಂದಿದೆ.

ಈಗ ಮಳೆ ಹಾಗೂ ಆಗಾಗ ಬಿಸಿಲಿನ ವಾತಾವರಣವಿದ್ದು, ಇದು ಕೊಳೆ ರೋಗ ಹರಡಲು ಪೂರಕವಾಗಿದೆ. ಈಗಾಗಲೇ ತೋಟಗಳಲ್ಲಿ ಕಂಡು ಬಂದಿದ್ದ ಕೊಳೆ ರೋಗ ಕಳೆದ ಕೆಲವು ದಿನಗಳ ಹಿಂದೆ ಸ್ವಲ್ಪ ಹಿಡಿತಕ್ಕೆ ಬಂದಿತ್ತು.ಆದರೆ ಈಗ ಮಳೆಯ ಪರಿಣಾಮ ಮತ್ತೆ ಕಾಯಿ ಅಡಕೆ ಉದುರತೊಡಗಿದೆ. ಮುಂದೆಯೂ ಮಳೆ ಸುರಿದರೆ ಕೊಳೆರೋಗ ವ್ಯಾಪಕವಾಗಿ ಹರಡುವ ಆತಂಕ ಉಂಟಾಗಿದೆ. ಪ್ಲಾಸ್ಟಿಕ್‌ ಹಾಕಿ ರಬ್ಬರ್‌ ಟ್ಯಾಪಿಂಗ್‌ ಮಾಡುತ್ತಿರುವ ರಬ್ಬರ್‌ ಕೃಷಿಕರಿಗೂ ಮಳೆಯಿಂದಾಗಿ ಟ್ಯಾಪಿಂಗ್‌ ನಡೆಸಲಾಗುತ್ತಿಲ್ಲ.
ಗೌರಿ-ಗಣೇಶ ಹಬ್ಬಕ್ಕೆ ಎಲ್ಲೆಡೆ ಜೋರು ಖರೀದಿ; ಮಾರುಕಟ್ಟೆಗಳಲ್ಲಿ ಹೂ, ಹಣ್ಣು ದರದಲ್ಲಿ ಇಳಿಕೆ
ಶೀತ, ಗಂಟಲು ನೋವು, ವೈರಲ್‌ ಜ್ವರ: ಮಳೆ ಹಾಗೂ ಬಿಸಿಲಿನ ವಾತಾವರಣದಿಂದ ಅಲ್ಲಲ್ಲಿ ಶೀತ, ಗಂಟಲು ನೋವು, ವೈರಲ್‌ ಜ್ವರ ಕಂಡುಬರುತ್ತಿದೆ. ಕೊರೊನಾ ಭೀತಿಯಲ್ಲಿರುವ ಮಂದಿಗೆ ಜ್ವರ ಮೊದಲಾದ ಆರೋಗ್ಯ ಸಮಸ್ಯೆ ಮತ್ತಷ್ಟು ಆತಂಕಕ್ಕೆ ತಳ್ಳಿದೆ. ಈ ಮಳೆ ಡೆಂಗೆ, ಮಲೇರಿಯಾ ಮೊದಲಾದ ಕಾಯಿಲೆಗಳಿಗೆ ಪೂರಕ ವಾತಾವರಣ ಉಂಟು ಮಾಡಿದ್ದು ಸೊಳ್ಳೆಗಳ ಕಾಟ ಆರಂಭವಾಗಿದೆ. ಜಧಿತೆಗೆ ಗಣೇಶೋತ್ಸವ ಆಚರಿಸಲು ಸರಕಾರ ನಿಯಮಾನುಸಾರ ಅನುಮತಿ ನೀಡಿದೆ. ಇದರ ಸಿದ್ಧತೆ ಇನ್ನಿತರ ಕೆಲಸ ಕಾರ್ಯಗಳಿಗೂ ಮಳೆ ಅಡ್ಡಿಯಾಗಿದೆ.

'ಏಣೇಲ್‌ ಭತ್ತದ ಗದ್ದೆಗಳ ತೆನೆ ಬಿಡುವ ಹಂತದಲ್ಲಿ ಮಳೆ ಹೆಚ್ಚಾದರೆ ಫಸಲಿಗೆ ಮಾರಕವಾಗುತ್ತದೆ. ಈ ಸಮಯದಲ್ಲಿ ಅಡಕೆಗೆ ಕೊಳೆರೋಗ ಆರಂಭವಾದರೆ ಅದು ವೇಗವಾಗಿ ಹರಡುವುದರಿಂದ ಇನ್ನೊಮ್ಮೆ ಔಷಧ ಸಿಂಪಡಿಸಿದರೂ ನಿಯಂತ್ರಣ ಕಷ್ಟ.'
-ಮುದ್ದಣ್ಣ, ಕೃಷಿಕರು, ಕನ್ಯಾಡಿ

'ಬೆಳ್ತಂಗಡಿ ತಾಲೂಕಿನಲ್ಲಿ ಡೆಂಗೆ, ಮಲೇರಿಯಾ ಮೊದಲಾದ ರೋಗಗಳು ಹರಡದಂತೆ ಹೆಚ್ಚಿನ ಮುಂಜಾಗ್ರತೆ ವಹಿಸಲಾಗಿದೆ. ಆದರೂ ಜನರು ತಮ್ಮ ಪರಿಸರದಲ್ಲಿ ನೀರು ನಿಲ್ಲದಂತೆ ಸ್ವಚ್ಛತೆ ಕಾಪಾಡಿಕೊಂಡು ಸಹಕರಿಸಿ, ಮುನ್ನೆಚ್ಚರಿಕೆಯಿಂದ ಇರುವ ಅಗತ್ಯವಿದೆ.'
-ಡಾ.ಕಲಾಮಧು, ತಾಲೂಕು ವೈದ್ಯಾಧಿಕಾರಿ, ಬೆಳ್ತಂಗಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ