ಆ್ಯಪ್ನಗರ

ಅಖಿಲ ಭಾರತ ಅಂತರ್‌ವಿಶ್ವವಿದ್ಯಾಲಯ ಪುರುಷರ ಕ್ರಾಸ್‌ಕಂಟ್ರಿ ಕೂಟ ಸತತ ಐದನೇ ಬಾರಿ ಮಂಗಳೂರು ವಿವಿ ಚಾಂಪಿಯನ್‌

ಮೂಡುಬಿದಿರೆಯಲ್ಲಿಭಾನುವಾರ ನಡೆದ ಅಖಿಲ ಭಾರತ ಅಂತರ್‌ವಿಶ್ವವಿದ್ಯಾಲಯ ಪುರುಷರ ಕ್ರಾಸ್‌ಕಂಟ್ರಿ ಕೂಟದಲ್ಲಿಸತತ ಐದನೇ ಬಾರಿಗೆ ಮಂಗಳೂರು ವಿವಿ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿದೆ.

Vijaya Karnataka 7 Oct 2019, 5:00 am
ಮೂಡುಬಿದಿರೆ: ಮೂಡುಬಿದಿರೆಯಲ್ಲಿಭಾನುವಾರ ನಡೆದ ಅಖಿಲ ಭಾರತ ಅಂತರ್‌ವಿಶ್ವವಿದ್ಯಾಲಯ ಪುರುಷರ ಕ್ರಾಸ್‌ಕಂಟ್ರಿ ಕೂಟದಲ್ಲಿಸತತ ಐದನೇ ಬಾರಿಗೆ ಮಂಗಳೂರು ವಿವಿ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿದೆ.
Vijaya Karnataka Web 6MDBCROSS COUNTRY (1)_40


ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ಆರು ಕ್ರೀಡಾಪಟುಗಳು ಆಳ್ವಾಸ್‌ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾಗಿದ್ದಾರೆ. ಮಂಗಳೂರು ವಿವಿ ಪ್ರಥಮ ಸ್ಥಾನ ಗಳಿಸಿದರೆ, ಪಂಜಾಬಿ ವಿವಿ ಪಟಿಯಾಲ ದ್ವಿತೀಯ ಸ್ಥಾನ, ಸಾವಿತ್ರಿಬಾಯಿಪುಲೆ ಪುಣೆ ಯುನಿವರ್ಸಿಟಿ ತೃತೀಯ ಸ್ಥಾನ, ಸಂತಬಾಬಾ ಬಾಗ್‌ ಸಿಂಗ್‌ ವಿವಿ ನಾಲ್ಕನೇ ಸ್ಥಾನ ಹಾಗೂ ಮಹರ್ಷಿ ದಯಾನಂದ ವಿವಿ ಐದನೇ ಸ್ಥಾನ ಗಳಿಸಿತು.

ಚಾಂಪಿಯನ್‌ ತಂಡಕ್ಕೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 50 ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಯಿತು. ವೈಯಕ್ತಿಕ ಚಾಂಪಿಯನ್‌ಷಿಪ್‌ನಲ್ಲಿಪ್ರಥಮ ಸ್ಥಾನ ಪಡೆದ ಮಂಗಳೂರು ವಿವಿಯ ನರೇಂದ್ರ ಪ್ರತಾಪ್‌ (31.52 ನಿ.)ಗೆ 25 ಸಾವಿರ ರೂ., ದ್ವಿತೀಯ ಸ್ಥಾನ ಪಡೆದ ಪಂಜಾಬ್‌ ಯುನಿವರ್ಸಿಟಿಯ ಪಟಿಯಾಲದ ಪಿಂಟು ಕುಮಾರ್‌ ಯಾದವ್‌(32.13 ನಿ)ಗೆ 20 ಸಾವಿರ, ತೃತೀಯ ಸ್ಥಾನಿ ಮದ್ರಾಸ್‌ ವಿವಿಯ ಸತೀಶ್‌ ಕುಮಾರ್‌ ಎಸ್‌.ಎಚ್‌.(32.22 ನಿ)ಗೆ 15 ಸಾವಿರ. ನಾಲ್ಕನೇ ಸ್ಥಾನ ಪಡೆದ ಮಂಗಳೂರು ವಿವಿಯ ಅಬ್ದುಲ್‌ ಬಾರಿ(32.30 ನಿ.)ಗೆ 10 ಸಾವಿರ, ಐದನೇ ಸ್ಥಾನ ಪಡೆದ ಕುಮಾನ್‌ ವಿವಿ ನೈನಿತಾಲ್‌ನ ಮೋಹನ್‌ ಸೈನಿ(32.49 ನಿ.)ಗೆ 5 ಸಾವಿರ, ಆರನೇ ಸ್ಥಾನ ಪಡೆದ ರಾಜೀವ್‌ ಗಾಂಧಿ ವಿವಿಯ ರೋಹಿತ್‌ ಯಾದವ್‌(32.58)ಗೆ 5 ಸಾವಿರ ನಗದು ಬಹುಮಾನ ನೀಡಲಾಯಿತು. ದೇಶದ 175 ವಿಶ್ವವಿದ್ಯಾಲಯಗಳ 1500 ಕ್ರೀಡಾಪಟುಗಳು ಭಾಗವಹಿಸಿದ್ದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿವಿಜೇತರಿಗೆ ಮಂಗಳೂರು ವಿವಿ ಕುಲಪತಿ ಡಾ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ. ಜಾನಪದ ವಿವಿಯ ವಿಶ್ರಾಂತ ಕುಲಪತಿ ಡಾ.ಚಿನ್ನಪ್ಪ ಗೌಡ, ಅಂತಾರಾಷ್ಟ್ರೀಯ ಕ್ರೀಡಾಪಟು ಬಾಬು ಶೆಟ್ಟಿ, ಹಿರಿಯ ತರಬೇತುದಾರ ಹರ್ಪಾಲ್‌ ಸಿಂಗ್‌ ಮತ್ತು ಸಮಾಜ ಸೇವಕ ಪ್ರಸಾದ್‌ ರೈ ಉಪಸ್ಥಿತರಿದ್ದರು.

ಮಂಗಳೂರು ವಿವಿ ಕ್ರೀಡಾ ವಿಭಾಗದ ನಿರ್ದೇಶಕ ಡಾ.ಕಿಶೋರ್‌ ಕುಮಾರ್‌ ಸ್ವಾಗತಿಸಿದರು. ಆಳ್ವಾಸ್‌ ಕಾಲೇಜಿನ ಪ್ರಿನ್ಸಿಪಾಲ್‌ ಡಾ.ಕುರಿಯನ್‌ ವಂದಿಸಿದರು. ದೈಹಿಕ ನಿರ್ದೇಶಕ ಪ್ರವೀಣ್‌ ವಿಜೇತರ ಪಟ್ಟಿ ವಾಚಿಸಿದರು. ಉಪನ್ಯಾಸಕ ರಾಜೇಶ್‌ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ