ಆ್ಯಪ್ನಗರ

ಕಾರ್ ನಿಲ್ಲಿಸಿದ ಜಾಗ ಬಿಟ್ಟು ಡಾಂಬರ್‌ ಹಾಕಿದ ಪುಣ್ಯಾತ್ಮ! ವಿಟ್ಲದಲ್ಲಿ ನಡೆದ ಘಟನೆ ಫುಲ್ ವೈರಲ್

ಡಾಂಬರೀಕರಣ ಕಾಮಗಾರಿ ನಡೆಸುವವರು ವಾಹನ ಮಾಲೀಕರಿಗೆ ಈ ವಿಚಾರವನ್ನು ತಿಳಿಸದೇ ಕಾರಿನ ಚಕ್ರಗಳ ಹೊರ ಭಾಗದ ತನಕ ಡಾಂಬರು ಹಾಸಿದ್ದರು. ಇನ್ನೂ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಆ ಸ್ಥಳಕ್ಕೂ ಡಾಂಬರು ಹಾಕುವುದಾಗಿ ಸಂಬಂಧಿತ ಇಂಜಿನಿಯರ್‌ ತಿಳಿಸಿದ್ದಾರೆ.

Vijaya Karnataka Web 18 Mar 2021, 8:30 am
ವಿಟ್ಲ: ರಸ್ತೆಯಲ್ಲಿ ಕಾರ್‌ ಪಾರ್ಕಿಂಗ್‌ ಮಾಡಿದ ಜಾಗವನ್ನು ಬಿಟ್ಟು ಡಾಂಬರೀಕರಣ ಮಾಡಿಕೊಂಡು ಹೋಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ.
Vijaya Karnataka Web vitla road damar


ವಿಟ್ಲ ಮುಖ್ಯ ಪೇಟೆಯಲ್ಲಿ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಯಾವುದೋ ಪುಣ್ಯಾತ್ಮನೊಬ್ಬ ರಸ್ತೆ ಬದಿಯಲ್ಲಿಯೇ ತನ್ನ ಕಾರನ್ನು ನಿಲ್ಲಿಸಿ ಹೋಗಿದ್ದ. ಆದರೆ ಕಾರ್‌ಗೆ ಲಾಕ್‌ ಮಾಡಿರುವುದರಿಂದ ಅದನ್ನು ತೆರವುಗೊಳಿಸದೇ ಡಾಂಬರೀಕರಣಗೊಳಿಸಿದ ಘಟನೆ ನಡೆದಿದ್ದು, ಕುತೂಹಲದಿಂದ ವೀಕ್ಷಿಸಿ ಫೊಟೊ ಕ್ಲಿಕ್ಕಿಸಿಕೊಂಡ ಸಾರ್ವಜನಿಕರು ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿ ವೈರಲ್‌ಗೊಳಿಸಿದ್ದಾರೆ.
ಚಾಟಿಂಗ್‌ ವೇಳೆ ವಿವಸ್ತ್ರರಾಗಿಸಿ ಬಳಿಕ ಸುಲಿಗೆ ಮಾಡುತ್ತಿದ್ದ ‘ಬೆತ್ತಲೆ ಗ್ಯಾಂಗ್‌’ ಪೊಲೀಸ್‌ ಬಲೆಗೆ..!
ಮಾ.16ರಿಂದ ಡಾಂಬರೀಕರಣ ಆರಂಭಗೊಂಡಿದ್ದು, ವಿಟ್ಲ ಸರಕಾರಿ ಮಾದರಿ ಶಾಲೆಯ ಮುಂಭಾಗದಲ್ಲಿ ಹಾದು ಹೋಗುವ ವಿಟ್ಲ-ಸಾಲೆತ್ತೂರು ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕಾರು ನಿಲ್ಲಿಸಿ ಹೋದ ವ್ಯಕ್ತಿಗೂ ಇಲ್ಲಿ ಡಾಮರೀಕರಣ ನಡೆಯುತ್ತದೆ ಎಂಬ ಮಾಹಿತಿ ಇರಲಿಲ್ಲ ಎನ್ನಲಾಗಿದೆ.
ಝೊಮ್ಯಾಟೋ ಡೆಲಿವರಿ ಬಾಯ್‌ನಿಂದ ಹಲ್ಲೆ ಆರೋಪ; ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ನಾಪತ್ತೆಯಾದ ಯುವತಿ!
ಡಾಂಬರೀಕರಣ ಕಾಮಗಾರಿ ನಡೆಸುವವರು ವಾಹನ ಮಾಲೀಕರಿಗೆ ಈ ವಿಚಾರವನ್ನು ತಿಳಿಸದೇ ಕಾರಿನ ಚಕ್ರಗಳ ಹೊರ ಭಾಗದ ತನಕ ಡಾಂಬರು ಹಾಸಿದ್ದರು. ಇನ್ನೂ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಆ ಸ್ಥಳಕ್ಕೂ ಡಾಂಬರು ಹಾಕುವುದಾಗಿ ಸಂಬಂಧಿತ ಇಂಜಿನಿಯರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ