ಆ್ಯಪ್ನಗರ

ತುಳು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನ

ತಾನು ಮುಖ್ಯಮಂತ್ರಿಯಾದರೆ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವುದಾಗಿ ಹಿಂದೆ ಯಡಿಯೂರಪ್ಪ ಭರವಸೆ ನೀಡಿದ್ದರು. ಈಗ ಅವರು ಸಿಎಂ ಆಗಿದ್ದಾರೆ. ಮುಂದಿನ ಉಪಚುನಾವಣೆ ಬಳಿಕ ತಮ್ಮ ಮಾತು ಈಡೇರಿಸುತ್ತಾರೆ ಎನ್ನುವ ನಂಬಿಕೆಯಿದೆ ಎಂದು ತುಳು ಅಕಾಡೆಮಿಯ ನೂತನ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್‌ ಹೇಳಿದರು.

Vijaya Karnataka 25 Nov 2019, 5:00 am
ಮಂಗಳೂರು: ತಾನು ಮುಖ್ಯಮಂತ್ರಿಯಾದರೆ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವುದಾಗಿ ಹಿಂದೆ ಯಡಿಯೂರಪ್ಪ ಭರವಸೆ ನೀಡಿದ್ದರು. ಈಗ ಅವರು ಸಿಎಂ ಆಗಿದ್ದಾರೆ. ಮುಂದಿನ ಉಪಚುನಾವಣೆ ಬಳಿಕ ತಮ್ಮ ಮಾತು ಈಡೇರಿಸುತ್ತಾರೆ ಎನ್ನುವ ನಂಬಿಕೆಯಿದೆ ಎಂದು ತುಳು ಅಕಾಡೆಮಿಯ ನೂತನ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್‌ ಹೇಳಿದರು.
Vijaya Karnataka Web attempts to add tulu to the eighth shedule
ತುಳು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನ


ನಗರದ ತುಳುಭವನದಲ್ಲಿಭಾನುವಾರ ಅಕಾಡೆಮಿಯ ಸದಸ್ಯರೊಂದಿಗೆ ಅಧಿಕಾರ ಸ್ವೀಕಾರ ಮಾಡಿಮಾತನಾಡಿದರು.

ಪ್ರಸ್ತುತ ಕೇಂದ್ರದಲ್ಲೂ, ರಾಜ್ಯದಲ್ಲೂಒಂದೇ ಪಕ್ಷದ ಸರಕಾರ ಇರುವುದರಿಂದ ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸುವುದು ಇನ್ನಷ್ಟು ಸುಲಭವಾಗಿದೆ. ಈ ನಿಟ್ಟಿನಲ್ಲಿಅಕಾಡೆಮಿ ಅಧ್ಯಕ್ಷನಾಗಿ ತಾನೂ ಪ್ರಯತ್ನ ನಡೆಸುತ್ತೇನೆ. ಲಿಪಿ, ಕ್ಯಾಲೆಂಡರ್‌ ಎರಡೂ ಇರುವ ತುಳು ಭಾಷೆಗೆ ಈ ಸ್ಥಾನಮಾನ ಸಿಗುವುದು ಅರ್ಹವೇ ಆಗಿದೆ ಎಂದರು.

ರಾಜ್ಯದ ಎಲ್ಲಶಾಸಕರ ಅನುಮೋದನೆ ಪಡೆದು ತುಳು ಭಾಷೆಯನ್ನು ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡಿ, ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿಜಿಲ್ಲೆಯ ಶಾಸಕರು ಶ್ರಮಿಸಬೇಕು ಎಂದು ಕತ್ತಲ್‌ಸಾರ್‌ ಹೇಳಿದರು.

ರಾಷ್ಟಾ್ರದ್ಯಂತ ಜನಗಣತಿ ಆರಂಭವಾಗಲಿದೆ. ಈ ಸಂದರ್ಭ ತುಳುನಾಡಿನ ಎಲ್ಲವರ್ಗ, ಧರ್ಮಗಳ ಜನತೆ ತಮ್ಮ ವ್ಯಾವಹಾರಿಕ ಭಾಷೆ 'ತುಳು' ಎಂಬುದಾಗಿ ನಮೂದಿಸುವಂತೆ ಅವರು ಮನವಿ ಮಾಡಿದರು. ತುಳು ಭವನದ ಉಳಿದ ಕಾಮಗಾರಿಗಳನ್ನು ಅತಿ ಬೇಗನೆ ಪೂರ್ಣಗೊಳಿಸಿ, ಇದರಲ್ಲಿರುವ ಸಭಾಂಗಣವನ್ನು ಪುರಭವನಕ್ಕಿಂತಲೂ ಅತಿ ಕಡಿಮೆ ಬಾಡಿಗೆಗೆ ಕಲಾಸಕ್ತರಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಉಮಾನಾಥ ಕೋಟ್ಯಾನ್‌ ಮಾತನಾಡಿ, ತುಳುಭವನ ಕಾಮಗಾರಿ ಶೇ.40ರಷ್ಟು ಬಾಕಿ ಉಳಿದಿದ್ದು, ಇನ್ನೂ 3-4 ಕೋಟಿ ರೂ. ಅನುದಾನದ ಅಗತ್ಯವಿದೆ. ಅದರ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದರು.

ಶಾಸಕ ರಾಜೇಶ್‌ ನಾೖಕ್‌, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್‌, ಮಾಜಿ ಅಧ್ಯಕ್ಷ ವಾಮನ ನಂದಾವರ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಅಕಾಡೆಮಿಯ ನೂತನ ಸದಸ್ಯರು ಇದ್ದರು. ಕಳೆದ ಅವಧಿಯಲ್ಲಿಪ್ರಕಟಿಸಿದ 7 ಪುಸ್ತಕಗಳನ್ನು ಇದೇ ಸಂದರ್ಭ ಬಿಡುಗಡೆಗೊಳಿಸಲಾಯಿತು.

ತುಳು ಸಾಂಪ್ರದಾಯಿಕ ಉಡುಗೆ ಕೌಂಟರ್‌

ಕಾಶ್ಮೀರ ಮತ್ತಿತರ ಕಡೆಗಳಿಗೆ ಹೋದರೆ ಅಲ್ಲಿನ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸುವಂತೆಯೇ ದೇಶ, ವಿದೇಶಗಳ ಪ್ರವಾಸಿಗರು ತುಳುನಾಡಿಗೆ ಬರುವಾಗ ಇಲ್ಲಿನ ಉಡುಗೆ ತೊಟ್ಟು ಸಂಭ್ರಮಿಸುವಂತಾಗಬೇಕು. ಅದಕ್ಕಾಗಿ ಬಸ್‌, ರೈಲ್ವೆ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿಮುಟ್ಟಾಳೆ, ಕೊರಂಬು ಇತ್ಯಾದಿಗಳನ್ನೊಳಗೊಂಡಂತೆ ಸಾಂಪ್ರದಾಯಿಕ ಉಡುಗೆಗಳುಳ್ಳ ಕೌಂಟರ್‌ ತೆರೆಯಲಾಗುವುದು ಎಂದು ತುಳು ಅಕಾಡೆಮಿ ನೂತನ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್‌ ತಿಳಿಸಿದ್ದಾರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ